2ನೇ ಪುಟಕ್ಕೆ....ಲೀಡ್‌ ಬಾಕ್ಸ್‌..ಸಚಿವೆ ಹೆಬ್ಬಾಳಕರ ಕುರಿತು ಕೀಳಾಗಿ ಮಾತನಾಡಿಲ್ಲ: ಸುಭಾಷ್‌ ಪಾಟೀಲ

| Published : Apr 15 2024, 01:20 AM IST

2ನೇ ಪುಟಕ್ಕೆ....ಲೀಡ್‌ ಬಾಕ್ಸ್‌..ಸಚಿವೆ ಹೆಬ್ಬಾಳಕರ ಕುರಿತು ಕೀಳಾಗಿ ಮಾತನಾಡಿಲ್ಲ: ಸುಭಾಷ್‌ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ: ಮಾಜಿ ಶಾಸಕ ಸಂಜಯ ಪಾಟೀಲ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕುರಿತು ಕೀಳಾಗಿ ಮಾತನಾಡಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್‌ ಪಾಟೀಲ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಓರ್ವ ಸಚಿವೆ ಹಾಗೂ ಮಹಿಳೆ ಕುರಿತು ಮಾಜಿ ಶಾಸಕ ಸಂಜಯ ಪಾಟೀಲ ಅವರು ಕೀಳು ಪದ ಬಳಕೆ ಮಾಡಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿಮಾಜಿ ಶಾಸಕ ಸಂಜಯ ಪಾಟೀಲ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕುರಿತು ಕೀಳಾಗಿ ಮಾತನಾಡಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್‌ ಪಾಟೀಲ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಓರ್ವ ಸಚಿವೆ ಹಾಗೂ ಮಹಿಳೆ ಕುರಿತು ಮಾಜಿ ಶಾಸಕ ಸಂಜಯ ಪಾಟೀಲ ಅವರು ಕೀಳು ಪದ ಬಳಕೆ ಮಾಡಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು ಅವರು, ಸಂಜಯ ಪಾಟೀಲ ಅವರು ಸಚಿವೆ ಹಾಗೂ ಮಹಿಳೆಯರ ಕುರಿತು ಕೀಳಾಗಿ ಮಾತನಾಡಿಯೇ ಇಲ್ಲ. ನಾನು ಕೂಡ ಭಾಷಣ ಕೇಳಿದ್ದೇನೆ ಎಂದರು.

ಬಿಜೆಪಿ ರಾಜ್ಯ ವಕ್ತಾರ ಎಂ.ಬಿ.ಜಿರಲಿ ಮಾತನಾಡಿ, ಮಾಜಿಶಾಸಕ ಸಂಜಯ ಪಾಟೀಲ ಅವರು ಮಾತನಾಡಿರುವುದನ್ನು ತಾವು ನೋಡಿದ್ದು, ಯಾವ ಸಂದರ್ಭದಲ್ಲಿ ಹಾಗೂ ಸಮಯದಲ್ಲಿ ಮಾತನಾಡಿದ್ದಾರೆ ಎಂಬುವುದರ ಕುರಿತು ಸಂಜಯ ಪಾಟೀಲ ಅವರನ್ನು ಕೇಳುತ್ತೇವೆ. ಮತ್ತು ಅದಕ್ಕೆ ಅವರೇ ಉತ್ತರ ಕೊಡಲಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಮಾಜಿಶಾಸಕ ಅನಿಲ್ ಬೆನಕೆ, ರಮೇಶ್ ದೇಶಪಾಂಡೆ, ಎಫ್‌.ಎಸ್.ಸಿದ್ದನಗೌಡರ, ರಾಜೇಂದ್ರ ಹರಕುಣಿ, ನಗರ ಸೇವಕ ಹನುಮಂತ ಕೊಂಗಾಲಿ ಉಪಸ್ಥಿತರಿದ್ದರು.ಕೋಟ್‌......ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಏ.17ರಂದು ನಾಮ ಪತ್ರ ಸಲ್ಲಿಕೆ ಮಾಡಲಿದ್ದಾರೆ. ಅಂದು ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ಶಾಸಕರು, ಸಂಸದರು, ಬೂತ್ ಮಟ್ಟದ ಕಾರ್ಯಕರ್ತರು ಭಾಗವಹಿಸಲಿದ್ದಾರೆ.ಸುಭಾಷ್‌ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷರು.