ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಮೂಡಿಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆ ಹಳೇ ಕಟ್ಟಡ ಕೊಠಡಿ ಮತ್ತು ಸಭಾಂಗಣದ ಹೆಂಚು ಅಳವಡಿಕೆ ಸೇರಿದಂತೆ ದುರಸ್ತಿ ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳುವಂತೆ ಶಾಸಕಿ ನಯನಾ ಮೋಟಮ್ಮ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.ಬುಧವಾರ ಚಿಕ್ಕಮಗಳೂರು ತಾಲೂಕಿನ ಲೊಕೋಪಯೋಗಿ ಇಲಾಖೆ ಎಇಇ ಮಲ್ಲಿಕಾರ್ಜುನ್ ಮತ್ತು ಎಇ ದರ್ಶನ್, ಮೂಡಿಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಧಿಕಾರಿ ಜಗದೀಶ್ ನಾಯಕ್ ಹಾಗೂ ಪ್ರೌಢ ಶಾಲೆ ಪ್ರಾಂಶುಪಾಲರೊಂದಿಗೆ ಸಭೆ ನಡೆಸಿದರು. ಈ ವೇಳೆ ಒಟ್ಟು ₹17.5 ಲಕ್ಷ ವೆಚ್ಚದಲ್ಲಿ ದುರಸ್ತಿ ಕಾಮಗಾರಿಗೆ ಕ್ರಿಯಾಯೋಜನೆ ಸಿದ್ಧಪಡಿಸ ಲಾಗಿದೆ. 10 ರಿಂದ 12 ಕೊಠಡಿಯಲ್ಲಿ ಹೆಂಚು, ಕಬ್ಬಿಣದ ಕಂಬಿ ಬದಲಾವಣೆ ಸೇರಿದಂತೆ ಮೊದಲಾದ ಕಾಮಗಾರಿ ನಡೆಸಬೇಕಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಶಾಸಕಿ ನಯನಾ ಮೋಟಮ್ಮ, ಮಳೆಗಾಲ ಆರಂಭಕ್ಕೂ ಮೊದಲು ಕಾಮಗಾರಿ ನಡೆಸಬೇಕು. ಕಾಮ ಗಾರಿಯಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಬಾರದು. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡು ಕೆಲಸ ಮಾಡುವಂತೆ ನಿರ್ದೇಶಿಸಿದರು.---ಬಾಕ್ಸ್---ಇತರೆ ಶಾಲೆಗಳನ್ನು ಪರಿಶೀಲಿಸಿ ವರದಿ ನೀಡಿಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳ ದುರಸ್ತಿ ಕಾಮಗಾರಿ ಕುರಿತು ವರದಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಾಸಕಿ ನಯನಾ ಮೋಟಮ್ಮ ಸೂಚಿಸಿದ್ದಾರೆ. ವರದಿಯಲ್ಲಿ ತುರ್ತು ಕಾಮಗಾರಿ ಆಗಬೇಕಾದ ಶಾಲೆಗಳ ಪಟ್ಟಿ ಗುರುತಿಸಿ ವರದಿ ನೀಡುವಂತೆ ತಿಳಿಸಲಾಗಿದೆ.---ಬಾಕ್ಸ್---
ಕನ್ನಡಪ್ರಭ ವರದಿ ಫಲಶೃತಿಹಾರಿ ಹೋದ ಹೆಂಚು, ದುರಸ್ತಿ ಕಾಣದ ಕೊಠಡಿ ಶೀರ್ಷಿಕೆಯಡಿ ಮೇ 11 ರ ಸಂಚಿಕೆಯಲ್ಲಿ ‘ಕನ್ನಡಪ್ರಭ’ ವಿಶೇಷ ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಆಡಳಿತ ವ್ಯವಸ್ಥೆ ಇದೀಗ ತ್ವರಿತವಾಗಿ ಶಾಲಾ ಕೊಠಡಿ ದುರಸ್ತಿ ಕಾಮಗಾರಿ ನಡೆಸುವುದಕ್ಕೆ ಮುಂದಾಗಿದೆ.