ಸಾರಾಂಶ
ಈಗಾಗಲೇ ರೈತರು ಅತಿವೃಷ್ಟಿಯಿಂದ ಹಾನಿಗೊಳಗಾಗಿದ್ದು, ಅಳಿದುಳಿದ ಬೆಳೆಗೆ ಬೆಲೆಯೂ ಇಲ್ಲದೇ ಕೊರಗುವಂತಾಗಿದೆ. ವಿವಿಧ ಬೆಳೆಗಳಿಗೆ ಈಗಾಗಲೇ ಬೆಂಬಲ ಬೆಲೆಯಲ್ಲಿ ಸರ್ಕಾರ ಖರೀದಿ ಮಾಡುತ್ತಿದ್ದು, ಮೆಕ್ಕೆಜೋಳ ಸಹ ಖರೀದಿಸಲು ಕೇಂದ್ರ ತೆರೆಯಬೇಕು.
ಧಾರವಾಡ:
ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವುದು ಹಾಗೂ ಬೆಳೆಹಾನಿ ಪರಿಹಾರ ನೀಡುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದದಿಂದ ಸೋಮವಾರ ಪ್ರತಿಭಟಿಸಲಾಯಿತು.ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಮೆಕ್ಕೆಜೋಳ ಕೈಯಲ್ಲಿ ಹಿಡಿದು ಪ್ರತಿಭಟಿಸಿ, ಈಗಾಗಲೇ ರೈತರು ಅತಿವೃಷ್ಟಿಯಿಂದ ಹಾನಿಗೊಳಗಾಗಿದ್ದು, ಅಳಿದುಳಿದ ಬೆಳೆಗೆ ಬೆಲೆಯೂ ಇಲ್ಲದೇ ಕೊರಗುವಂತಾಗಿದೆ. ವಿವಿಧ ಬೆಳೆಗಳಿಗೆ ಈಗಾಗಲೇ ಬೆಂಬಲ ಬೆಲೆಯಲ್ಲಿ ಸರ್ಕಾರ ಖರೀದಿ ಮಾಡುತ್ತಿದ್ದು, ಮೆಕ್ಕೆಜೋಳ ಸಹ ಖರೀದಿಸಲು ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿದರು.
ಸದ್ಯ ಕ್ವಿಂಟಲ್ಗೆ ₹1600 ರಿಂದ ₹1800ರೊಳಗೆ ಮೆಕ್ಕೆಜೋಳವನ್ನು ಮಧ್ಯವರ್ತಿಗಳು ಖರೀದಿಸುತ್ತಿದ್ದಾರೆ. ಬೆಂಬಲ ಬೆಲೆಯನ್ನು ₹2400 ಎಂದು ಸರ್ಕಾರ ಘೋಷಿಸಬೇಕು. ಜತೆಗೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಲಾಯಿತು.ಅತಿವೃಷ್ಟಿಯಿಂದ ಹಾನಿಯಾದ ಬೆಳೆಗೆ ಇನ್ನೂ ಪರಿಹಾರ ಬಂದಿಲ್ಲ ಎಂದು ಸಂಘಟನೆ ವತಿಯಿಂದ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘದ ಅಧ್ಯಕ್ಷ ವಿವೇಕ ಮೋರೆ, ಗುರುನಾಥಗೌಡ ಅರಳಿಹೊಂಡ, ಎಸ್.ಎಸ್. ಪಾಟೀಲ, ಪುಟ್ಟಸ್ವಾಮಿ, ಸಿದ್ದಪ್ಪ ಬೆಟಗೇರಿ, ನಾಗಣ್ಣ ಬೆಳ್ಳಿಗಟ್ಟಿ, ಗುರು ಬೀರಣ್ಣವರ ಮತ್ತಿತರರು ಇದ್ದರು.;Resize=(128,128))
;Resize=(128,128))
;Resize=(128,128))