ಸರ್ವತೋಮುಖ ಬೆಳವಣಿಗೆಗೆ ಕೊಪ್ಪಳ ವಿವಿ ಸನ್ನದ್ಧ: ಕುಲಪತಿ ಪ್ರೊ. ಕೆ.ಎಂ. ಮೇತ್ರಿ

| Published : Mar 20 2024, 01:23 AM IST

ಸರ್ವತೋಮುಖ ಬೆಳವಣಿಗೆಗೆ ಕೊಪ್ಪಳ ವಿವಿ ಸನ್ನದ್ಧ: ಕುಲಪತಿ ಪ್ರೊ. ಕೆ.ಎಂ. ಮೇತ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯನಗರ -ಕೊಪ್ಪಳ ಕನ್ನಡ ನಾಡಿಗೆ ವಿಶೇಷ ನೆರವಾಗಿದೆ. ಇಲ್ಲಿನ ಸಾಮ್ರಾಟ್ ಅಶೋಕನ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ.

ಪ್ರಥಮ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿದ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಕುಲಪತಿಕನ್ನಡಪ್ರಭ ವಾರ್ತೆ ಕೊಪ್ಪಳ

ವಿಜಯನಗರ -ಕೊಪ್ಪಳ ಕನ್ನಡ ನಾಡಿಗೆ ವಿಶೇಷ ನೆರವಾಗಿದೆ. ಇಲ್ಲಿನ ಸಾಮ್ರಾಟ್ ಅಶೋಕನ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಧರ್ಮ ಜ್ಞಾನ ಕೇಂದ್ರಗಳು ಆಶ್ರಯಿಸಿ, ಧರ್ಮವನ್ನು ಬಿತ್ತುತ್ತಿದ್ದಾರೆ. ಕೊಪ್ಪಳವು ಚಾರಿತ್ರಿಕ ಹಿನ್ನೆಲೆ ಹೊಂದಿದೆ ಎಂದು ‌ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಎಂ. ಮೇತ್ರಿ ಹೇಳಿದರು.

ಕೊಪ್ಪಳ ವಿಶ್ವ ವಿದ್ಯಾಲಯದಲ್ಲಿ ಮಂಗಳವಾರ ಪ್ರಥಮ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೊಪ್ಪಳ ಸಹ ಕನ್ನಡಕ್ಕೆ ವಿಶೇಷ ಸ್ಥಾನಮಾನ ನೀಡಿದ ಭೂಮಿಯಾಗಿದೆ. ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಹಾಗಾಗಿ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುನ್ನುಗ್ಗಲು ಹಾಗೂ ಈ ಭಾಗದ ಸರ್ವತೋಮುಖ ಬೆಳವಣಿಗೆಗೆ ಕೊಪ್ಪಳ ವಿಶ್ವ ವಿದ್ಯಾಲಯದ ಸನ್ನದ್ಧವಾಗಿದೆ. ಈ ಭಾಗದ ಶಿಕ್ಷಣ ಇನ್ನಷ್ಟು ಬೆಳವಣಿಗೆಯಾಗಲಿ ಎಂದರು.

ಗದುಗಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಷ್ಣುಕಾಂತ್ ಎಸ್. ಚಟಪಲ್ಲಿ ಮಾತನಾಡಿ, ಕೊಪ್ಪಳ ವಿಶ್ವ ವಿದ್ಯಾಲಯದಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಗಲಿ ಎಂದರು.

ಗೊಟಗೋಡಿ, ಶಿಗ್ಗಾಂವಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಮಾತನಾಡಿ, ಸಂವಿಧಾನ ಆಶಯವನ್ನು ಜಾರಿಗೆ ತರುವ ಕೆಲಸವಾಗಬೇಕು. ಸಂವಿಧಾನ ಆಶಯದಂತೆ ನಾವೆಲ್ಲರೂ ನಡೆಯೋಣ ಎಂದರು.

ಹಾವೇರಿ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಸುರೇಶ ಎಚ್.‌ ಜಂಗಮಶೆಟ್ಟಿ ಮಾತನಾಡಿ, ದೇಶದಲ್ಲಿ ಕೊಪ್ಪಳ ವಿಶ್ವ ವಿದ್ಯಾಲಯ ಉತ್ತುಂಗಕ್ಕೆ ಏರಬೇಕು. ವಿಶ್ವ ವಿದ್ಯಾಲಯದ ಉದ್ದೇಶ ಈಡೇರಲಿ ಎಂದರು.

ಬೀದರ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಬಿ.ಎಸ್. ಬಿರಾದಾರ ಮಾತನಾಡಿ, ಜಿಲ್ಲೆಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ವಿಶ್ವ ವಿದ್ಯಾಲಯ ಸ್ಥಾಪನೆಯಾಗಿದೆ. ಹೊಸ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಶಿಕ್ಷಣದ ಜತೆಗೆ ಉದ್ದೇಶ ಕೌಶಲ್ಯಭರಿತ ಕೋರ್ಸುಗಳನ್ನು ಪ್ರಾರಂಭಿಸಿ ಆ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದರು.

ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರು ಮಾತನಾಡಿ, ಈ ಭಾಗವು ಕಲ್ಯಾಣ ಕರ್ನಾಟಕ ಸಂತ ಮಹಾಂತರ ನಾಡಗಿದೆ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅತ್ಯುತ್ತಮವಾದ ಬೀಜ ಬಿತ್ತುವ ಮೂಲಕ ಕಳೆ, ಕಸವನ್ನೂ ಕಿತ್ತು ತೆಗೆದು, ಸಮೃದ್ಧಿಯ ನಾಗರಿಕರಾಗಿ ರೂಪಿಸುವ ಕನಸು ವಿಶ್ವ ವಿದ್ಯಾಲಯದ ಹೊಂದಿದೆ. ಇಲ್ಲಿರುವ ವಿದ್ಯಾರ್ಥಿಗಳು ನಾಡಿನ ಸಂತರು, ಜ್ಞಾನಿಗಳು, ಪಂಡಿತರು, ದೇಶವನ್ನು ಆಳುವ ನಾಗರಿಕರಾಗಲು ಇಲ್ಲಿನ ಪ್ರಾಧ್ಯಾಪಕರು ಹಾಗೂ ಶಿಕ್ಷಕರು ಶ್ರಮಿಸಬೇಕು ಎಂದರು.

ಹಾಸನ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ತರಿಕೇರಿ ಸಿ. ತಾರಾನಾಥ ಮಾತನಾಡಿ, ಕೊಪ್ಪಳ ನಾಡು ಕಲ್ಯಾಣ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದಿದೆ. ಜ್ಞಾನ ಎಲ್ಲರಿಗೂ ಸಿಗಬೇಕು. ಮನುಷ್ಯನ ಕ್ರಿಯೆಗೆ ಸೂರ್ಯನ ಶಕ್ತಿ ಆಧಾರವಾಗಿದೆ. ವಿಕಾಸದ ಹಾದಿಯಲ್ಲಿ ವಿವಿಧ ಸಂಘರ್ಷವನ್ನು ಎದುರಿಸಿ ಮನುಷ್ಯ ಮುಂದು ವರಿದಿದ್ದಾನೆ. ಮನುಷ್ಯನ ಮಾತ್ರ ಸಂವಹನ ಕಲೆ ಹಾಗೂ ಬುದ್ಧಿ ಶಕ್ತಿ ಇರುವುದು ಎಂದರು.

ಚಾಮರಾಜನಗರ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಎಂ.ಆರ್. ಗಂಗಾಧರ್ ಮಾತನಾಡಿ, ನೂತನ ವಿಶ್ವ ವಿದ್ಯಾಲಯದಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗಿವೆ. ವಿಶೇಷ ಹೆಣ್ಣು ಮಕ್ಕಳನ್ನು ನಗರಗಳಿಗೆ ಉನ್ನತ ಶಿಕ್ಷಣ ಪಡೆಯಲು ಕಳುಹಿಸಲು ಅವರ ಪಾಲಕರು ನಿರಾಕರಿಸುವುದು ಸಹಜ‌ವಾಗಿದೆ. ಆದರೆ ನೂತನ ವಿಶ್ವ ವಿದ್ಯಾಲಯದ ಜಿಲ್ಲೆಯಲ್ಲಿ ಸ್ಥಾಪನೆಯಾಗುವ ಮೂಲಕ ಇಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಹೆಣ್ಣು ಮಕ್ಕಳು ಉನ್ನತ ಶಿಕ್ಷಣದ ಕನಸು ನನಸಾಗಿದೆ ಎಂದರು.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲ ಸಚಿವ ಎಸ್.ಎನ್. ರುದ್ರೇಶ ಮಾತನಾಡಿದರು. ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವರಾದ ಡಾ‌. ಕೆ.ವಿ. ಪ್ರಸಾದ್, ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಡಾ. ಸಿ.ಐ. ಚಲವಾದಿ, ಡಾ. ಪ್ರಕಾಶ ಯಳವಟ್ಟಿ, ಡಾ. ಬಾಜಿ ದೇವೇಂದ್ರಪ್ಪ ಇದ್ದರು.