ಕಾರ್ಕಳ: ಡೋಲಾರೋಪಣಾ ಸೇವೆ ವೀಡಿಯೋ ವೈರಲ್‌

| Published : Jan 09 2025, 12:47 AM IST

ಸಾರಾಂಶ

ಲೋಕ ಕಲ್ಯಾಣಕ್ಕಾಗಿ ಕರುವನ್ನು ಡೋಲಾರೋಪಣಾ ಸೇವೆ ನಡೆಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ಕಾರ್ಕಳ: ಲೋಕ ಕಲ್ಯಾಣಕ್ಕಾಗಿ ಕರುವನ್ನು ಡೋಲಾರೋಪಣಾ ಸೇವೆ ನಡೆಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಅಗಿದೆ.

ಕರುವೊಂದನ್ನು ತೊಟ್ಟಿಲಿನಲ್ಲಿ ತೂಗುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಕಾರ್ಕಳ ತಾಲೂಕಾಫೀಸ್ ಬಳಿಯ ಅನಂತಕೃಷ್ಣ ಗೋಶಾಲೆಯಲ್ಲಿ ನಡೆದ ಈ ಡೋಲಾರೋಪಣಾ ಸೇವಾ ಕಾರ್ಯವನ್ನು ರಾಮದಾಸ ಭಟ್ ಹಾಗೂ ಅನಂತಕೃಷ್ಣ ಗೋಶಾಲೆಯ ಮುಖ್ಯಸ್ಥ ಗೋಪಿನಾಥ ಭಟ್ ನೇತೃತ್ವದಲ್ಲಿ ನಡೆದಿದೆ.

ಗೋಪಾಲಕೃಷ್ಣ ಜಪ ಪಠಿಸಿ, ಗೋಪಾಲಕೃಷ್ಣ ಹೋಮದೊಂದಿಗೆ ಕರುವನ್ನು ತೊಟ್ಟಿಲಿಗೆ ಹಾಕಿ, ಹಣ್ಣುಕಾಯಿ ಹರಿವಾಣದೊಂದಿಗೆ ಮಂಗಳಾರತಿ ಮಾಡುವ ವೀಡಿಯೋ ಇದಾಗಿದೆ.

ಲೋಕಾಕಲ್ಯಾಣಾರ್ಥವಾಗಿ, ದೇಶದ ಸುಭಿಕ್ಷೆ, ಇಷ್ಟಾರ್ಥ ಸಿದ್ಧಿ, ದೇವರ ಪ್ರಸನ್ನಕೋಸ್ಕರವಾಗಿ ಈ ಸೇವೆ ನಡೆಸಲಾಗಿದೆ ಎಂದು ಗೋಪಿನಾಥ ಭಟ್ ಮಾಹಿತಿ ನೀಡಿದ್ದಾರೆ.