ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ಜಾತ್ಯತೀತ ಜನತಾ ದಳದ ಜಿಲ್ಲಾ ಸಭೆಯು ಮಂಗಳೂರಿನ ಹೋಟೆಲ್ ವುಡ್ಲ್ಯಾಂಡ್ನಲ್ಲಿ ಮಾಜಿ ಜಿಲ್ಲಾಧ್ಯಕ್ಷ, ರಾಜ್ಯ ವಕ್ತಾರ ಎಂ.ಬಿ. ಸದಾಶಿವ ಅಧ್ಯಕ್ಷತೆಯಲ್ಲಿ ನಡೆಯಿತು.ಜಿಲ್ಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಅಹ್ಮದ್ ಮೂಲ್ಕಿ, ಪಕ್ಷ ಸಂಘಟನೆ ಕುರಿತು ಮಾತನಾಡಿದರು. ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಹೈದರ್ ಪರ್ತಿಪಾಡಿ, ಮಾಜಿ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಙಿ, ಕಾರ್ಯಾಧ್ಯಕ್ಷ ವಸಂತ ಪೂಜಾರಿ, ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಅಮರ ಶ್ರೀ ಅಮರನಾಥ್ ಶೆಟ್ಟಿ, ಮೀನುಗಾರಿಕಾ ಘಟಕದ ರಾಜ್ಯ ಅಧ್ಯಕ್ಷ ರತ್ನಾಕರ್ ಸುವರ್ಣ ಪಕ್ಷ ಸಂಘಟನೆ ಮತ್ತು ಹೊಸ ಸದಸ್ಯರ ಸೇರ್ಪಡೆ ಕುರಿತು ವಿವರಿಸಿದರು.
ಸಭೆಯಲ್ಲಿ ಪ್ರತೀ ತಿಂಗಳಿಗೊಮ್ಮೆ ಸಭೆ ಸೇರಿ ಪಕ್ಷದ ಕಾರ್ಯಚಟುವಟಿಕೆಗಳಿಗೆ ಪ್ರೋತ್ಸಾಹಿಸುವುದು, ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದ ಕುರಿತು ಜೂನ್ 30ರಂದು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತು.ಸಭೆಯಲ್ಲಿ ಎನ್.ಪಿ. ಪುಷ್ಪರಾಜನ್, ಪ್ರವೀಣ್ ಚಂದ್ರ ಜೈನ್, ಚಂದ್ರಹಾಸ್ ಸಾಲಿಯಾನ್, ಸುಮಿತ್ ಸುವರ್ಣ, ಆದರ್ಶ್ ಸುಧಾಕರ್, ಹಿತೇಶ್ ರೈ, ರತೀಶ್ ಕರ್ಕೇರ, ಪ್ರಿಯಾ ಸಾಲ್ಯಾನ್, ಭಾರತಿ ಪುಷ್ಪರಾಜನ್, ವೀನಾ ಜಯಂತ್ ಶೆಟ್ಟಿ, ಅಝೀಜ್ ಕುದ್ರೋಳಿ, ವಿನ್ಸೆಂಟ್ ಪಿರೇರಾ, ಮೊಹಮ್ಮದ್ ಆಲಿ ಬೆಂಗ್ರೆ, ಸತ್ತಾರ್, ಆಸಿಫ್ ಎಂಎಎಸ್, ಕಟೀಲ್ ಸಂಜೀವ, ಆರ್.ಧನರಾಜ್, ಅಕ್ಸಾ ಉಸ್ಮಾನ್, ನಿತೇಶ್ ಪೂಜಾರಿ, ಅಶ್ರಫ್ ಕಲ್ಲೇಗ, ನಝೀರ್ ಅಹ್ಮದ್ ಸಾಮನಿಗೆ, ಕನಕದಾಸ್ ಕೂಳೂರು, ಕೆ.ನಾಗೇಶ್ ಬಲ್ಮಠ, ರವೀಂದ್ರ ಉಳ್ಳಾಲ, ಮಂಗಳೂರು ಕ್ಷೇತ್ರಾಧ್ಯಕ್ಷ ಮೋಹನದಾಸ್ ಶೆಟ್ಟಿ ಮತ್ತಿತರಿದ್ದರು.