ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುರಂಗಾಯಣದ ಪ್ರಮುಖ ಹಬ್ಬವಾದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ನಗರದಲ್ಲಿ ವಿವಿಧ ನಾಟಕಗಳು ಮತ್ತು ಜಾನಪದ ಉತ್ಸವಗಳು ರಂಗಾಸಕ್ತರ ಮನಸೂರೆಗೊಂಡವು.ಬುಧವಾರ ರಂಗಾಯಣ ಆವರಣದ ಕಿಂದರಿಜೋಗಿ ಆವರಣದಲ್ಲಿ ಕೊಡಗಿನ ಬೋಳಕಾಟ್ ಮತ್ತು ತ್ತಿಯಾಟ ಜಾನಪದ ಕಲಾನೃತ್ಯವು ಸ್ಥಳೀಯ ಕಲೆಯನ್ನು ಅನಾವರಣಗೊಳಿಸಿತು. ಗಂಡುಮೆಟ್ಟಿದ ನಾಡು ಖ್ಯಾತಿಯ ಕೊಡಗಿನ ಪ್ರಮುಖ ಕಲೆಯಾದ ಕತ್ತಿಯಾಟ್ಕಣ್ಮನತಣಿಸಿತು. ನಂತರ ಮಹಾರಾಷ್ಟ್ರದ ಕಲಾವಿದರು ನೃತ್ಯ ಪ್ರದರ್ಶಿಸಿದರು.ಭೂಮಿಗೀತಾದಲ್ಲಿ ಜ್ಯೋತಿ ಡೋಗ್ರಾ ರಚನೆ ಮತ್ತು ನಿರ್ದೇಶನದ ಮೆಜೋಕ್ಬಹುಭಾಷಾ ನಾಟಕವನ್ನು ಮುಂಬೈನ ಮೆಜೋಕ್ತಂಡ ಪ್ರದರ್ಶಿಸಿತು. ಕಿರುರಂಗ ಮಂದಿರದಲ್ಲಿ ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ರಚನೆ ಮತ್ತು ಆಸಿಫ್ಕ್ಷತ್ರಿಯ ಮತ್ತು ಶ್ವೇತಾ ಶ್ರೀನಿವಾಸ್ನಿರ್ದೇಶನದ ಧರ್ಮನಟಿ ಕನ್ನಡ ನಾಟಕವನ್ನು ಬೆಂಗಳೂರಿನ ರಂಗರಥ ತಂಡದ ಕಲಾವಿದರು ಪ್ರಸ್ತುತಪಡಿಸಿದರು.ವನರಂಗದಲ್ಲಿ ಪಿ.ಬಿ. ಧುತ್ತರಗಿ ರಚನೆಯ ಬಿ. ಕುಮಾರಸ್ವಾಮಿ ನಿರ್ದೇಶನದ ಮುದುಕನ ಮದುವೆ ನಾಟಕವನ್ನು ಚಿತ್ರದುರ್ಗದ ಶ್ರೀ ಕುಮಾರೇಶ್ವರ ನಾಟಕ ಸಂಘದವರು ಪ್ರದರ್ಶಿಸಿದರು. ಕಲಾಮಂದಿರದಲ್ಲಿ ಮೊಗ್ಲಿ ನಾಟಕವನ್ನು ಮಂಗಳೂರಿನ ಧಮನಿ ಕುಂದಾಪುರ ಮತ್ತು ಕಲಾಭಿ ಚಿಲ್ಡ್ರನ್ಸ್ಥಿಯೋಟರ್ಕಲಾವಿದರು ಪ್ರಸ್ತುತಪಡಿಸಿದರು. ಭುವನ್ಮಣಿಪಾಲ್ಅವರು ಈ ನಾಟಕಕ್ಕೆ ರಂಗರೂಪ ನೀಡಿ ನಿರ್ದೇಶಿಸಿದ್ದರು.ಸಂಜೆ ಜನವೋ ಜನಬೆಳಗ್ಗೆ ರಂಗಾಯಣ ಆವರಣದಲ್ಲಿ ವಿರಳವಾಗಿದ್ದ ರಂಗಾಸಕ್ತರು ಮತ್ತು ಪ್ರೇಕ್ಷಕರು ಸಂಜೆ ವೇಳೆ ದಾಂಗುಡಿ ಇಟ್ಟರು.ಸಂಜೆ ಮಕ್ಕಳ ನಾಟಕೋತ್ಸವಕ್ಕೆ ಚಾಲನೆ ಮತ್ತು ನಾಲ್ಕು ನಾಟಕಗಳ ಪ್ರದರ್ಶನವಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಮಂದಿ ರಂಗಾಯಣದ ಕಡೆಗೆ ಹೆಜ್ಜೆ ಹಾಕಿದರು. ಅಲ್ಲದೆ ಅಲ್ಲಿನ ಪುಸ್ತಕ ಮೇಳ, ಆಹಾರ ಮೇಳ ಮತ್ತು ವಸ್ತು ಪ್ರದರ್ಶನಕ್ಕೂ ಜನ ಭೇಟಿ ನೀಡಿದರು.