ಸಾರಾಂಶ
ಹಿರಿಯರನ್ನು ಗೌರವಿಸುವ ಸಂಸ್ಕೃತಿ ಬೆಳೆಯಲಿ: ಪ್ರಭುಲಿಂಗ
ಕಲಬುರಗಿ: ಸಮಾಜಕ್ಕೆ ಹಿರಿಯರು ಭಾರವಲ್ಲ. ಅವರು ತಮ್ಮಲ್ಲಿರುವ ಹಿರಿತನದ ಜ್ಞಾನ, ಅನುಭವವನ್ನು ಸಮಾಜಕ್ಕೆ ನೀಡಬೇಕು. ಕಿರಿಯರು ಅವರ ಅನುಭವದ ಮಾತು ಆಲಿಸಿ ಮುನ್ನಡೆಯಬೇಕು. ಹಿರಿಯರಿಗೆ ಗೌರವ ನೀಡಿ, ಉತ್ತಮ ಆರೈಕೆ, ಆಶ್ರಯ ನೀಡುವ ಭಾರತೀಯ ಶ್ರೇಷ್ಠ ಸಂಸ್ಕೃತಿ ಉಳಿಸಿಕೊಂಡು ಹೋಗಬೇಕಾಗಿದೆ ಎಂದು ಕಸಾಪ ಉತ್ತರ ವಲಯದ ಅಧ್ಯಕ್ಷ ಪ್ರಭುಲಿಂಗ ಮುಲಗೆ ಹೇಳಿದರು.
ನಗರದ ಶಹಾಬಜಾರ ಕಬಾಡಗಲ್ಲಿ ಚನ್ನಮಲ್ಲೇಶ್ವರ ಪ್ರಾಥಮಿಕ ಶಾಲೆ ಆವರಣದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ ಮತ್ತು ಕಸಾಪ ಉತ್ತರ ವಲಯದ ವತಿಯಿಂದ ಸೋಮವಾರ ಜರುಗಿದ ಹಿರಿಯರಿಗೆ ಗೌರವಿಸೋಣ-ಸಮೃದ್ಧ ಸಮಾಜ ಕಟ್ಟೋಣ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಣ ಪ್ರೇಮಿ, ಸಮಾಜ ಸೇವಕ ಧೂಳಪ್ಪ ಹಾದಿಮನಿಗೆ ಗೌರವ ಸತ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉಪನ್ಯಾಸಕ ಹಾಗೂ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಪ್ರಮುಖರಾದ ಚನ್ನಮಲ್ಲಯ್ಯ ಹಿರೇಮಠ, ಪ್ರಭುಶೆಟ್ಟಿ ಭಂಗೂರ, ಶರಣು, ಶ್ವೇತಾ ಮುತ್ತಾ, ಭಾಗಿರತಿ ಇದ್ದರು.