ಸಾರಾಂಶ
ಶಿಗ್ಗಾಂವಿ: ದೇಶದಲ್ಲಿರುವ ಪ್ರತಿಯೊಬ್ಬರಿಗೂ ಉದ್ಯೋಗ, ಆರೋಗ್ಯ, ವಸತಿಯೊಂದಿಗೆ ಘನತೆಯ ಬದುಕು ಖಾತ್ರಿಯಾದಾಗ ಮಾತ್ರ ಸ್ವಾತಂತ್ರ್ಯ ಹೋರಾಟದ ಆಶಯ ಈಡೇರಿದಂತಾಗುತ್ತದೆ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಅಭಿಪ್ರಾಯಪಟ್ಟರು.ಪಟ್ಟಣದ ಜಿ+ ೧ ಮನೆ ಆವರಣದಲ್ಲಿ ಭಾನುವಾರ ನಡೆದ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ಐ) ಸಭೆಯಲ್ಲಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕೆ ಭಗತ್ ಸಿಂಗ್ ಸೇರಿದಂತೆ ಅನೇಕ ಕ್ರಾಂತಿಕಾರಿಗಳು ತಮ್ಮ ಅಮೂಲ್ಯ ಪ್ರಾಣವನ್ನು ಬಲಿದಾನಗೈದು ಹುತಾತ್ಮರಾಗಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ಭಗತ್ ಸಿಂಗ್ ಮತ್ತವರ ಸಂಗಾತಿಗಳ ಆಶಯದಂತೆ ಸರ್ವರಿಗೂ ಸಮಪಾಲು- ಸಮಬಾಳಿನ ಧ್ಯೇಯಕ್ಕಾಗಿ ಡಿವೈಎಫ್ಐ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.ದೇಶ ಸ್ವಾತಂತ್ರ್ಯಗೊಂಡು ಏಳು ದಶಕಗಳು ಕಳೆದರೂ ಶಿಕ್ಷಣ, ಉದ್ಯೋಗ, ವಸತಿ, ಆರೋಗ್ಯದಂತಹ ಮೂಲ ಅಗತ್ಯಗಳಿಗಾಗಿ ಹೋರಾಟ ಮಾಡಬೇಕಿರುವುದು ನೋವಿನ ಸಂಗತಿ. ಬಡವರ ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಲೇ ಹೋಗುತ್ತಿದ್ದು, ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಈ ಅಸಮಾನತೆಯನ್ನು ಹೋಗಲಾಡಿಸಿ ಸಮಾನ ಅವಕಾಶಗಳು ಸರ್ವರಿಗೂ ಸಿಗುವಂತಾಗಬೇಕು ಎಂದರು.ಶ್ರಮವಹಿಸಿ ದುಡಿಯುವ ಬಡಜನರ ಮಕ್ಕಳು ಶಿಕ್ಷಣ, ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಸರ್ವರಿಗೂ ಶಿಕ್ಷಣ ಮತ್ತು ಉದ್ಯೋಗ ಮೂಲಭೂತ ಹಕ್ಕಾಗಬೇಕು. ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಸರ್ಕಾರಗಳು ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಬೇಕು. ಸ್ಥಳೀಯವಾಗಿ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ ಉದ್ಯೋಗ ಒದಗಿಸಬೇಕು ಎಂದರು.ಈ ಸಂದರ್ಭದಲ್ಲಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ವೀರಣ್ಣ ಗಡ್ಡಿ, ಮೌಲಾಲಿ ನವಲಗುಂದ ಹಾಗೂ ಕಿಶೋರ್ ಧೋತ್ರರೆ ಅವರನ್ನು ಗೌರವಿಸಲಾಯಿತು.
ಡಿವೈಎಫ್ಐ ಮುಖಂಡರಾದ ಮೌಲಾಲಿ ನವಲಗುಂದ, ಕಿಶೋರ ದೋತ್ರೆ, ವೀರಣ್ಣ ಗಡ್ಡಿ, ಅಸ್ಮಾ ದೇವಸೂರು, ಮಂಜುಳಾ ತಡಸ, ಗೀತಾ ಎಚ್., ಮಂಜುಳಾ ಹಾನಗಲ್, ಅಮಿತ್ ಬಿಂಡಲಗಿ, ರುದ್ರೇಶ ಗೌರಣ್ಣನವರ, ರೇಣುಕಾ ಶಿಡ್ಲಣ್ಣನವರ, ಶಾಂತವ್ವ ಗಡ್ಡಿ, ಗಂಗಮ್ಮ ನಾ. ಶಿಡ್ಲಾಪೂರ, ಮಂಜುಳಾ ಲಕ್ಷ್ಮೇಶ್ವರ, ಮಣಿಕಂಠ ಅಂಗಡಿ, ಗಾಯತ್ರಿ ಮಾಳವದೆ ಸೇರಿದಂತೆ ಇತರರು ಉಪಸ್ಥಿತರಿದ್ದರು. ನಿತ್ಯವೂ ಯೋಗಾಭ್ಯಾಸ ಮಾಡಿಹಾವೇರಿ: ನಗರದ ದೇವಗಿರಿ ರಸ್ತೆಯ ಬಿ.ಎಂ. ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಅಂತಾರಾಷ್ಟ್ರೀಯ ಯೋಗಪಟು ಅಪೇಕ್ಷಾ ಹಂಜಿ ಹಾಗೂ ಬಸವರಾಜ ಹಂಜಿ ಮಾರ್ಗದರ್ಶನದಲ್ಲಿ ಪದ್ಮಾಸನ, ವಜ್ರಾಸನ, ತಾಡಾಸನ, ವೃಕ್ಷಾಸನ, ಸೂರ್ಯ ನಮಸ್ಕಾರ ವಿವಿಧ ಆಸನಗಳನ್ನು ಪ್ರದರ್ಶಿಸುತ್ತ ಶಾಲೆಯ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಯೋಗ ಶಿಕ್ಷಕ ಎಸ್.ಪಿ. ಮಠದ, ಚಂದ್ರಲೋಮ ವಿಲೋಮ, ಸೂರ್ಯಲೋಮ ವಿಲೋಮ, ಭ್ರಮರಿ, ಶೀತಲಿ, ಕಫಾಲಭಾತಿ, ಮುಂತಾದ ಪ್ರಾಣಾಯಾಮಗಳನ್ನು ವಿದ್ಯಾರ್ಥಿಗಳಿಗೆ ಮಾಡಿಸಿದರು.ಶಾಲೆಯ ಕಾರ್ಯದರ್ಶಿ ಸಿದ್ಧರಾಜ ಕಲಕೋಟಿ ಮಾತನಾಡಿ, ಯೋಗಾಭ್ಯಾಸವನ್ನು ಪ್ರತಿನಿತ್ಯ ಮಾಡಬೇಕು. ಬೌದ್ಧಿಕ ಸಾಮರ್ಥ್ಯ, ನೈತಿಕ ಸ್ಥೈರ್ಯ ಹೆಚ್ಚಿಸಲು ಪ್ರಯೋಜನಕಾರಿ ಎಂದರು.ಶಾಲೆಯ ಅಧ್ಯಕ್ಷರಾದ ಪ್ರೊ. ಮಾ. ನಾಗರಾಜ ಮಾತನಾಡಿ, ಪಂಚಾದಾದ್ಯಂತ 183 ದೇಶಗಳಲ್ಲಿ ಯೋಗಾಭ್ಯಾಸವನ್ನು ಮಾಡುತ್ತಿದ್ದಾರೆ. ಪ್ರತಿವರ್ಷ ಒಂದೊಂದು ಘೋಷವಾಕ್ಯವನ್ನು ಇಟ್ಟುಕೊಂಡು ಯೋಗ ದಿನಾಚರಣೆ ಮಾಡಿದ್ದಾರೆ. ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುವುದಕ್ಕೆ ಯೋಗ ಮಾಡಿ ಎಂದರು. ಮೇರಿ ಸಿ.ಎಲ್. ಕಾರ್ಯಕ್ರಮ ನಿರೂಪಿಸಿದರು. ಈ ವೇಳೆ ಶಿಕ್ಷಕ, ಶಿಕ್ಷಕ್ಷಿಯರು ಮತ್ತು ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.