ಸಾರಾಂಶ
ಕನಕಪುರ: ಯೂತ್ ಹಾಸ್ಟೇಲ್ ಅಸೋಷಿಯೇಷನ್ ಅಫ್ ಇಂಡಿಯಾ ಸಂಘಟನೆ ಚಾರಣಾ ಪ್ರಿಯರಿಗೆ ಅದ್ಭುತ ಸಂಘಟನೆಯಾಗಿದೆ. ತಾಲೂಕಿನಲ್ಲಿ ಹತ್ತಾರು ಬೆಟ್ಟಗಳಿವೆ, ಪ್ರಕೃತಿಯೊಂದಿಗೆ ಒಡನಾಡುವ ಸುಯೋಗ ಮತ್ತಷ್ಟು ಲಭಿಸಿದೆ. ಸಹಪಾಠಿಗಳೊಂದಿಗೆ ಮುಂದಿನ ದಿನಗಳಲ್ಲಿ ಚಾರಣ ಕೈಗೊಳ್ಳಲಾಗುವುದು ಎಂದು ಪರಿಸರ ಪ್ರೇಮಿ ಮರಸಪ್ಪ ರವಿ ತಿಳಿಸಿದರು.
ಕನಕಪುರ: ಯೂತ್ ಹಾಸ್ಟೇಲ್ ಅಸೋಷಿಯೇಷನ್ ಅಫ್ ಇಂಡಿಯಾ ಸಂಘಟನೆ ಚಾರಣಾ ಪ್ರಿಯರಿಗೆ ಅದ್ಭುತ ಸಂಘಟನೆಯಾಗಿದೆ. ತಾಲೂಕಿನಲ್ಲಿ ಹತ್ತಾರು ಬೆಟ್ಟಗಳಿವೆ, ಪ್ರಕೃತಿಯೊಂದಿಗೆ ಒಡನಾಡುವ ಸುಯೋಗ ಮತ್ತಷ್ಟು ಲಭಿಸಿದೆ. ಸಹಪಾಠಿಗಳೊಂದಿಗೆ ಮುಂದಿನ ದಿನಗಳಲ್ಲಿ ಚಾರಣ ಕೈಗೊಳ್ಳಲಾಗುವುದು ಎಂದು ಪರಿಸರ ಪ್ರೇಮಿ ಮರಸಪ್ಪ ರವಿ ತಿಳಿಸಿದರು.
ತಾಲೂಕಿನ ಚಾಕನಹಳ್ಳಿ ಗ್ರಾಮದ ಬಸವೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಯೂತ್ ಹಾಸ್ಟೇಲ್ ಅಸೋಷಿಯೇಷನ್ ಅಫ್ ಇಂಡಿಯಾ ಶಾಖೆಯ ಕನಕಪುರ ತಾಲೂಕು ಅಧ್ಯಕ್ಷರಾಗಿ ಪಾಪಣ್ಣ ಅವರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ನನಗೆ ಲಭಿಸಿರುವ ಕರ್ತವ್ಯವನ್ನು ಸಮಗ್ರವಾಗಿ ಅನುಷ್ಠಾನಕ್ಕೆ ತರುವ ಬಯಕೆ ನನ್ನದು. ಇದಕ್ಕೆ ನಮ್ಮ ತಂಡದ ಸಹಭಾಗಿತ್ವ ಕೂಡ ಅಗತ್ಯವಿದೆ ಎಂದು ಸಹಕಾರ ಕೋರಿದರು.ಸಂಘಟನೆಯ ಛೇರ್ಮನ್ ಎಸ್.ವಿ.ಪುಟ್ಟರಾಜು, ಉಪಾಧ್ಯಕ್ಷ ಸಿ.ಎಸ್.ನಾಗರಾಜು, ಸುಬ್ರಮಣ್ಯ, ಕಾರ್ಯದರ್ಶಿ ಗುರುರಾಜ್, ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಕೆ.ಟಿ., ಖಜಾಂಚಿ ಕಲ್ಪನಾ ಆರ್., ನಿರ್ದೇಶಕರಾದ ಸಿ.ಎನ್.ಅರುಣ್, ನವೀನ್ ಎಂ.ಎಸ್., ವಿ.ರಾಮಯ್ಯ, ದೇವೇಗೌಡ, ಶಿವಕುಮಾರ್, ಪ್ರಶಾಂತ್, ಅರವಿಂದ್ ಕುಮಾರ್ ಇತರರಿದ್ದರು.
ಕೆ ಕೆ ಪಿ ಸುದ್ದಿ 02:ಕನಕಪುರ ತಾಲೂಕು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಅಧ್ಯಕ್ಷರಾಗಿ ಮರಸಪ್ಪ ರವಿ ಅವರು ಅಧಿಕಾರ ಸ್ವೀಕರಿಸಿದರು.