ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ
ಇಲ್ಲಿನ ಮಣಿಪಾಲ್ ಜ್ಯೂನಿಯರ್ ಕಾಲೇಜಿನ ಮೈದಾನದಲ್ಲಿ ಕರ್ನಾಟಕ ಕ್ರೀಡಾಕೂಟ - 2025ರ ಅರ್ಚರಿಯಲ್ಲಿ 2ನೇ ದಿನ ಭಾನುವಾರವೂ ಬೆಂಗಳೂರಿನ ಬಿಲ್ಗಾರರೇ ಮೇಲುಗೈ ಸಾಧಿಸಿದ್ದಾರೆ. ಮೊದಲ ದಿನ ಶನಿವಾರ ನಡೆದ, ಇಂಡಿಯನ್, ರಿಕರ್ವ್ ಮತ್ತು ಕಂಪೌಂಡ್ ರೌಂಡ್ಗಳಲ್ಲಿ ಬೆಂಗಳೂರಿನ ಆಟಗಾರರು ಹೆಚ್ಚಿನ ಪದಕಗಳನ್ನು ಬಾಚಿಕೊಂಡಿದ್ದರು.ಭಾನುವಾರ ನಡೆದ ಎಲಿಮಿನೇಶನ್ ರೌಂಡ್ನಲ್ಲಿ ಬೆಂಗಳೂರು ಜಿಲ್ಲೆಯ ಕ್ರೀಡಾಪಟುಗಳು 4 ಚಿನ್ನ, 1 ಬೆಳ್ಳಿ, 4 ಕಂಚಿನ ಪಕದಗಳನ್ನು ಗೆದ್ದುಕೊಂಡು ಸರ್ವಾಂಗೀಣ ಶ್ರೇಷ್ಟ ಪ್ರದರ್ಶನವನ್ನು ನೀಡಿದರು.
ಫಲಿತಾಂಶ ಹೀಗಿದೆ:ಪುರುಷರ ವಿಭಾಗ - ಕಂಪೌಂಡ್ ಎಲಿಮಿನೇಶನ್ ರೌಂಡ್: ಚಿನ್ನ ಪ್ರಜ್ವಲ್ ಸೂರ್ಯ (ಬೆಂಗಳೂರು), ಬೆಳ್ಳಿ - ಮನು ಕೆ. (ಚಾಮರಾಜನಗರ), ಕಂಚು - ರಾಜೇಶ್ ಕುಮಾರ್ ಕಂಡುಕುರಿ (ಬೆಂಗಳೂರು).ರಿಕರ್ವ್ ಎಲಿಮಿನೇಶನ್ ರೌಂಡ್: ಚಿನ್ನ - ಭರತ್ ದೀಕ್ಷಿತ್ (ಬೆಂಗಳೂರು), ಬೆಳ್ಳಿ - ಶಿವಕುಮಾರ್ (ಯಾದಗಿರಿ), ಕಂಚು - ಎಂ.ಸುಭಾಷ್ (ಬೆಂಗಳೂರು).ಇಂಡಿಯನ್ ಎಲಿಮಿನೇಶನ್ ರೌಂಡ್: ಚಿನ್ನ - ಮಲ್ಲಿಕಾರ್ಜುನ (ಯಾದಗಿರಿ), ಬೆಳ್ಳಿ - ರಘು (ಯಾದಗಿರಿ), ಕಂಚು - ಅಮಿತ್ ಜಯಂತ್ ಗೌಡ (ಉತ್ತರಕನ್ನಡ).ಮಹಿಳೆಯರ ವಿಭಾಗ- ಇಂಡಿಯನ್ ಎಲಿಮಿನೇಶನ್ ರೌಂಡ್: ಚಿನ್ನ - ಶೋಭಾ ಎಲ್.ಡಿ. (ಬೆಂಗಳೂರು), ಬೆಳ್ಳಿ - ದೇವಮ್ಮ (ಯಾದಗಿರಿ), ಕಂಚು - ಪ್ರೇಮಾ ಯು. (ಬೆಂಗಳೂರು).ಕಂಪೌಂಡ್ ಎಲಿಮಿನೇಶನ್ ರೌಂಡ್: ಚಿನ್ನ - ಅಶ್ಮಿತಾ ಕೇಶವ್ (ಬೆಂಗಳೂರು), ಬೆಳ್ಳಿ - ಸಿಂಚನ ಜಿ. (ಬೆಂಗಳೂರು), ಕಂಚು - ಚೈತ್ರಾ ಟಿ. (ಬೆಂಗಳೂರು).