ಸಾರಾಂಶ
ತಾಲೂಕಿನ ಕೊಡದೂರ ಗ್ರಾಮದ ಹಾದಿಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಮುಕ್ತಾಯ ಸಮಾರಂಭದ ಪ್ರಯುಕ್ತ ಭಕ್ತರು ಸಂಭ್ರಮ ಸಡಗರದಿಂದ ಖಾಂಡ ಉತ್ಸವ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಕಾಳಗಿ
ತಾಲೂಕಿನ ಕೊಡದೂರ ಗ್ರಾಮದ ಹಾದಿಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಮುಕ್ತಾಯ ಸಮಾರಂಭದ ಪ್ರಯುಕ್ತ ಭಕ್ತರು ಸಂಭ್ರಮ ಸಡಗರದಿಂದ ಖಾಂಡ ಉತ್ಸವ ನೆರವೇರಿಸಿದರು.ಹಿರೇಮಠದ ರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಅಭಿಷೇಕ, ಪೂಜಾ ಕೈಂಕರ್ಯ ನೆರವೇರಿಸಿದರು.
ಭಕ್ತರು ಕಾಯಿ, ಕರ್ಪೂರ, ನೈವೇದ್ಯ ಸಮರ್ಪಿಸಿ ಹಾದಿ ಬಸವೇಶ್ವರ ದೇವರ ಆರ್ಶಿವಾದ ಪಡೆದರು.ಇದೆ ಸಂದರ್ಭದಲ್ಲಿ ದೇವಸ್ಥಾನದ ಎಸುರುಗಡೆ ಬಸವೇಶ್ವರ ಧ್ವಜ ಸ್ತಂಭವು ನೆಡಲಾಯಿತು.
ಹಿರಿಯರಾದ ಡಾ.ಶಿವಾನಂದ ಮಜ್ಜಿಗೆ, ಸಿದ್ದಯ್ಯ ಹಳ್ಳಿ, ಭೀಮಾಶಂಕರ ಮಾಲಿಪಾಟೀಲ, ಸಿದ್ದಣ್ಣಗೌಡ ಪೋಪಾಟೀಲ, ಶ್ರೀನಿವಾಸ ಕುಲಕರ್ಣಿ, ಶೇಖರ ರಾಜಾಪೂರ, ಪ್ರಕಾಶ ಮೇಲ್ಕೆರಿ, ಪ್ರಶಾಂತ ರಾಜಾಪೂರ, ಗಣಪತಿ ಹಾಳಕಾಯಿ, ಆನಂದ ಮಂಗೊಂಡ, ಮಡಿವಾಳ ಗುಂಡಗುರ್ತಿ, ಚಂದ್ರಕಾಂತ ಈಶ್ವರಗೊಂಡ, ದೇವಸ್ಥಾನದ ಸಮಿತಿಯ ಪ್ರಮುಖ ಶರಣಪ್ಪ ಗದ್ದಿ, ಸದಸ್ಯರಾದ ಶರಣಪ್ಪ ಹಡಪಾದ, ಬಾಬುರಾವ ಹಿಪ್ಪರಗಿ, ಅಶೋಕ ತಾಂಡೂರ, ಶರಪ್ಪ ನಾಗೂರ, ಜಗದೀಶ್ ಯಡಗಿ, ಹಣಮಂತ ಸರಡಗಿ, ಕಾಶೀನಾಥ ಗುಂಡಗುರ್ತಿ,ಶರಣಪ್ಪ ಯಡಗಿ, ಬಸವರಾಜ ರಾಜಾಪೂರ, ರೇವಣಸಿದ್ದ ಪಸ್ಪೂರ, ಬಸವರಾಜ ವಟವಟಿ, ಬಂಡಪ್ಪ ಗದ್ದಿ, ಬಸವರಾಜ ಗದ್ದಿ, ಅಡುಗೆ ಸಹಾಯಕಿ ಶಾಂತಬಾಯಿ ಗೂಂಡಗೂರ್ತಿ, ಸಿದ್ದಣ್ಣ ಸಜ್ಜನಶೆಟ್ಟಿ, ಸಿದ್ದಮ್ಮ ಹಳ್ಳಿ, ವಾಲೀಕಾರ ಮಲ್ಲಪ್ಪ ಹಾವಗೊಳ, ಭರತ ಮೂಲಿಮನಿ, ತಿಪ್ಪಣ್ಣ ಮೂಲಿಮನಿ ಇದ್ದರು.