ಸಾರಾಂಶ
ಶಿಗ್ಗಾಂವಿ: ಶಿಗ್ಗಾಂವಿ ಜನರು ಅತ್ಯಂತ ಸುಖ, ಶಾಂತಿ, ನೆಮ್ಮದಿಯಿಂದ ಬದುಕುವಂತಾಗಲಿ. ಇಲ್ಲಿನ ಜನರು ಎಷ್ಟು ನೆಮ್ಮದಿಯಿಂದ ಬದುಕಿದ್ದಾರೆ ಎಂದು ಇಡೀ ಜಗತ್ತಿನ ಜನರೂ ಬಂದು ನೋಡುವಂತಾಗಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಶ್ರೀ ವಿರಕ್ತ ಮಠದಲ್ಲಿ ನಡೆದ ೩೨ನೇ ಶರಣ ಸಂಸ್ಕೃತಿ ಉತ್ಸವ ೨೦೨೫ ಹಾಗೂ ಲಿಂಗೈಕ್ಯ ಶೀ ಸಂಗನಬಸವ ಮಹಾಸ್ವಾಮಿಗಳ ಹಾಗೂ ಲಿಂಗೈಕ್ಕೆ ಬಸವಲಿಂಗ ಸ್ವಾಮೀಜಿಗಳ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶಿಗ್ಗಾಂವಿ ವಿರಕ್ತಮಠ ತನ್ನದೇ ಆದ ಇತಿಹಾಸ, ಪರಂಪರೆ ಪವಾಡಗಳಿಂದ ಹೆಸರಾಗಿದೆ. ಸೃಷ್ಟಿಯಲ್ಲಿ ಅದ್ಭುತವಾದ ಶಕ್ತಿ ಇದೆ. ಆದರೆ, ಅದನ್ನು ಎಲ್ಲರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಆದರೆ, ಅದನ್ನು ಗುರುಗಳ ಮೂಲಕ ನೋಡಲು ಸಾಧ್ಯ ಎಂದು ಹೇಳಿದರು.ಹುಟ್ಟಿನಿಂದ ಯಾರೂ ಜ್ಞಾನಿಗಳಲ್ಲ. ಎಲ್ಲವನ್ನೂ ಅನುಭವದಿಂದ ಕಲಿತುಕೊಳ್ಳಬೇಕು. ತಾಯಿಯೇ ಮೊದಲ ಗುರು, ಸಂಸ್ಕಾರ ಕೊಟ್ಟ ಸ್ವಾಮೀಜಿ ಎರಡನೇ ಗುರು. ಪಾಠ ಹೇಳಿದು ಗುರುಗಳು ಎಲ್ಲಕ್ಕಿಂತ ಅರಿವೇ ಗುರು. ಮನುಷ್ಯನಿಗೆ ಜ್ಞಾನದಿಂದ ಅಕ್ಷರ ಜ್ಞಾನ, ಅದರಿಂದ ಸಾಹಿತ್ಯ ಜ್ಞಾನ, ಅದರಿಂದ ವಿಜ್ಞಾನ, ತಂತ್ರಜ್ಞಾನ, ಈಗ ಕೃತಕ ಬುದ್ಧಿಮತ್ತೆ ಅಂತ ಬಂದಿದೆ. ಯಾವುದು ಸಹಜವಾಗಿ ಇಲ್ಲವೋ ಅದು ಕೃತಕ. ಹೀಗೆ ಎಲ್ಲ ಅನುಭವದ ನಂತರ ಅರಿವೆ ಗುರು. ಈ ಸ್ಥಿತಿಗೆ ಬರಬೇಕೆಂದರೆ ಮನುಷ್ಯ ಬಹಳಷ್ಟು ಜಾಗೃತರಾಗಿರಬೇಕು. ಜೀವನದಲ್ಲಿ ನಡೆಯುವ ಪ್ರತಿಯೊಂದು ಸಣ್ಣ ಘಟನೆಯೂ ನಮಗೆ ಪಾಠ ಕಲಿಸುತ್ತದೆ. ಅದು ಅನುಭವ. ಅನುಭವದಿಂದ ಅನುಭಾವ ಎನ್ನುತ್ತಾರೆ ಎಂದರು.
ಹುಟ್ಟು ಸಾವು ನಮ್ಮ ಕೈಯಲ್ಲಿ ಇಲ್ಲ. ಸಮಾಧಿ ಕಟ್ಟಿಸಿಕೊಳ್ಳಬಹುದು. ಆದರೆ, ಅದರ ಒಳಗೆ ಹೋಗುವಂಥದ್ದು ನಮ್ಮ ಕೈಯಲ್ಲಿ ಇಲ್ಲ. ಬದುಕು ನಮ್ಮ ಕೈಯಲ್ಲಿ ಇದೆ. ನಮ್ಮ ಬಳಿ ಯಾವುದಿಲ್ಲವೋ ಅದರ ಬಗ್ಗೆ ನಾವು ಹೆಚ್ಚು ಚಿಂತನೆ ಮಾಡುತ್ತೇವೆ. ನಮ್ಮ ಬಳಿ ಏನಿದೆ ಅದನ್ನು ಹೇಗೆ ಸದ್ಬಳಕೆ ಮಾಡಬೇಕು ಎನ್ನುವುದು ಮುಖ್ಯ. ಇಂತಹ ಚಿಂತನೆಗಳೇ ಈ ಮಠದ ಶ್ರೀಮಂತಿಕೆ ಎಂದರು.ವಿರಕ್ತ ಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ಸದ್ಗುರು ಸಮರ್ಥ ಡಾ. ಎ.ಸಿ. ವಾಲಿ ಮಹಾರಾಜರು ಪ್ರವಚನ ನೀಡಿದರು. ಬಸವಲಿಂಗದೇವರು ಸಮ್ಮಖ ವಹಿಸಿದ್ದರು. ಶರಣ ಸಂಸ್ಕೃತಿ ಉತ್ಸವದಲ್ಲಿ ಮಲ್ಲಿಕಾರ್ಜುನ ರೆಡ್ಡರ ಹಾಗೂ ಆರ್ಗ್ಯಾನಿಕ್ ಅರಮನೆಯ ಸಿದ್ದು ಶಿರಸಂಗಿ ಪಾಲ್ಗೊಂಡಿದರು.
ಮಠದ ದಾನಿಗಳಿಗೆ ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು. ಶರೀಫ್ ಮಾಕಪ್ಪನವರ ಕಾರ್ಯಕ್ರಮ ನಿರೂಪಿಸಿದರು.ಬದುಕಿನ ಯಶಸ್ಸಿಗೆ ಶರಣರ ತತ್ವ ಪಾಲಿಸಿ:ಶರಣರು, ಮಹಾತ್ಮರು ತಮ್ಮ ಬದುಕನ್ನು ಸಮಾಜಕ್ಕಾಗಿ ಮೀಸಲಿಟ್ಟಿದ್ದರು. ಹೀಗಾಗಿ ಶರಣ ಸಂಸ್ಕೃತಿ ನಾಡಿನ ಏಳ್ಗೆಗೆ ಕಾರಣವಾಗಿದೆ. ಅವರ ಆದರ್ಶ ತತ್ವಗಳನ್ನು ಪಾಲಿಸಿದರೆ ಬದುಕು ಯಶಸ್ವಿಯಾಗುತ್ತದೆ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ೩೨ನೇ ಶರಣ ಸಂಸ್ಕೃತಿ ಉತ್ಸವ- ೨೦೨೫ ಮತ್ತು ಹಾಗೂ ಬಸವಲಿಂಗ ಸ್ವಾಮೀಜಿ ಪುಣ್ಯಾರಾಧನೆ ಅಂಗವಾಗಿ ನಡೆದ ಧರ್ಮ ಸಮಾರಂಭದಲ್ಲಿ ಮಾತನಾಡಿದರು.ಸೀತಾಗಿರಿ ಡಾ. ಎ.ಸಿ. ವಾಲಿ ಮಹಾರಾಜರು ಪ್ರವಚನ ನೀಡಿ, ನುಡಿದರೆ ಮುತ್ತಿನ ಹಾರದಂತೆ ಶರಣರ ನುಡಿಗಳು ಮನುಕುಲಕ್ಕೆ ಮಾರ್ಗದರ್ಶಿಯಾಗಿವೆ. ನುಡಿದಂತೆ ನಡೆದು ತೋರಿದ ಮಹಾತ್ಮರು, ಶರಣರ ನುಡಿಗಳು ಇಂದಿನ ಸಮುದಾಯಕ್ಕೆ ಮಾರ್ಗದರ್ಶನ ಅವಶ್ಯವಾಗಿದೆ ಎಂದರು.ವಿರಕ್ತಮಠದ ಸಂಗನಬಸವ ಸ್ವಾಮಿಗಳು ನೇತೃತ್ವವನ್ನು ವಹಿಸಿದ್ದರು. ಬಸವದೇವರು ಸಾನ್ನಿಧ್ಯವನ್ನು ವಹಿಸಿದ್ದರು. ಮುಖಂಡರಾದ ಶಂಕರಗೌಡ್ರ ಪಾಟೀಲ, ಮಹಾರುದ್ರಪ್ಪ ಯಲಿಗಾರ, ಎಸ್.ಕೆ. ಹೂಗಾರ, ಎಸ್.ಎನ್. ಮುಗಳಿ, ಫಕ್ಕೀರೇಶ ಕೊಂಡಾಯಿ, ಶಿವಾನಂದ ಹೊಸಮನಿ, ಶಶಿಕಾಂತ ರಾಠೋಡ, ಶಂಭಣ್ಣ ಹಾವೇರಿ, ಪಿಎಸ್ಐ ಪಿ.ಎಫ್. ನಿರುಳ್ಳಿ, ಶಿವಾನಂದ ಯಲಿಗಾರ, ಶಂಕ್ರಪ್ಪ ಅರಳೇಶ್ವರ, ಸೇವಾ ಸಮಿತಿ ಪದಾಧಿಕಾರಿಗಳು ಇತರರು ಇದ್ದರು.ಹಾಸ್ಯ ಮತ್ತು ಜಾನಪದ ಕಲಾವಿದರಾದ ಬಸಣ್ಣ ಶಿಗ್ಗಾಂವಿ, ಶರೀಫ್ ಮಾಕಾಪುರ, ಕಲಾ ತಂಡದಿಂದ ಹಾಗೂ ಸಂಗೀತ ಕಾರ್ಯಕ್ರಮ ನಟರಾಜ ನಾಟ್ಯಶಾಲೆ ವಿದ್ಯಾರ್ಥಿಗಳಿಂದ ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.