ಸಾರಾಂಶ
ತಾಲೂಕಿನ ಕಲ್ಲೋಳಿ ಪಟ್ಟಣದ ಯುವಕರು ಆರ್ಸಿಬಿ ಗೆಲುವು ಸಾಧಿಸಬೇಕೆಂದು ಕಲ್ಲೋಳಿ ಪಟ್ಟಣದ ಜಾಗೃತ ಹನುಮಂತ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ಹೊತ್ತಿದ್ದ ಹಿನ್ನೆಲೆ ಆರ್ಸಿಬಿ ಗೆಲ್ಲುವು ಸಾಧಿಸುತ್ತಿದಂತೆ ಒಂದು ಕಿಮೀ ಅಂತರದಿಂದ ಬಸ್ತಿಗಲ್ಲಿ ಯುವಕರು ಯಲ್ಲಮ್ಮತಾಯಿ ಮಂದಿರದಿಂದ ಮಾರುತಿದೇವರ ಮಂದಿರವರೆಗೆ ರಾತ್ರಿ ಹೊತ್ತು ದೀಘ್ರದಂಡ ನಮಸ್ಕಾರ ಹಾಕಿ ದೇವರಿಗೆ ಹರಕೆ ತಿರಿಸಿ ವಿಜಯೋತ್ಸವ ವಿಜಯೋತ್ಸವದ ಆಚರಿಸಿದರು.
ಕನ್ನಡಪ್ರಭ ವಾರ್ತೆ ಮೂಡಲಗಿ
ತಾಲೂಕಿನ ಕಲ್ಲೋಳಿ ಪಟ್ಟಣದ ಯುವಕರು ಆರ್ಸಿಬಿ ಗೆಲುವು ಸಾಧಿಸಬೇಕೆಂದು ಕಲ್ಲೋಳಿ ಪಟ್ಟಣದ ಜಾಗೃತ ಹನುಮಂತ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ಹೊತ್ತಿದ್ದ ಹಿನ್ನೆಲೆ ಆರ್ಸಿಬಿ ಗೆಲ್ಲುವು ಸಾಧಿಸುತ್ತಿದಂತೆ ಒಂದು ಕಿಮೀ ಅಂತರದಿಂದ ಬಸ್ತಿಗಲ್ಲಿ ಯುವಕರು ಯಲ್ಲಮ್ಮತಾಯಿ ಮಂದಿರದಿಂದ ಮಾರುತಿದೇವರ ಮಂದಿರವರೆಗೆ ರಾತ್ರಿ ಹೊತ್ತು ದೀಘ್ರದಂಡ ನಮಸ್ಕಾರ ಹಾಕಿ ದೇವರಿಗೆ ಹರಕೆ ತಿರಿಸಿ ವಿಜಯೋತ್ಸವ ವಿಜಯೋತ್ಸವದ ಆಚರಿಸಿದರು.ದೀಘ್ರದಂಡ ನಮಸ್ಕಾರವನ್ನು ಸಮ್ರದ್ಧ ಗಿರೆಣ್ಣವರ, ವಿಠ್ಠಲ ಕಂಕಣವಾಡಿ, ಮಲ್ಲಪ್ಪ ಕರಗಾಂವಿ ಹಾಕಿದರು. ಶಿವಾನಂದ ದಬಾಡಿ,ಪ್ರಕಾಶ ಪತ್ತಾರ,ಶಿವಾನಂದ ಪೂಜೇರಿ,ಮಂಜುನಾಥ ಕಂಕಣವಾಡಿ ಸೇರಿದಂತೆ ಅನೇಕರು ಸಾಥ ನೀಡಿದರು.
ಶಾಲಾ ದಿನಗಳಿಂದ ಕ್ರಿಕೆಟ್ ಆಡುತ್ತಿದ್ದೇವೆ. ಈಗ ಪರೀಕ್ಷೆ ಮುಗಿಸಿ ಬಂದ ನಂತರ ದಿನಂಪ್ರತಿ ನಾವು ಕ್ರಿಕೆಟ್ ಆಡುತ್ತೇವೆ. ಆರ್ಸಿಬಿ ಈ ಬಾರಿ ಗೆಲ್ಲುವು ಕಾಣಬೇಕು ಎಂಬುವುದು ನಮ್ಮ ಕನಸ್ಸಾಗಿತ್ತು. ಅದಕ್ಕೆ ನಮ್ಮ ಪಟ್ಟಣದ ಯುವಕರು ಸೇರಿ ಗೆಲುವಿಗೆ ಜಾಗೃತ ಹನುಮಂತ ದೇವರ ಮೊರೆ ಹೊಗಲಾಗಿತ್ತು. ಅದೇ ರೀತಿ ದೇವರು ಗೆಲುವು ಕೊಟ್ಟಿದ್ದಾನೆ. ಅದಕ್ಕೆ ಹರಕೆ ತೀರಿಸಲಾಯಿತು.-ಸಮ್ರದ್ಧ ಗಿರೆಣ್ಣವರ, ಆರ್ಸಿಬಿ ಅಭಿಮಾನಿ.