ಕೋಲಾರ ನಗರಸಭೆಗೆ ₹ ೧.೪೬ ಕೋಟಿ ಉಳಿತಾಯ ಬಜೆಟ್‌

| Published : Mar 30 2025, 03:00 AM IST

ಸಾರಾಂಶ

ಕೋಲಾರ ನಗರಸಭೆ ಬಜೆಟ್‌ ಸಭೆ ಪ್ರಾರಂಭವಾದ ೪೫ ನಿಮಿಷಗಳಲ್ಲೇ ಪೂರ್ಣಗೊಂಡಿತು. ಆಯವ್ಯಯದ ಬಗ್ಗೆ ಸದಸ್ಯರು ಯಾವುದೇ ರೀತಿ ಚರ್ಚಿಸದೆ ಅನುಮೋದನೆಗೆ ಸಮ್ಮತಿ ಸೂಚಿಸಿದರು, ಶೇಕಡ ಅರ್ಧದಷ್ಟು ಸದಸ್ಯರ ಗೈರು ಹಾಜರಾಗಿದ್ದರು. ನಗರದ ಅಭಿವೃದ್ಧಿಗೆ ಹಲವಾಪು ಯೋಜನೆಗಳು ಮತ್ತು ಕಾಮಗಾರಿಗಳ ಬಗ್ಗೆ ಬಜೆಟ್‌ನಲ್ಲಿ ವಿವರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರಕೋಲಾರ ನಗರಸಭೆಯ ೨೦೨೫-೨೬ನೇ ಸಾಲಿನ ಆಯವ್ಯಯ ಅಂದಾಜು ಪಟ್ಟಿ ನಿಯಮಾನುಸಾರ ಕಾಯ್ದೆ ೨೦೦ರ ಪ್ರಕರಣ ಕಾಯ್ದೆ ೧೩೨(೨)ರ ಪ್ರಕಾರ ಸಿದ್ಧಪಡಿಸಿರುವುದನ್ನು ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ೧.೪೬.ಕೋಟಿ ರು. ಉಳಿತಾಯದ ಬಜೆಟ್ ಮಂಡಿಸಿದರು.ನಗರಸಭೆ ಕಾರ್ಯಾಲಯದಲ್ಲಿ ಆಯ-ವ್ಯಯ ಮಂಡನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ೩೧-೩-೨೦೨೫ಕ್ಕೆ ಅಖೈರು ಶಿಲ್ಕು ೧೩,೩೭,೧೧,೭೨೬ ರೂ, ನಿರೀಕ್ಷಿತ ಆದಾಯ ೨೦೨೫-೨೬ನೇ ಸಾಲಿಗೆ ೧೧೬,೬೩,೫೬,೦೦೦ ರು. ಸೇರಿದಂತೆ ಒಟ್ಟು ೧೩೦,೦೦,೬೭,೭೨೬ ರು.ಗಳಾಗಿದ್ದು, ನಿರೀಕ್ಷಿತ ಖರ್ಚು ೧೨೮,೫೩,೭೦,೦೦೦ ರು.ಗಳಾಗಿದ್ದು, ೧,೪೬,೯೭,೭೨೬ ರು. ಉಳಿತಾಯ ನಿರೀಕ್ಷಿಸಲಾಗಿದೆ ಎಂದರು.ನಗರಸಭೆಗೆ ಆದಾಯ ಮೂಲ ಆಸ್ತಿ ತೆರಿಗೆ ೯,೯೮,೪೦,೦೦೦ ರು, ಜಾಹಿರಾತು ತೆರಿಗೆ ೮,೫೦,೦೦೦ ರು, ನೀರಿನ ಬಳಕೆದಾರರ ಶುಲ್ಕ ೧,೦೫,೦೦,೦೦೦ ರು, ಒಳ ಚರಂಡಿ ಬಳಕೆದಾರರ ಮತ್ತು ಸಂರ್ಪಕ ಫೀ ೩೨,೦೦,೦೦೦ ರು, ಘನ ತ್ಯಾಜ್ಯ ನಿರ್ವಹಣೆ ಫೀ ೯೦,೦೦,೦೦೦ ರು, ಮಳಿಗೆ ಬಾಡಿಗೆಯಿಂದ ೬೬,೧೦,೦೦೦ ರು, ಅಭಿವೃದ್ಧ ಕರದಿಂದ ೧೦,೦೦,೦೦೦ ರು, ಕಟ್ಟಡ ಪರವಾನಗಿ ಶುಲ್ಕದಿಂದ ೬೫,೦೦,೦೦೦ ರು, ಕಟ್ಟಡ ಪರವಾನಗಿ ಶುಲ್ಕದಿಂದ ೬೫,೦೦,೦೦೦ ರು, ಮಾರು ಕಟ್ಟೆ,ಬಸ್ ಸ್ಟಾಂಡ್ ಮತ್ತು ಸಂತೆ ಶುಲ್ಕದಿಂದ ೨೦,೦೦,೦೦೦ ರು, ಲೈಸನ್ಸ್, ಫೀಯಿಂದ ೫೫,೦೦,೦೦೦ ರು. ಇತರೆ, ವಸೂಲಿ ೫,೦೧,೦೫,೦೦೦ ರು ಸೇರಿದಂತೆ ಒಟ್ಟು ನಿರೀಕ್ಷೆ ೧೯,೫೧,೦೫,೦೦೦ ರು.ಗಳಾಗಿದೆ.ಬಜೆಟ್‌ಗೆ ಅನುಮೋದನೆ

ನಗರಸಭೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ೧,೩೦,೦೦,೬೭,೭೨೬ ರು.ಗಳ ಅನುದಾನ ದೊರೆಯುವ ನಿರೀಕ್ಷೆ ಇದೆ, ಒಟ್ಟು ಆದಾಯದಲ್ಲಿ ವಿವಿಧ ಯೋಜನೆಗಳು ಕಾಮಗಾರಿಗಳಿಗೆ ಒಟ್ಟು ೧,೨೮,೫೩,೭೦,೦೦೦ ರು.ಗಳನ್ನು ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಅಧ್ಯಕ್ಷೆ ಲಕ್ಷ್ಮೀದೇವಮ್ಮರ ಬಜೆಟ್ ಮಂಡನೆಗೆ ಹಾಜರಿದ್ದ ಎಲ್ಲಾ ಸದಸ್ಯರು ತಮ್ಮ ಅನುಮೋದನೆ ವ್ಯಕ್ತಪಡಿಸಿದರು,

ಚರ್ಚೆ ಇಲ್ಲದೆ ಅನುಮೋದನೆ

ಸಭೆ ಪ್ರಾರಂಭವಾದ ೪೫ ನಿಮಿಷಗಳಲ್ಲೇ ಪೂರ್ಣಗೊಂಡಿತು. ಆಯವ್ಯಯದ ಬಗ್ಗೆ ಸದಸ್ಯರು ಯಾವುದೇ ರೀತಿ ಚರ್ಚಿಸದೆ ಅನುಮೋದನೆಗೆ ಸಮ್ಮತಿ ಸೂಚಿಸಿದರು, ಶೇಕಡ ಅರ್ಧದಷ್ಟು ಸದಸ್ಯರ ಗೈರು ಹಾಜರಾಗಿದ್ದರು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಸಂಗೀತಾ ಜಗದೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪೈರೋಜ್ ಖಾನ್, ಇ.ಇ ಗಂಗಾದರ್, ಕಂದಾಯಾಧಿಕಾರಿ ವೇಣುಗೋಪಾಲ್ ನಾಯಕ್, ನಗರಸಭೆ ಸದಸ್ಯರಾದ ಅಂಬರೀಶ್, ಮಂಜುನಾಥ್, ಅಪ್ಸರ್, ಗೊಡ್, ವಿ.ಮಂಜುನಾಥ್, ನಾಜೀಯಾ ಬೇಗಂ. ಸುರೇಶ್ ಇದ್ದರು. ಜೆ.ಇ ಶ್ರೀನಿವಾಸ್ ಸ್ವಾಗತಿಸಿದರು.