ಸಾರಾಂಶ
ಕನ್ನಡಪ್ರಭ ವಾರ್ತೆ, ಭದ್ರಾವತಿ
ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ಕ್ಷೇತ್ರದ ಜನರು ಎಂದಿಗೂ ಮರೆಯುವಂತಿಲ್ಲ. ಸದಾಕಾಲ ಕ್ಷೇತ್ರದ ಅಭಿವೃದ್ಧಿ ಹಾಗೂ ಬಡವರ ಪರವಾಗಿ ಶ್ರಮಿಸುವ ವ್ಯಕ್ತಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಹೆಚ್ಚಿನ ಅಧಿಕಾರ ಲಭಿಸುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕೆಂದು ನಗರಸಭೆ ಮಾಜಿ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ. ಮೋಹನ್ ಮನವಿ ಮಾಡಿದರು.ನಗರದ ವೀರಶೈವ ಸಭಾ ಭವನದಲ್ಲಿ ಭಾನುವಾರ ಅವರು ಕಾರ್ಮಿಕ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಲ್ಯಾಪ್ಟಾಪ್ ವಿತರಣೆ, ಕಾರ್ಪೆಂಟರ್ ವೃತ್ತಿನಿರತರಿಗೆ ಕಿಟ್ ವಿತರಣೆ ಹಾಗೂ ಜಿ +3 ಗುಂಪು ಮನೆಗಳ ಫಲಾನುಭವಿಗಳ ಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
4 ಚುನಾವಣೆಗಳಲ್ಲಿ ಕ್ಷೇತ್ರದ ಜನರ ವಿಶ್ವಾಸ ಗಳಿಸಿರುವ ಶಾಸಕರು, ಕ್ಷೇತ್ರದ ಇತಿಹಾಸದಲ್ಲೇ ಸುಮಾರು 8 ಸಾವಿರಕ್ಕೂ ಅಧಿಕ ಬಡವರ ಮನೆಗಳಿಗೆ ಹಕ್ಕುಪತ್ರ ಕೊಡಿಸಿರುವ ಏಕೈಕ ಜನನಾಯಕರಾಗಿದ್ದಾರೆ. ಕ್ಷೇತ್ರವನ್ನು ಮುಂದಿನ ಒಂದು ವರ್ಷದಲ್ಲಿ ಮಾದರಿ ಕ್ಷೇತ್ರವನ್ನಾಗಿ ರೂಪಿಸುತ್ತಾರೆಂಬ ವಿಶ್ವಾಸವಿದೆ ಎಂದರು.ದೇಶದಲ್ಲಿ ನುಡಿದಂತೆ ನಡೆದ ಸರ್ಕಾರ ಕಾಂಗ್ರೆಸ್ ಸರ್ಕಾರ. ಕೇವಲ 9 ತಿಂಗಳ ಅವಧಿಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಜನರು ಜನಪರ ಆಡಳಿತವನ್ನು ಆರಿಸುವಷ್ಟು ಬುದ್ಧಿವಂತರಾಗಿದ್ದಾರೆ. ಸುಳ್ಳು ಭರವಸೆಗಳಿಗೆ, ಆಶ್ವಾನೆಗಳಿಗೆ ಮರಳಾಗುವುದಿಲ್ಲ ಎಂದರು.
ಶಾಸಕ ಬಿ.ಕೆ.ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಿ, ಕಾರ್ಮಿಕರ ಮಕ್ಕಳಿಗೆ ಲ್ಯಾಪ್ಟಾಪ್, ಕಾರ್ಪೆಂಟರ್ ವೃತ್ತಿನಿರತರಿಗೆ ಕಿಟ್ ವಿತರಣೆಗಳನ್ನು ವಿತರಿಸಿದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಲ್ಕೀಷ್ ಬಾನು ಮಾತನಾಡಿ, ಈ ಹಿಂದೆಯೂ ಸರ್ಕಾರಗಳಿತ್ತು. ಆದರೆ, ಭದ್ರಾವತಿಯ ಬಹಳಷ್ಟು ಜನರಿಗೆ ಸೂರು ಒದಗಿಸಿರುವುದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ. ಕಾಂಗ್ರೆಸ್ ಪಕ್ಷ ಜನತೆಗೆ ವಾಗ್ದಾನ ನೀಡಿದಂತೆ ನಡೆದುಕೊಂಡಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನೇಕ ಯೋಜನೆಗಳ ಮೂಲಕ ಸ್ತ್ರೀಯರ ಸಬಲೀಕರಣಕ್ಕೆ ಕಾರಣವಾಗಿದೆ ಎಂದರು.
ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಮಾಜಿ ಅಧ್ಯಕ್ಷರಾದ ಶೃತಿ ವಸಂತಕುಮಾರ್, ಅನುಸುಧಾ ಮೋಹನ್, ಸದಸ್ಯರಾದ ಚೆನ್ನಪ್ಪ, ಮಣಿ, ಸುದೀಪ್ಕುಮಾರ್, ರಿಯಾಜ್, ಶ್ರೇಯಸ್, ಬಷೀರ್, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಎಸ್.ಕುಮಾರ್, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್. ಷಡಾಕ್ಷರಿ, ಪೌರಾಯುಕ್ತ ಪ್ರಕಾಶ್ ಎಂ. ಚೆನ್ನಪ್ಪನವರ್, ಕಾರ್ಮಿಕ ಇಲಾಖೆ ಆಯುಕ್ತ ಭೀಮೇಶ್, ಕಾಂಗ್ರೆಸ್ ಹಿರಿಯ ಮುಖಂಡರಾದ ಬಿ.ಕೆ ಜಗನ್ನಾಥ್, ಸಿ.ಎಂ ಖಾದರ್, ಮಣಿಶೇಖರ್, ರವಿಕುಮಾರ್, ಲಕ್ಷ್ಮೀದೇವಿ, ಸುಕನ್ಯರಾಜು, ಬಿ.ಎಸ್.ಗಣೇಶ್, ಈಶ್ವರಪ್ಪ, ಗಂಗಾಧರ್, ಸುಂದರ್ ಬಾಬು, ಮುಸ್ವೀರ್ ಬಾಷ, ದಿಲ್ ದಾರ್, ಎಂ.ಎಸ್ ಸುಧಾಮಣಿ, ಬದರಿನಾರಾಯಣ, ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ಅಂತೋಣಿ ಕ್ರೂಸ್, ವಿ. ವಿನೋದ್, ಚಂದ್ರಶೇಖರ್ ಸೇರಿದಂತೆ ಹಲವರು ಹಾಜರಿದ್ದರು.ಕಾರ್ಯಕ್ರಮದಲ್ಲಿ ಗಣೇಶ್ ಪ್ರಾರ್ಥಿಸಿದರು. ಎಂ.ಶಿವಕುಮಾರ್ ಮತ್ತು ಅಭಿಲಾಷ್ ನಿರೂಪಿಸಿ, ವಂದಿಸಿದರು.
- - - -ಡಿ10-ಬಿಡಿವಿಟಿ:ಕಾರ್ಮಿಕ ಇಲಾಖೆ ವತಿಯಿಂದ ಭದ್ರಾವತಿ ವೀರಶೈವ ಸಭಾ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಲ್ಯಾಪ್ಟಾಪ್ ವಿತರಣೆ, ಕಾರ್ಪೆಂಟರ್ ವೃತ್ತಿನಿರತರಿಗೆ ಕಿಟ್ ವಿತರಣೆ ಹಾಗೂ ಜಿ +3 ಗುಂಪು ಮನೆಗಳ ಫಲಾನುಭವಿಗಳ ಸಭೆ ಕಾರ್ಯಕ್ರಮ ಶಾಸಕ ಬಿ.ಕೆ.ಸಂಗಮೇಶ್ವರ್ ಉದ್ಘಾಟಿಸಿದರು.