ಜೆಎಸ್‌ಎಸ್‌ ಆಸ್ಪತ್ರೆಯಿಂದ ಇಎಸ್‌ಐ ಆಸ್ಪತ್ರೆಗೆ ವಿದ್ಯುತ್‌ ಚಾಲಿತ ವಾಹನ ಕೊಡುಗೆ

| Published : Nov 25 2024, 01:05 AM IST

ಜೆಎಸ್‌ಎಸ್‌ ಆಸ್ಪತ್ರೆಯಿಂದ ಇಎಸ್‌ಐ ಆಸ್ಪತ್ರೆಗೆ ವಿದ್ಯುತ್‌ ಚಾಲಿತ ವಾಹನ ಕೊಡುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

----ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಶ್ರೀ ಸುತ್ತೂರು ಮಠದಲ್ಲಿ ಭಾನುವಾರ ಜೆಎಸ್‌ಎಸ್‌ ಆಸ್ಪತ್ರೆಯಿಂದ ಇಎಸ್‌ಐ ಆಸ್ಪತ್ರೆಗೆ ವಿದ್ಯುತ್‌ ಚಾಲಿತ (ಬಗ್ಗಿ) ವಾಹನವನ್ನು ಕೊಡುಗೆಯಾಗಿ ನೀಡಲಾಯಿತು.

ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಯ ನಿರ್ದೇಶಕ ಡಾ.ವಿ. ವರದರಾಜ್‌ ಅವರಿಗೆ ವಾಹನವನ್ನು ಹಸ್ತಾಂತರಿಸಿದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್, ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್. ಮಹೇಶ್, ಜೆಎಸ್‌ಎಸ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷ ಡಾ.ಸಿ.ಪಿ. ಮಧು, ಇಎಸ್‌ಐ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎಚ್.ಎನ್. ಶಿವಕುಮಾರ್, ಉಪ ಅಧೀಕ್ಷಕಿ ಡಾ. ಜಯಶ್ರೀ, ವೈದ್ಯರಾದ ಡಾ. ಚಂದ್ರಹಾಸ್, ಸ್ಥಾನೀಯ ವೈದ್ಯಾಧಿಕಾರಿ ಡಾ. ಚಂದ್ರಕಲಾ ಮೊದಲಾದವರು ಇದ್ದರು.