ಕೇಕುಮಾನಿ ಶ್ರೀ ಭಗವತಿ ದೇವಸ್ಥಾನದ ಉತ್ಸವ ಸಂಪನ್ನ

| Published : Jun 08 2025, 01:21 AM IST / Updated: Jun 08 2025, 01:22 AM IST

ಸಾರಾಂಶ

ಮರದೋಡ ಗ್ರಾಮದ ಕೇಕುಮಾನಿ ಶ್ರೀ ಭಗವತಿ ದೇವಸ್ಥಾನದ ಭದ್ರಕಾಳಿ, ವಿಷ್ಣುಮೂರ್ತಿಯ ದೊಡ್ಡ ಪಟ್ಟಣಿ ಉತ್ಸವ ಸಂಪನ್ನಗೊಂಡಿತು.

ನಾಪೋಕ್ಲು: ಇಲ್ಲಿಗೆ ಸಮೀಪದ ಮರದೋಡ ಗ್ರಾಮದ ಕೇಕುಮಾನಿ ಶ್ರೀ ಭಗವತಿ ದೇವಸ್ಥಾನದ ಭದ್ರಕಾಳಿ, ವಿಷ್ಣುಮೂರ್ತಿಯ ದೊಡ್ಡ ಪಟ್ಟಣಿ ಉತ್ಸವವು ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡಿತ್ತು.

ಉತ್ಸವದ ಅಂಗವಾಗಿ ಊರಿನ 13 ಕುಟುಂಬದ ದೊಡ್ಡ ಮನೆಯಿಂದ ಕಲಿಯಪಾತ್ರೆ ಇಳಿಯುವುದು ಬಳಿಕ ಎತ್ತು ಪೋರಾಟ ದೇವಸ್ಥಾನಕ್ಕೆ ಆಗಮಿಸಿ ನಂತರ ಬಾಳೋ ಪಾಟ್ , ಬೊಳಕಾಟ್ ನೆರವೇರಿತು.

ಬೆಳಗ್ಗೆ ಸಾರ್ಥವು ಅಯ್ಯಪ್ಪ, ಅಜ್ಜಪ್ಪ ದೇವರ ಕೋಲಾಟವು ನಡೆದ ಬಳಿಕ ಭದ್ರಕಾಳಿ ಹಾಗೂ ಪಡಮಾಳಿ ದೇವರ ಕೋಲ ತಿರುಮುಡಿ ಶ್ರೀ ಭಗವತಿ ದೇವಸ್ಥಾನದವರೆಗೆ ತೆರಳಿ ಮೂಲ ಸ್ಥಾನಕ್ಕೆ ಹಿಂತಿರುಗಿದ ಬಳಿಕ ಭಕ್ತಾದಿಗಳು ಹರಕೆ ಕಾಣಿಕೆ ಒಪ್ಪಿಸಿ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭ ಆಡಳಿತ ಮಂಡಳಿಯವರು, ತಕ್ಕ ಮುಖ್ಯಸ್ಥರು ಹಾಗೂ ಊರ ಹಾಗೂ ಪರ ಊರಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವರ ಉತ್ಸವದಲ್ಲಿ ಪಾಲ್ಗೊಂಡಿದ್ದರು.