ಸಾರಾಂಶ
ನರಗುಂದ: ಕನ್ನಡವನ್ನು ರಾಜ್ಯ ಭಾಷೆಯನ್ನಾಗಿ ಮಾಡಿಕೊಂಡು ಆಡಳಿತವನ್ನು ಮಾಡಿದ ಕನ್ನಡದ ಮೊಟ್ಟಮೊದಲ ರಾಜಮನೆತನ ಕದಂಬರು. ಅವರು ಕನ್ನಡ ನಾಡು- ನುಡಿಗಾಗಿ ಹಾಗೂ ಶಿಲ್ಪಕಲಾ ಪರಂಪರೆಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. 4ನೇ ಶತಮಾನದಲ್ಲಿ ದೊರೆತ ಹಲ್ಮಿಡಿ ಶಾಸನ ಕದಂಬರ ಆಡಳಿತ ಭಾಷೆ ಕನ್ನಡವಾಗಿತ್ತು ಎಂಬುದಕ್ಕೆ ಬಹುದೊಡ್ಡ ಸಾಕ್ಷಿಯಾಗಿದೆ ಎಂದು ಜಕ್ಕಲಿಯ ರವೀಂದ್ರನಾಥ ದೊಡ್ಡಮೇಟಿ ತಿಳಿಸಿದರು.ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ನಡೆದ ಕನ್ನಡ ರಥೋತ್ಸವದ ಅಂಗವಾಗಿ ಕನ್ನಡದ ರಾಜರು ಕನ್ನಡ ತಿಂಗಳು ವಿಶೇಷ ಉಪನ್ಯಾಸ ಮಾಲಿಕೆಯ 1ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಆಡಳಿತಾತ್ಮಕವಾಗಿ ಕನ್ನಡ ಭಾಷೆಗೆ ಭದ್ರ ಬುನಾದಿ ಹಾಕಿದವರು ಕಬಂದರೆಂದರೆ ತಪ್ಪಾಗಲಾರದು. ಆರಂಕುಶವಿಟ್ಟೊಕೊಂಡು ನೆನೆವುದೆನ್ನ ಮನಂ ಬನವಾಸಿ ದೇಶಮಂ ಎಂದು ಆದಿಕವಿ ಪಂಪ ಬನವಾಸಿ ರಾಜ್ಯವನ್ನು ಹಾಡಿ ಹೊಗಳಿದ್ದನ್ನು ನೋಡಿದರೆ ಕದಂಬರ ಕನ್ನಡ ಪ್ರೀತಿ ಎಷ್ಟಿತ್ತೆಂಬುದು ತಿಳಿದುಬರುತ್ತದೆ ಎಂದರು.ಸಾನ್ನಿಧ್ಯ ವಹಿಸಿದ್ದ ಶಾಂತಲಿಂಗ ಶ್ರೀಗಳು ಮಾತನಾಡಿ, ಕನ್ನಡಿಗರ ಮೂಲ ನೆಲೆ ಕಲ್ಪಿಸಿದ ಕಾರಣ ಪುರುಷ ಮಯೂರ ವರ್ಮ ಕದಂಬರಿಂದ ಕನ್ನಡ ಮತ್ತು ಕನ್ನಡಿಗರಿಗೆ ಅಸ್ಮಿತೆ ಬಂತು. ತಾಳಗುಂದ ಸಮೀಪ ಮಯೂರಶರ್ಮ ಹುಟ್ಟಿದ. ಅವರ ಮನೆ ಕದಂಬ ವೃಕ್ಷದ ಬಳಿಯೇ ಇದ್ದ ಕಾರಣ ಅವರನ್ನು ಕದಂಬರು ಎಂದು ಕರೆದರು. ಕರ್ನಾಟಕದ ವಿವಿಧ ಭಾಗಗಳಲ್ಲಿ ಕಲ್ಬರಹಗಳನ್ನು ಮೊಟ್ಟ ಮೊದಲೇ ಕೆತ್ತಿಸಿದ ಕೀರ್ತಿ ಕದಂಬ ರಾಜರಿಗೆ ಸಲ್ಲುತ್ತದೆ. ಕನ್ನಡಿಗರನ್ನು ಒಗ್ಗೂಡಿಸಿ ಕನ್ನಡವನ್ನು ಹುಟ್ಟು ಹಾಕುವಲ್ಲಿ ಕದಂಬರ ಕೊಡುಗೆ ಅಪಾರವಾಗಿದೆ ಎಂದರು.ಈ ವೇಳೆ ಶಿವಯ್ಯ ಹಿರೇಮಠ, ಕಸಾಪ ಅಧ್ಯಕ್ಷ ಪ್ರೊ. ಬಿ.ಸಿ. ಹನುಮಂತಗೌಡ್ರ, ಶಶಾಪ ಅಧ್ಯಕ್ಷ ಎಸ್.ಜಿ. ಮಣ್ಣೂರಮಠ, ಗ್ರಾಪಂ ಅದ್ಯಕ್ಷ ಶರಣಬಸಪ್ಪ ನರಸಾಪೂರ, ಜ್ಞಾನದೇವ ಮನೇನಕೊಪ್ಪ, ಸಾಹಿತ್ಯ ವೇದಿಕೆ ಸದಸ್ಯರಾದ ಮಂಜುನಾಥ ಮೆಣಸಗಿ, ರವಿ ಮೆಣಸಗಿ, ಸೋಮು ಹೊಂಗಲ್, ಸುನೀಲ ಕಳಸದ, ಪ್ರೊ. ಆರ್.ಬಿ. ಚಿನಿವಾಲರ, ಆರ್.ಕೆ. ಐನಾಪೂರ ಇದ್ದರು.
;Resize=(128,128))
;Resize=(128,128))
;Resize=(128,128))