ಜಮೀನು ವಿವಾದಕ್ಕೆ ಹಲ್ಲೆ : ವ್ಯಕ್ತಿ ಸಾವು

| Published : Apr 28 2025, 12:46 AM IST

ಜಮೀನು ವಿವಾದಕ್ಕೆ ಹಲ್ಲೆ : ವ್ಯಕ್ತಿ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಗುಂಪೊಂದು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರಿಂದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಉಮಾದೇವರಹಳ್ಳಿಯಲ್ಲಿ ನಡೆದಿದೆ

ಆಲೂರು: ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಗುಂಪೊಂದು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರಿಂದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಉಮಾದೇವರಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ ಅದೇ ಗ್ರಾಮದ 40 ವರ್ಷದ ಪ್ರತಾಪ್‌ ಸಾವನ್ನಪ್ಪಿದ್ದಾರೆ. ಪ್ರತಾಪ್‌ ಅವರ ತಾಯಿ 30 ವರ್ಷಗಳ ಹಿಂದೆ ಬ್ಯಾಂಕ್‌ ಹರಾಜು ಮಾಡಿದ್ದ ಜಮೀನನ್ನು ಖರೀದಿ ಮಾಡಿದ್ದರು. ಆಗಿನಿಂದಲೂ ಪ್ರತಾಪ್‌ ಅವರೇ ಆ ಜಮೀನನ್ನು ಸಾಗುವಳಿ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಆ ಜಮೀನಿನ ವಿಚಾರವಾಗಿ ಈರಯ್ಯ ಎಂಬುವವರ ಮಕ್ಕಳಾದ ಚಂದ್ರಶೇಖರ್‌, ಮೋಹನ್‌ ಎಂಬುವವರು ಜಗಳ ಮಾಡುತ್ತಿದ್ದರು. ಜಗಳ ವಿಕೋಪಕ್ಕೆ ತಿರುಗಿ ಮಾರಾಮಾರಿ ನಡೆದು ಈ ವೇಳೆ ಚಂದ್ರಶೇಖರ್‌, ಮೋಹನ್‌ ಸೇರಿ ಪ್ರತಾಪ್‌ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಇದರಿಂದ ಪ್ರತಾಪ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಆಲೂರು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.