ಅನುದಾನ ಬಳಸಿಕೊಳ್ಳಲು ಪುರಸಭೆಯಿಂದ ನಿರಾಸಕ್ತಿ

| Published : Nov 12 2025, 03:15 AM IST

ಅನುದಾನ ಬಳಸಿಕೊಳ್ಳಲು ಪುರಸಭೆಯಿಂದ ನಿರಾಸಕ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಮೂಡಲಗಿ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನವನ್ನು ಮೂಡಲಗಿ ತಾಲೂಕಿನ ಎಲ್ಲ ಗ್ರಾಮಗಳಿಗೂ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಆದರೆ, ಮೂಡಲಗಿ ಪುರಸಭೆಯವರು ನನ್ನ ಅನುದಾನ ಉಪಯೋಗಿಸಿಕೊಳ್ಳುವಲ್ಲಿ ನಿರಾಸಕ್ತಿ ತೋರಿದ್ದು, ಓಪನ್ ಜಿಮ್ ಮತ್ತು ಬಸ್ ಪ್ರಯಾಣಿಕರ ತಂಗುದಾಣಗಳ ಬೇಡಿಕೆಗಳಿಗೆ ಸ್ಥಳ ಒದಗಿಸುವಲ್ಲಿ ವಿಫಲರಾಗಿ ಪತ್ರ ಬರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಡಲಗಿ

ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನವನ್ನು ಮೂಡಲಗಿ ತಾಲೂಕಿನ ಎಲ್ಲ ಗ್ರಾಮಗಳಿಗೂ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಆದರೆ, ಮೂಡಲಗಿ ಪುರಸಭೆಯವರು ನನ್ನ ಅನುದಾನ ಉಪಯೋಗಿಸಿಕೊಳ್ಳುವಲ್ಲಿ ನಿರಾಸಕ್ತಿ ತೋರಿದ್ದು, ಓಪನ್ ಜಿಮ್ ಮತ್ತು ಬಸ್ ಪ್ರಯಾಣಿಕರ ತಂಗುದಾಣಗಳ ಬೇಡಿಕೆಗಳಿಗೆ ಸ್ಥಳ ಒದಗಿಸುವಲ್ಲಿ ವಿಫಲರಾಗಿ ಪತ್ರ ಬರೆದಿದ್ದಾರೆ. ಹೀಗಾಗಿ ಮೂಡಲಗಿ ತಾಲೂಕಿನ ಜನ ಇಂತಹ ಆಡಳಿತ ವ್ಯವಸ್ಥೆ ಬಗ್ಗೆ ಗಮನಹರಿಸುವ ಮತ್ತು ಚರ್ಚೆ ಮಾಡುವ ಅಗತ್ಯವಿದೆ ಎಂದು ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ಅಸಮಾಧಾನ ವ್ಯಕ್ತಪಡಿಸಿದರು.ಮೂಡಲಗಿ ಪಟ್ಟಣದ ದಾನಮ್ಮದೇವಿ ದೇವಸ್ಥಾನದ ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಮೂಡಲಗಿ ಪಟ್ಟಣದಲ್ಲಿ ಈಗಾಗಲೇ ರಾಜ್ಯಸಭಾ ಸಂಸದರ ನಿಧಿಯಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜನರೇಟರ್ ವಿತರಣೆಗೆ ₹5.25 ಲಕ್ಷ, ಗಂಗಾ ನಗರದ ಡಾ.ಬಿ.ಆರ್.ಅಂಬೇಡ್ಕರ ಭವನಕ್ಕೆ ಜೀಮ್ ಸಲಕರಣೆಗೆ ₹ 5 ಲಕ್ಷ, ಮೂಡಲಗಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕೆ ₹ 10 ಲಕ್ಷ, ವಿಶ್ವಭಾರತಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕೆ ₹ 10 ಲಕ್ಷ, ಸರಕಾರಿ ಪ್ರೌಢ ಶಾಲೆಗೆ ಸ್ಮಾರ್ಟ್‌ ಕ್ಲಾಸ್‌ ನಿರ್ಮಾಣಕ್ಕೆ ₹ 2.5 ಲಕ್ಷ ಸೇರಿದಂತೆ ಮೂಡಲಗಿ ಪಟ್ಟಣಕ್ಕೆ ₹ 37.75 ಲಕ್ಷ ಅನುದಾನ ನೀಡಿದ್ದೇನೆ. ನನ್ನ ಅಧಿಯಲ್ಲಿ ಎಷ್ಟು ಸಾಧ್ಯವೊ ಅಷ್ಟನ್ನು ಜನರಿಗೆ ಮುಟ್ಟಿಸುವೆ. ಆದರೆ, ಕೆಲವು ವಿಘ್ನ ಸಂತೋಷಿ ಜನ ಅಧಿಕಾರಿಗಳ ಮೂಲಕ ಅಡೆತಡೆಗಳನ್ನು ತರುವುದು ಸರಿಯಲ್ಲ. ಅಭಿವೃದ್ದಿ ಕಾರ್ಯಗಳಲ್ಲಿ ಸ್ಪರ್ಧೆ ಇರಬೇಕೇ, ಹೊರತು ಅಡೆತಡೆಗಳನ್ನು ಒಡ್ಡುವುದಲ್ಲ ಎಂದು ವಿರೋಧಿಗಳಿಗೆ ಸಲಹೆ ನೀಡಿದರು.ಪಟ್ಟಣ ಅಭಿವೃದ್ಧಿಗೆ ನಾನು ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಯುವಕರ ಅನುಕೂಲಕ್ಕಾಗಿ ಪಟ್ಟಣದಲ್ಲಿ ಒಂದು ಓಪನ್‌ ಜಿಮ್ ಸೌಲಭ್ಯಕ್ಕೆ ಪ್ರಯತ್ನಿಸುತ್ತಿದ್ದೇನೆ. ತಾವು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ತಾಲೂಕಿನ ಹುಣಶ್ಯಾಳ ಪಿ.ವೈ ಗ್ರಾಮದಲ್ಲಿ ಸಂಸದರ ನಿಧಿಯಿಂದ ಬಸ್ ಪ್ರಯಾಣಿಕರ ತಂಗುದಾಣ ಮತ್ತು ಹಳೆಯರಗುದ್ರಿ ಗ್ರಾಮದ ಮೈಲಾರಲಿಂಗ ದೇವಸ್ಥಾನ ಬಳಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿದರು.

ಪ್ರಮುಖರಾದ ಭೀಮಪ್ಪ ಹಂದಿಗುಂದ, ಶಿವಲಿಂಗಪ್ಪ ಗೋಕಾಕ, ಶಿವಬಸು ಹಂದಿಗುಂದ, ಮಾನಿಂಗಯ್ಯ ಹಿರೇಮಠ, ದಾನಯ್ಯ ಹಿರೇಮಠ, ಪಾಂಡು ಮಹೇಂದ್ರಕರ, ಜಗದೀಶ ತೇಲಿ, ಚೇತನ ನಿಶಾನಿಮಠ, ಯಲ್ಲಪ್ಪ ಗೋಕಾಂವಿ, ಯಲ್ಲಪ್ಪ ಸಣ್ಣಕ್ಕಿ, ಶಿವನಿಂಗ ಕುಂದರಗಿ, ಸೋಮಯ್ಯ ಹಿರೇಮಠ, ಮಹಾಲಿಂಗ ವಂಟಗೂಡೆ, ಕುಮಾರ ಗಿರಡ್ಡಿ, ಈರಪ್ಪ ಢವಳೇಶ್ವರ, ಬಸವರಾಜ ಗಾಡವಿ, ಶ್ರೀಕಾಂತ ಕೌಜಲಗಿ, ಮಹಾದೇವ ಮಸರಗುಪ್ಪಿ, ಹುಣಶ್ಯಾಳ ಪಿ.ವೈ ಗ್ರಾಮದ ಪ್ರಕಾಶ ಪಾಟೀಲ, ಹಣಮಂತ ಬಿಳ್ಳೂರ, ಮಲ್ಲಿಕಾರ್ಜುನ ಗೌಡನ್ನವರ, ಬಸವರಾಜ ನಿಡಗುಂದಿ, ಸಂತೋಷ ದಾಸರ, ರಾಮಚಂದ್ರಪ್ಪ ಉಪ್ಪಿನ, ಗೋಪಾಲ ಬಿಳ್ಳೂರ, ಹಳೇಯರಗುದ್ರಿ ಗ್ರಾಮದ ಗ್ರಾಪಂ ಸದಸ್ಯರಾದ ಹಣಮಂತ ಚನ್ನಾಳ, ಸಿದ್ದಪ್ಪ ಅಂಡಿಬಾಗ, ಶ್ರೀಶೈಲ ಪೂಜೇರಿ, ಪ್ರಕಾಶ ರಂಜನಗಿ, ಗಂಗಾಧರ ಹಿರೇಮಠ, ಪ್ರಭು ಹಿರೇಮಠ, ಗಂಗಯ್ಯ ಮಠಪತಿ, ಮಲ್ಲಪ್ಪ ರಂಜನಗಿ, ಬಸವರಾಜ ರಂಜನಗಿ, ಸೇರಿದಂತೆ ಗ್ರಾಪಂ ಪಿಡಿಒ ಸ್ಥಳೀಯ ಮುಖಂಡರು ಹಾಜರಿದ್ದರು.