ನಗರದ ಎಲ್ಲೆಡೆ ಸಂಭ್ರಮದ ಬಕ್ರೀದ್ ಆಚರಣೆ

| Published : Jun 08 2025, 01:49 AM IST

ನಗರದ ಎಲ್ಲೆಡೆ ಸಂಭ್ರಮದ ಬಕ್ರೀದ್ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಬ್ಬದಲ್ಲಿ ಕುರಿಯನ್ನು ಕೊಯ್ದು ಮೂರು ಭಾಗ ಮಾಡಿ ಒಂದು ಬಡವರಿಗೆ, ಮತ್ತೊಂದು ನೆಂಟರಿಗೆ ಕೊಟ್ಟು ಮತ್ತೊಂದು ಭಾಗದಲ್ಲಿ ಅಡುಗೆಮಾಡಿ ಊಟ ಮಾಡುವುದು ಸಂಪ್ರದಾಯ

- ಕಾಲ್ತುಳಿತ ಮೃತಪಟ್ಟವರಿಗೆ ಮೌನಾಚರಣೆ---ಕನ್ನಡಪ್ರಭ ವಾರ್ತೆ ಮೈಸೂರುಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಹಬ್ಬವನ್ನು ಶನಿವಾರ ನಗರದಲ್ಲಿ ಮುಸ್ಲಿಂ ಬಾಂಧವರು ಸಡಗರ- ಸಂಭ್ರಮದಿಂದ ಆಚರಿಸಿದರು.ನಗರದ ತಿಲಕ್ ನಗರದ ಈದ್ಗಾ ಮೈದಾನ ಸೇರಿದಂತೆ ಮೂರು ಕಡೆಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಮುಂಜಾನೆಯಿಂದಲೇ ಸಾವಿರಾರು ಮಂದಿ ಮಕ್ಕಳು ಮತ್ತು ವೃದ್ಧರಾದಿಯಾಗಿ ಮಸೀದಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮನೆಯ ಎಲ್ಲಾ ಪುರುಷ ಸದಸ್ಯರು ತಮ್ಮ ಬಂಧುಗಳು ಹಾಗೂ ಸ್ನೇಹಿತರೊಡನೆ ಗುಂಪು ಗುಂಪಾಗಿ ಆಗಮಿಸಿ ಪ್ರಾರ್ಥಿಸಿದರು.ನಗರದ ತಿಲಕನಗರ, ರಾಜೀವ್ ನಗರ ಹಾಗೂ ಗೌಸಿಯಾನಗರ ಈದ್ಗಾ ಮೈದಾನಗಳಲ್ಲಿ ಏಕಕಾಲದಲ್ಲಿ ಪ್ರಾರ್ಥನೆ ಸಲ್ಲಿಸಿದರು. ತಿಲಕನಗರದ ಈದ್ಗಾ ಮೈದಾನದಲ್ಲಿ ಮೈಸೂರಿನ ಸರ್ ಖಾಜೀ ಹಜರತ್ ಮೌಲಾನಾ ಮಹಮ್ಮದ್ ಉಸ್ಮಾನ್ ಷರೀಫ್ ನೇತೃತ್ವದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಶ್ವೇತ ವಸ್ತ್ರಧಾರಿಗಳಾಗಿ ಕಂಗೊಳಿಸುತ್ತಿದ್ದ ಸಾವಿರಾರು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಬಳಿಕ ತಮ್ಮ ಪೂರ್ವಿಕರ ಸಮಾಧಿ ಬಳಿ ವಿಶೇಷ ಪೂಜೆ ಸಲ್ಲಿಸಿದರು. ಈ ಹಬ್ಬದಲ್ಲಿ ಕುರಿಯನ್ನು ಕೊಯ್ದು ಮೂರು ಭಾಗ ಮಾಡಿ ಒಂದು ಬಡವರಿಗೆ, ಮತ್ತೊಂದು ನೆಂಟರಿಗೆ ಕೊಟ್ಟು ಮತ್ತೊಂದು ಭಾಗದಲ್ಲಿ ಅಡುಗೆಮಾಡಿ ಊಟ ಮಾಡುವುದು ಸಂಪ್ರದಾಯ. ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಕುರಿಗಳ ಬೆಲೆ ಸ್ವಲ್ಪ ಹೆಚ್ಚಾಗಿತ್ತು. ಉದಯಗಿರಿ- ಮಹದೇವಪುರ ರಸ್ತೆ, ಬನ್ನಿಮಂಟಪ ಎಲ್.ಐ.ಸಿ ವೃತ್ತ, ಕ್ಯಾತವಾರನಹಳ್ಳಿ, ಕಲ್ಯಾಣಗಿರಿ ಮೊದಲಾದ ಕಡೆಗಳಲ್ಲಿ ಗೂಡ್ಸ್ ಆಟೋಗಳಲ್ಲಿ ಕುರಿಗಳನ್ನು ತಂದು ವ್ಯಾಪಾರ ಮಾಡಲಾಯಿತು.5 ರಿಂದ 15 ಸಾವಿರ, 20 ಸಾವಿರದವರೆಗೆ ಕುರಿ ವ್ಯಾಪಾರ ನಡೆಯಿತು. 12 ರಿಂದ 14 ಕೆಜಿ ಮಾಂಸ ಸಿಗುವ ಮರಿಗಳ ಬೆಲೆ 15 ಸಾವಿರದಾಟಿತ್ತು.ಪೊಲೀಸ್ ಬಿಗಿ ಬಂದೋಬಸ್ತ್ಪ್ರಾರ್ಥನಾ ಮಂದಿರದ ಬಳಿ ಬಿಗಿ ಪೊಲೀಸ್ ಬಂದೋ ಬಸ್ತ್ ನಿಯೋಜಿಸಲಾಗಿತ್ತು. ಮಂಡಿಮೊಹಲ್ಲಾ, ಅಶೋಕ ರಸ್ತೆ, ಸಾಡೇ ರಸ್ತೆ, ಅಕ್ಬರ್ ರಸ್ತೆ, ಕಲ್ಯಾಣಗಿರಿ, ಗೌಸಿಯಾನಗರ, ಎನ್.ಆರ್. ಮೊಹಲ್ಲಾ ಸೇರಿದಂತೆ ಇತರ ಕಡೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿತ್ತು.ಈದ್ಗಾ ಮೈದಾನದ ಒಳಗೆ ಮತ್ತು ಹೊರಗೆ ಪ್ರಾರ್ಥನೆ ಸಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರಿಂದ ಪೊಲೀಸರನ್ನು ನಿಯೋಜಿಸಲಾಗಿತ್ತು.ಡಿಸಿಪಿಗಳಾದ ಎಂ. ಮುತ್ತುರಾಜ್, ಕೆ.ಎಸ್. ಸುಂದರರಾಜ್, ಎಸಿಪಿಗಳು, ಇನ್ ಸ್ಪೆಕ್ಟರಗಳು ಬಂದೋಬಸ್ತ್ ನೋಡಿಕೊಂಡರೆ, ಆಯಕಟ್ಟಿನ ಸ್ಥಳಗಳಲ್ಲಿ ಸಿಎಆರ್ ತುಕಡಿ ನಿಯೋಜಿಸಲಾಗಿತ್ತು.