ಸಾರಾಂಶ
ಆರ್ಪಿ ಕಲಾ ಸೇವಾ ಟ್ರಸ್ಟ್ ಪಾಂಬಾರ್ ವತಿಯಿಂದ ಅಂತಾರಾಜ್ಯ ಮಟ್ಟದ ಗಾನ ಶಾರದೆ ಗಾಯನ ಸ್ಪರ್ಧೆ ಸೀಸನ್ 4 ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವು ಲಯನ್ಸ್ ಸೇವಾ ಮಂದಿರ ಪುತ್ತೂರಲ್ಲಿ ಜೂನ್ 15ರಂದು ನಡೆಯಿತು.
ಪೆರ್ನಾಜೆ: ಆರ್ಪಿ ಕಲಾ ಸೇವಾ ಟ್ರಸ್ಟ್ ಪಾಂಬಾರ್ ವತಿಯಿಂದ ಅಂತಾರಾಜ್ಯ ಮಟ್ಟದ ಗಾನ ಶಾರದೆ ಗಾಯನ ಸ್ಪರ್ಧೆ ಸೀಸನ್ 4 ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವು ಲಯನ್ಸ್ ಸೇವಾ ಮಂದಿರ ಪುತ್ತೂರಲ್ಲಿ ಜೂನ್ 15ರಂದು ನಡೆಯಿತು.
ಆ ವೇದಿಕೆಯಲ್ಲಿ ವಿಶಿಷ್ಟ ವಿಶೇಷ ಬರಹಗಾರ, ಜೇನುಗಡ್ಡ ಸಂಶೋಧನಾ ಬರಹಕ್ಕಾಗಿ ಕುಮಾರ್ ಪೆರ್ನಾಜೆ- ಸೌಮ್ಯ ದಂಪತಿಗೆ ಅಂತಾರಾಜ್ಯ ಮಟ್ಟದ ಕೃಷಿ ರತ್ನ ಪ್ರಶಸ್ತಿಯನ್ನು ಆರ್ಪಿ ಕಲಾ ಸೇವಾ ಟ್ರಸ್ಟ್ ಪಾಂಬರ್ ಸಂಚಾಲಕ ರವಿಪಾಂಬರ್ ಮತ್ತು ಅಧ್ಯಕ್ಷ ಶ್ರೀಧರ್ ಎಕ್ಕಡ್ಕ ಪ್ರದಾನ ಮಾಡಿದರು.ಪೇಟ, ಶಾಲು, ಸ್ಮರಣಿಕೆ, ಅಭಿನಂದನ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಪುಡಾ ಅಧ್ಯಕ್ಷ ರಾಮಚಂದ್ರ ಅಮಳ, ಸದಾನಂದ ಮಾವಾಜಿ, ಪದ್ಮರಾಜ ರಾಜ್, ಬಿಸಿ ಚಾರ್ವಾಕ, ವಿಜಯಕುಮಾರ್ ಸುಳ್ಯ, ರಾಮ ಪಾಂಬಾರು, ಮಮತಾ ಮಡಿಕೇರಿ, ಸನತ್ ಕೆ., ಪ್ರಜ್ವಲ್ ಕೆ., ನವ್ಯ ಕೆ., ಹರೀಶ್ ಪಂಜಿಕಲ್ಲು, ಸಂದೀಪ್ ಅಡ್ಯನಡ್ಕ ಮಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಇತ್ತೀಚೆಗೆ ದಾವಣಗೆರೆಯಲ್ಲಿ ಇಬ್ಬರನ್ನು ಗೌರವಿಸಲಾಗಿದೆ. ಬೆಂಗಳೂರು ವಿಶ್ವ ಹವ್ಯಕ ಸಮ್ಮೇಳನದಲ್ಲಿ ಗಡಿನಾಡ ಧ್ವನಿ ಸಮ್ಮೇಳನದಲ್ಲಿ ಮಧುಭೂಷಣ, ಜಿಲ್ಲಾ ರಾಜ್ಯೋತ್ಸವ, ಶಿವಮೊಗ್ಗ ಬೆಂಗಳೂರು ಸಂಘ ಸೇರಿ ಹಲವಾರು ಸಂಘ ಸಂಸ್ಥೆಗಳು ಗೌರವಿಸಿದ್ದಾರೆ.