ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಎನ್.ಸಿ.ಸಿ.ಯ ೬ನೇ ಕರ್ನಾಟಕ ನೇವಲ್ ಯೂನಿಟ್ ಇದರ 10 ದಿನಗಳ ಸಂಯುಕ್ತ ವಾರ್ಷಿಕ ತರಬೇತಿ ಶಿಬಿರ (ಸಿಎಟಿಸಿ) ವು ಮೇ ೨೫ರಿಂದ ಜೂ. ೩ ರವರೆಗೆ ಮಾಹೆ ಮಣಿಪಾಲದಲ್ಲಿ ನಡೆಯುತ್ತಿದೆ.ಈ ಶಿಬಿರದಲ್ಲಿ ಕರಾವಳಿ ಕರ್ನಾಟಕದ ೪೦೦ ಕೆಡೆಟ್ಗಳು, ಕರ್ನಾಟಕದ ಇತರ ಎನ್.ಸಿ.ಸಿ. ನೌಕಾ ಘಟಕಗಳ ೧೦೮ ಕೆಡೆಟ್ಗಳು ಮತ್ತು ಮಂಗಳೂರು ೨೦ ಪ್ರತ್ಯೇಕ ಐಡಿಎಸ್ಎಸ್ಸಿ ಕೆಡೆಟ್ಗಳು ಸೇರಿ ಸುಮಾರು 600 ಮಂದಿ ಭಾಗವಹಿಸುತ್ತಿದ್ದಾರೆ. ಈ ವೈವಿಧ್ಯಮಯ ಶಿಬಿರವು ಯುವಕರಲ್ಲಿ ಐಕ್ಯತೆ, ಶಿಸ್ತು ಮತ್ತು ನಾಯಕತ್ವ ಬೆಳೆಸಲು ಉದ್ದೇಶಿಸಿದೆ. ಮಂಗಳೂರು ಎನ್ಸಿಸಿ ಗ್ರೂಪ್ನ ಕಮಾಂಡರ್ ಕರ್ನಲ್ ವಿರಾಜ್ ಕಾಮತ್ ಅವರು ಮೇ 25ರಂದು ಶಿಬಿರ ಉದ್ಘಾಟಿಸಿ ಈ ಶಿಬಿರವು ಕ್ಯಾಡೆಟ್ಗಳಿಗೆ ಸೈನಿಕ ಶಿಸ್ತು, ಕಟ್ಟುನಿಟ್ಟಾದ ದಿನಚರಿ ಮತ್ತು ವೈಯಕ್ತಿಕ ಬೆಳವಣಿಗೆಗೆ ಅವಕಾಶ ನೀಡಲಿದೆ ಎಂದರು.ನಿಮ್ಮ ಸುರಕ್ಷಿತ ವಲಯದಿಂದ ಹೊರಬನ್ನಿ, ಪ್ರತಿಯೊಂದು ಕಲಿಕೆಯ ಅವಕಾಶವನ್ನು ನಿಮ್ಮ ಮಿತಿಗಳನ್ನು ಮೀರಿ ಬಳಸಿಕೊಳ್ಳಲು ಪ್ರಯತ್ನಿಸಿ. ಇಲ್ಲಿ ನೀವು ಎದುರಿಸುವ ಪ್ರತಿಯೊಂದು ಸವಾಲು ನಿಮ್ಮನ್ನು ಉತ್ತಮ ವ್ಯಕ್ತಿಗಳು ಮತ್ತು ಭವಿಷ್ಯದ ನಾಯಕರನ್ನಾಗಿ ಮಾಡುತ್ತದೆ ಎಂದು ಕರ್ನಲ್ ಕಾಮತ್ ಸಲಹೆ ನೀಡಿದರು. ಮಳೆಗಾಲದ ಹವಾಮಾನ-ಸಂಬಂಧಿತ ಅನಾರೋಗ್ಯದಿಂದ ಎಚ್ಚರವಾಗಿರುವಂತೆ ಅವರು ಕೆಡೆಟ್ಗಳಿಗೆ ಸಲಹೆ ಮಾಡಿದರು.ಈ ಶಿಬಿರದ ನೇತೃತ್ವ ವಹಿಸಿರುವ ಲೆಫ್ಟಿನೆಂಟ್ ಕಮಾಂಡರ್ ಎಂ.ಎ. ಮುಲ್ತಾನಿ ಉಪಸ್ಥಿತರಿದ್ದರು. ಈ ಶಿಬಿರವು ಕ್ಯಾಡೆಟ್ಗಳಿಗೆ ಮುಂದಿನ ಎನ್ಸಿಸಿ ಕಾರ್ಯಕ್ರಮಗಳು ಮತ್ತು ನೌ ಸೈನಿಕ್ ಕ್ಯಾಂಪ್ ಆಯ್ಕೆಗೆ ಅವಕಾಶ ನೀಡುತ್ತದೆ. ಶಿಬಿರದ ಅತ್ಯುತ್ತಮ ಪ್ರದರ್ಶನಕಾರರಿಗೆ ಜೂ. ೩ರ ಸಮಾಪನ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ನೀಡಲಾಗುವುದು. ಮಾಹೆಯು ಈ ಶಿಬಿರಕ್ಕೆ ವಿಶ್ವಮಾನ್ಯ ಸೌಲಭ್ಯಗಳನ್ನು ಒದಗಿಸಿದೆ ಎಂದವರು ತಿಳಿಸಿದ್ದಾರೆ.