ನಾಡಿನ ಕಲೆ ಸಾಹಿತ್ಯ, ಸಂಗೀತ ಶ್ರೀಮಂತ ಗೊಳಿಸಿದ ಸಾಹಿತಿಗಳು: ಚಟ್ನಳ್ಳಿ ಮಹೇಶ್

| Published : Jun 09 2025, 01:30 AM IST

ನಾಡಿನ ಕಲೆ ಸಾಹಿತ್ಯ, ಸಂಗೀತ ಶ್ರೀಮಂತ ಗೊಳಿಸಿದ ಸಾಹಿತಿಗಳು: ಚಟ್ನಳ್ಳಿ ಮಹೇಶ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಡಾ. ಎಚ್.ಎಲ್‌. ನಾಗೇಗೌಡ, ದೇ. ಜವರೇಗೌಡ, ಹಾ.ಮಾ. ನಾಯಕ, ಚಂದ್ರಶೇಖರ ಕಂಬಾರ, ಡಾ, ಕರೀಮ್ ಖಾನ್, ತರೀಕೆರೆ ಕೆ.ಆರ್. ಲಿಂಗಪ್ಪ ಅವರಂತಹ ಹಲವಾರು ಜಾನಪದ ವಿದ್ವಾಂಸರು, ಸಾಹಿತಿಗಳು, ನಾಡಿನ ಜಾನಪದ ಕಲೆ ಸಾಹಿತ್ಯ, ಸಂಗೀತವನ್ನು ಶ್ರೀಮಂತ ಗೊಳಿಸಿದ್ದಾರೆ ಎಂದು ಚಿಕ್ಕಮಗಳೂರು ಜಾನಪದ ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದ್ದಾರೆ.

ತ್ಯಾಗದಬಾಗಿ ಗ್ರಾಮದಲ್ಲಿ ಜಾನಪದ ಸಾಹಿತಿಗಳ ಬದುಕು ಬರಹ ವಿಚಾರ ಸಂಕಿರಣ । ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಡಾ. ಎಚ್.ಎಲ್‌. ನಾಗೇಗೌಡ, ದೇ. ಜವರೇಗೌಡ, ಹಾ.ಮಾ. ನಾಯಕ, ಚಂದ್ರಶೇಖರ ಕಂಬಾರ, ಡಾ, ಕರೀಮ್ ಖಾನ್, ತರೀಕೆರೆ ಕೆ.ಆರ್. ಲಿಂಗಪ್ಪ ಅವರಂತಹ ಹಲವಾರು ಜಾನಪದ ವಿದ್ವಾಂಸರು, ಸಾಹಿತಿಗಳು, ನಾಡಿನ ಜಾನಪದ ಕಲೆ ಸಾಹಿತ್ಯ, ಸಂಗೀತವನ್ನು ಶ್ರೀಮಂತ ಗೊಳಿಸಿದ್ದಾರೆ ಎಂದು ಚಿಕ್ಕಮಗಳೂರು ಜಾನಪದ ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದ್ದಾರೆ.ಭಾನುವಾರ ಕರ್ನಾಟಕ ಜಾನಪದ ಪರಿಷತ್ತು (ವಿಶ್ವ ಸಂಸ್ಥೆ ಮಾನ್ಯತೆ ಪಡೆದ ಸಂಸ್ಥೆ) ತರೀಕೆರೆ ತಾಲೂಕು ಚಿಕ್ಕಮಗಳೂರು ಜಿಲ್ಲೆ ವತಿಯಿಂದ ಸಮೀಪದ ತ್ಯಾಗದಬಾಗಿ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರಸ್ವಾಮಿ ದೇವಸ್ಥಾನ ಆವರಣದಲ್ಲಿ ನಡೆದ ಜಾನಪದ ಸಾಹಿತಿಗಳ ಬದುಕು-ಬರಹ, ವಿಚಾರ ಸಂಕಿರಣ ಮತ್ತು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.ಹಳೆ ಬೇರು ಹೊಸ ಚಿಗುರು ಕೂಡಿರಲು ಮರಸೊಬಗು ಎಂಬಂತೆ ಕನ್ನಡ ನಾಡಿನ ಮೂಲ ಜಾನಪದ ಸಂಸ್ಕೃತಿ, ಸಾಹಿತ್ಯ, ಸಂಗೀತ ಕಲೆಗಳಿಂದ ಶಿಷ್ಟ ಸಾಹಿತ್ಯದ ಎಲ್ಲಾ ಸಂಗೀತ ಕಲಾ ಪ್ರಕಾರಗಳು ಹೆಮ್ಮರವಾಗಿ ಬೆಳೆಯಲು ಸಾಧ್ಯ. ಜಾನಪದ ಸಾಹಿತ್ಯ ಸಂಸ್ಕೃತಿಯಿಂದ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಆರೋಗ್ಯವಂತ ಸಮಾಜ ಕಟ್ಟಲು ಸಾಧ್ಯ. ಜಾನಪದ ಸಂಸ್ಕೃತಿ ಕುಟುಂಬ ಮತ್ತು ಸಮಾಜದ ಒಗ್ಗಟ್ಟು, ಆಹಾರ ಪದ್ಧತಿ, ಉಡುಗೆ-ತೊಡುಗೆ, ಧಾರ್ಮಿಕ ಆಚಾರ ವಿಚಾರ. ಸಹಕಾರ, ಹೊಂದಾಣಿಕೆ, ಜಾತ್ಯತೀತ ಮನೋಭಾವನೆ, ಬೆವರಿನ ಶ್ರಮ, ದುಡಿಮೆ ಮುಂತಾದ ಮೌಲ್ಯಾಧಾರಿತ ಗುಣ ಗಳೊಂದಿಗೆ ಭಾರತೀಯ ಸಂಸ್ಕೃತಿಯನ್ನು ಶ್ರೀಮಂತ ಗೊಳಿಸಿದೆ. ಆದ್ದರಿಂದ ಇಂದಿನ ಯುವಕ ಯುವತಿಯರು ಜಾನಪದ ಕಲೆ ಸಾಹಿತ್ಯ ಸಂಗೀತಕ್ಕೆ ಹೆಚ್ಚು ಒತ್ತು ನೀಡಬೇಕು ಎಂದ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್ ಮಾತನಾಡಿ, ಜಾನಪದ ಸಂಸ್ಕೃತಿಯಿಂದ ಶಾಂತಿ ಮತ್ತು ಸೌಹಾರ್ದಯುತ ಸಮಾಜ ನಿರ್ಮಾಣ ಸಾಧ್ಯ. ನಮ್ಮ ಜಾನಪದರು ನಿಜ ಜೀವನದ ಅನುಭವ, ಕೃಷಿ ಮತ್ತು ಬೆವರಿನ ಶ್ರಮ, ದುಡಿಮೆಯ ಮಹತ್ವ, ಗುರು ಹಿರಿಯರನ್ನು ಗೌರವಿಸುವಿಕೆ, ದಾನ ಧರ್ಮ, ತ್ಯಾಗ ಮನೋಭಾವನೆ, ಕುಟುಂಬ ಮತ್ತು ಸಮಾಜದಲ್ಲಿ ಮಹಿಳೆಯ ಪ್ರಮುಖ ಪಾತ್ರ ಮುಂತಾದ ಮೂಲ್ಯಾಧಾರಿತ ಗುಣಗಳನ್ನು ಮೌಖಿಕ ಸಾಹಿತ್ಯ ಕಟ್ಟಿ ಮುಂದಿನ ಜನಾಂಗದವರಲ್ಲಿ ಯುವಕ ಯುವತಿಯರಲ್ಲಿ ಅರಿವು ಮೂಡಿಸಲು ಪ್ರಯತ್ನ ಮಾಡಿದ್ದಾರೆ. ಆದ್ದರಿಂದ ಇಂದಿನ ಯುವಜನರು ಜಾನಪದ ಸಾಹಿತ್ಯ ಸಂಗೀತವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಸಾಹಿತಿ ಹೊಸೂರು ಪುಟ್ಟರಾಜು ಮಾತನಾಡಿ ಜನಪದವೇ ಜೀವನ. ಜೀವನವೇ ಜಾನಪದ ಈ ನೆಲದ ಮಣ್ಣಿನ ಜಾನಪದ ಸಂಸ್ಕೃತಿ ಮನುಷ್ಯನ ವ್ಯಕ್ತಿತ್ವ ನಿರ್ಮಾಣ, ಅವರು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಂಘಟನಾತ್ಮಕ ಹಾಗೂ ಸರ್ವತೋಮುಖ ಬೆಳವಣಿಗೆಗೆ ಶಾಂತಿ, ಅಹಿಂಸೆ, ಪರೋಪಕಾರ, ಸರಳ ಜೀವನ ಮುಂತಾದ ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡು ಮಾದರಿಯಾಗಿ ಬಾಳಲು ದಾರಿ ದೀಪವಾಗಿದೆ ಎಂದು ಅಭಿಪ್ರಾಯ ಪಟ್ಟರು. ಚಿಕ್ಕನಲ್ಲೂರು ಜಯಣ್ಣ ಜನಪದ ವಾದ್ಯಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ ಈ ನೆಲದ ಮಣ್ಣಿನಲ್ಲಿ ಬೆಳೆದಿರುವ ಜಾನಪದ ಕಲೆಗಳಾದ, ವೀರಗಾಸೆ, ಡೊಳ್ಳು ಕುಣಿತ, ಕೋಲಾಟ, ಭಜನೆ, ಜಾನಪದ ನೃತ್ಯ ಮುಂತಾದ ನೂರಾರು ಕಲೆ ಗಳನ್ನು ಕಲಾವಿದರಾದ ನಾವುಗಳು ಎಂದೆಂದೂ ಮರೆಯದಿರಲು ಆ ಕಲೆಗಳನ್ನು ಮುಂದುವರಿಸಿಕೊಂಡು ಹೋಗಬೇಕೆಂದು

ಕಿವಿಮಾತು ಹೇಳಿದರು. ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಿ.ಪಿ.ಪರಮೇಶ್ವರಪ್ಪ ಅವರನ್ನುಸಭೆಯಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಅವರು 40 ವರ್ಷಗಳಿಂದ ಈ ಕಲಾ ಸೇವೆ ಮಾಡಿದ್ದರಿಂದ ಈ ದೊಡ್ಡ ಪ್ರಶಸ್ತಿ ಪಡೆಯುವ ಸೌಭಾಗ್ಯ ನನಗೆ ದೊರಕಿದೆ ಎಂದು ನುಡಿದರು.ತರೀಕೆರೆ ತಾಲೂಕು ಕಜಾಪ ಅದ್ಯಕ್ಷ ಎಚ್.ಎಸ್.ರಾಜಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ, ಮಾಳೇನಹಳ್ಳಿ ಬಸಪ್ಪ, ಸಂಗೀತ ವಿದ್ವಾನ್ ಜಗದೀಶ ಆಚಾರ್ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಜಿ.ಎಸ್ ತಿಪ್ಪೇಶ್, ಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಮಹದೇವಪ್ಪ. ಗೌರವಾಧ್ಯಕ್ಷ ದೇವರಾಜು, ಜಿಲ್ಲಾ ಸಂಚಾಲಕಿ ಗಾಯತ್ರಮ್ಮ, ಪ್ರಧಾನ ಕಾರ್ಯದರ್ಶಿ ಟಿ. ಈ. ದೇವರಾಜು, ಅಜ್ಜಂಪುರ ತಾಲೂಕ ಅಧ್ಯಕ್ಷ ಮರಳು ಸಿದ್ದಪ್ಪ, ಕಲಾವಿದ ಶಂಕ್ರಪ್ಪ, ಮಹಾಂತೇಶ, ಗಿರೀಶ, ಚಂದ್ರ ಮೌಳಿ, ಲತಾ, ಯಶೋಧ, ಸುನಿತಾ ಗಾಯಕ ತಿಪ್ಪೇಶ್, ನಾರಾಯಣಪುರ ರಾಜಣ್ಣ, ಶಿವಕುಮಾರ್, ನಾಗೇಂದ್ರಪ್ಪ, ಗ್ರಾಪಂ ಸದಸ್ಯ ಕುಮಾರಸ್ವಾಮಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

-8ಕೆಟಿಆರ್.ಕೆ.4ಃ

ತರೀಕೆರೆ ಸಮೀಪದ ತ್ಯಾಗದಬಾಗಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮಗಳನ್ನು ಚಿಕ್ಕಮಗಳೂರು ಸಾಹಿತಿ ಚಟ್ನಳ್ಳಿ ಮಹೇಶ್ ಉದ್ಘಾಟಿಸಿದರು. ಜಾನಪದ ಪರಿಷತ್ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಜಿ.ಬಿ ಸುರೇಶ್ , ತರೀಕೆರೆ ತಾಲೂಕು ಅದ್ಯಕ್ಷ ಎಚ್.ಎಸ್.ರಾಜಶೇಖರ್ ಮತ್ತಿತರರು ಇದ್ದರು.