ಕಟೀಲು ಯಕ್ಷ ಸಪ್ತಾಹ, ಮೇಳಗಳ ವೇಷಗಳ ಛಾಯಾಚಿತ್ರ ಪ್ರದರ್ಶನ

| Published : Nov 19 2025, 01:45 AM IST

ಕಟೀಲು ಯಕ್ಷ ಸಪ್ತಾಹ, ಮೇಳಗಳ ವೇಷಗಳ ಛಾಯಾಚಿತ್ರ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಏಳನೇಯ ಮೇಳದ ಪಾದಾರ್ಪಣೆ ಹಾಗೂ ಮೇಳಗಳ ತಿರುಗಾಟದ ಅಂಗವಾಗಿ ನಡೆಯುತ್ತಿರುವ ಯಕ್ಷ ಸಪ್ತಾಹ ಪ್ರಯುಕ್ತ ಕಟೀಲು ಮೇಳಗಳ ಕಲಾವಿದರ ವೇಷಗಳ ಛಾಯಾಚಿತ್ರಗಳ ಪ್ರದರ್ಶನ ನೆರವೇರಿತು.

ಮೂಲ್ಕಿ: ಕಟೀಲು ಮೇಳಗಳು ಗಿನ್ನಿಸ್ ದಾಖಲೆ ಮಾಡುವಷ್ಟು ದೇವಿ ಮಹಾತ್ಮ್ಯೆಯನ್ನು ಪ್ರದರ್ಶಿಸುತ್ತಿದ್ದು ಎಲ್ಲ ಸೇವೆಗಳನ್ನು ನಾವು ಕಟೀಲು ದೇವಸ್ಥಾನಕ್ಕೆ ಬಂದು ಮಾಡಬೇಕು. ಆದರೆ ಯಕ್ಷಗಾನವು ಕಟೀಲಮ್ಮ ಮನೆಗೇ ಬಂದು ಪಡೆಯುವ ಸೇವೆಯಾಗಿದೆ. ಕಲಾವಿದರ ಛಾಯಾಚಿತ್ರಗಳು ವೈವಿಧ್ಯಮಯ ವೇಷಗಳನ್ನು, ಕಾಲಾಂತರದಲ್ಲಿ ಬದಲಾಗುತ್ತ ಬಂದ ಯಕ್ಷಗಾನದ ವೇಷಗಳ ಕುರಿತು ಪರಿಚಯವನ್ನು ಮಾಡಿಕೊಡುತ್ತವೆ ಎಂದು ಉದ್ಯಮಿ ಅಗರಿ ರಾಘವೇಂದ್ರ ರಾವ್ ಹೇಳಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಏಳನೇಯ ಮೇಳದ ಪಾದಾರ್ಪಣೆ ಹಾಗೂ ಮೇಳಗಳ ತಿರುಗಾಟದ ಅಂಗವಾಗಿ ನಡೆಯುತ್ತಿರುವ ಯಕ್ಷ ಸಪ್ತಾಹದ ಆರನೇಯ ದಿನ ಸರಸ್ವತೀ ಸದನದಲ್ಲಿ ನಡೆದ ಕಟೀಲು ಮೇಳಗಳ ಕಲಾವಿದರ ವೇಷಗಳ ಛಾಯಾಚಿತ್ರಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ ಈ ಛಾಯಾಚಿತ್ರಗಳು ಅಧ್ಯಯನ ಯೋಗ್ಯವಾಗಿದ್ದು, ಮೇಳಗಳ ದಾಖಲೀಕರಣದ ಹಿನ್ನಲೆಯಲ್ಲಿ ಇನ್ನಷ್ಟು ಫೋಟೋಗಳನ್ನು, ಕರಪತ್ರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರು.

ಅರ್ಚಕ ಶ್ರೀಕರ ಆಸ್ರಣ್ಣ, ಖ್ಯಾತ ಛಾಯಾಗ್ರಾಹಕ ಮನೋಹರ ಕುಂದರ್, ಪೃಥ್ವೀರಾಜ ಆಚಾರ್ಯ, ಗಣೇಶ ಶೆಟ್ಟಿ ಐಕಳ, ಸಿತ್ಲ ದಿವಾಕರ ರಾವ್, ರಾಮದಾಸ ಕಾಮತ್, ಗಂಗಾಧರ ಸಾಲ್ಯಾನ್, ವೆಂಕಟೇಶ ಉಡುಪ, ನವೀನ್‌ಕುಮಾರ್ ಕಟೀಲ್, ಗಣೇಶ್ ಆಚಾರ್ಯ, ಸೀತಾರಾಮ ಶೆಟ್ಟಿ, ರಾಮಚಂದ್ರ ಮಿಜಾರು, ಅಜಾರು ವಿಜಯ ಶೆಟ್ಟಿ, ಉದಯ ಮೂಲ್ಯ, ವಾಸುದೇವ ನಾಯಕ್, ವರದರಾಯ ಪ್ರಭು, ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ ಮತ್ತಿತರರಿದ್ದರು.