ಕಳಲುಘಟ್ಟ ಗ್ರಾಪಂ ಉಪಾಧ್ಯಕ್ಷ ನರಸಿಂಹಮೂರ್ತಿ

| Published : Jun 17 2025, 02:56 AM IST / Updated: Jun 17 2025, 02:57 AM IST

ಸಾರಾಂಶ

ದಾಬಸ್‍ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಕಳಲುಘಟ್ಟ ಗ್ರಾಮ ಪಂಚಾಯಿತಿಗೆ ನೂತನ ಉಪಾಧ್ಯಕ್ಷರಾಗಿ ಕೋಡಿಹಳ್ಳಿ ನರಸಿಂಹಮೂರ್ತಿ ಅವಿರೋಧ ಆಯ್ಕೆಯಾಗಿದ್ದಾರೆ.

ದಾಬಸ್‍ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಕಳಲುಘಟ್ಟ ಗ್ರಾಮ ಪಂಚಾಯಿತಿಗೆ ನೂತನ ಉಪಾಧ್ಯಕ್ಷರಾಗಿ ಕೋಡಿಹಳ್ಳಿ ನರಸಿಂಹಮೂರ್ತಿ ಅವಿರೋಧ ಆಯ್ಕೆಯಾಗಿದ್ದಾರೆ.

ನೂತನ ಉಪಾಧ್ಯಕ್ಷ ಕೋಡಿಹಳ್ಳಿ ನರಸಿಂಹಮೂರ್ತಿ ಮಾತನಾಡಿ, ಎಲ್ಲಾ ಸದಸ್ಯರ ಬೆಂಬಲ, ಶಾಸಕ ಎನ್.ಶ್ರೀನಿವಾಸ್ ಹಾಗೂ ಕಾಂಗ್ರೆಸ್ ಮುಖಂಡರ ಸಹಕಾರದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದು, ಎಲ್ಲಾ ಸದಸ್ಯರನ್ನು ಒಟ್ಟಿಗೆ ಕರೆದೊಯ್ಯುವ ಜೊತೆಗೆ ಮುಂದಿನ ದಿನಗಳಲ್ಲಿ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗೆ ಅಧ್ಯಕ್ಷರ ಜೊತೆಗೂಡಿ ಶ್ರಮಿಸುತ್ತೇನೆ ಎಂದರು.

ವಕೀಲ ಹನುಮಂತೇಗೌಡ್ರು ಮಾತನಾಡಿ, ಕಳಲುಘಟ್ಟ ಗ್ರಾಪಂನಲ್ಲಿ ನಮ್ಮ ಪಕ್ಷದ ಮುಖಂಡರು ಹಾಗೂ ಎಲ್ಲ ಸದಸ್ಯರು ಚರ್ಚಿಸಿ ಚುನಾವಣಾ ವೆಚ್ಚದ ಪೋಲು ಮಾಡದೇ ಒಮ್ಮತದಿಂದ ಚರ್ಚಿಸಿ ಅವಿರೋಧವಾಗಿ ನರಸಿಂಹಮೂರ್ತಿಯನ್ನು ಆಯ್ಕೆ ಮಾಡಿದ್ದಾರೆ ಎಂದರು.

ನೂತನ ಉಪಾಧ್ಯಕ್ಷರನ್ನು ಗ್ರಾಪಂ ಅಧ್ಯಕ್ಷೆ ಸೌಮ್ಯ, ಪಿಡಿಒ ಗೀತಾಮಣಿ, ಸದಸ್ಯರಾದ ಲೋಕೇಶ್, ಗಿರೀಶ್, ನೇತ್ರಾವತಿ, ಶ್ರೀನಿವಾಸ್, ರೇಷ್ಮಾ, ಮಮತಾ, ಆನಂದ್, ಪದ್ಮಾವತಿ, ನರಸಮ್ಮ, ವಿಜಯಕುಮಾರಿ, ಹರೀಶ್, ಮಂಜುಳ, ಹುಚ್ಚಮ್ಮ, ರಂಗೇಗೌಡ, ಕಾರ್ಯದರ್ಶಿ ನಾಚಾರಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್, ಎನ್ ಪಿಎ ಸದಸ್ಯ ಪ್ರಕಾಶ್ ಬಾಬು, ತ್ಯಾಮಗೊಂಡ್ಲು ಗ್ರಾಪಂ ಉಪಾಧ್ಯಕ್ಷ ವಾಸುದೇವ್, ಬಮೂಲ್ ಮಾಜಿ ನಿರ್ದೇಶಕ ಭಾಸ್ಕರ್, ಸದಸ್ಯ ಸೋಮಶೇಖರ್, ಮುಖಂಡರಾದ ಅಂಜನಮೂರ್ತಿ, ಗಂಗಣ್ಣ , ಪಂಚಾಯಿತಿ ಸಿಬ್ಬಂದಿ ಅಭಿನಂದನೆ ಸಲ್ಲಿಸಿ ಶುಭಕೋರಿದರು.

ಪೋಟೋ 1 :

ಕಳಲುಘಟ್ಟ ಗ್ರಾಪಂ ನೂತನ ಉಪಾಧ್ಯಕ್ಷ ಕೋಡಿಹಳ್ಳಿ ನರಸಿಂಹಮೂರ್ತಿ ಅವರನ್ನು ಅಧ್ಯಕ್ಷೆ ಸೌಮ್ಯ, ಪಿಡಿಒ ಗೀತಾಮಣಿ, ಸದಸ್ಯರಾದ ಲೋಕೇಶ್, ಗಿರೀಶ್, ನೇತ್ರಾವತಿ ಇತರರು ಅಭಿನಂದಿಸಿದರು.