ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ನಡೆದ ನಾಡಕುಸ್ತಿ ಪಂದ್ಯಾವಳಿಯಲ್ಲಿ ಕೇವಲ 10 ಸೆಕೆಂಡಿನಲ್ಲಿ ಎದುರಾಳಿಯನ್ನು ಚಿತ್ಮಾಡುವ ಮೂಲಕ ಕಿರಣ್ಗೆಲುವು ಸಾಧಿಸಿದರು.ನಗರದ ಡಿ. ದೇವರಾಜ ಅರಸು ವಿವಿದೋದ್ದೇಶ ಕ್ರೀಡಾಂಗಣದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಎದುರಾಳಿ ಪವನ್ಅವರನ್ನು ಪಂದ್ಯ ಆರಂಭವಾದ 10 ಸೆಕೆಂಡಿನಲ್ಲಿ ಚಿತ್ಮಾಡಿದರು.ಇದಕ್ಕೂ ಮುನ್ನ ನಡೆದ ಪಂದ್ಯಾವಳಿಯಲ್ಲಿ ಕಾರ್ತಿಕ್ ಮತ್ತು ತಿಮ್ಮಣ್ಣೇಗೌಡ ಅವರು ಸಮಬಲ ಸಾಧಿಸಿದರು. ಸುಮಾರು 30 ನಿಮಿಷಗಳ ಕಾಲ ನಡೆದ ಈ ಪಂದ್ಯಾವಳಿಯಲ್ಲಿ ಇಬ್ಬರೂ ಯಾರಿಗೇನು ಕಡಿಮೆ ಇಲ್ಲ ಎಂಬಂತೆ ಹೋರಾಡಿದರು. ಕಿರಣ್ಮತ್ತು ಸಂಜು ಅವರು 27 ನಿಮಿಷಗಳ ಕಾಲ ಹೋರಾಟ ನಡೆಸಿದರು. ಅಂತಿಮವಾಗಿ ಸಂಜು ಗೆಲುವು ಸಾಧಿಸಿದರು.ಜೆ. ದಿವ್ಯಾ ಮತ್ತು ನಂದಿನಿ ಅವರ ನಡುವಿನ ಪಂದ್ಯಾವಳಿಯು 51 ಸೆಕೆಂಡಿನಲ್ಲಿ ಪೂರ್ಣಗೊಂಡಿತು. ಈ ಪಂದ್ಯಾವಳಿಯಲ್ಲಿ ದಿವ್ಯಾ ಅವರನ್ನು ನಂದಿನಿ ಮಣಿಸಿದರು.ಸಾದಿಕ್ಅವರನ್ನು ಮಹೇಶ್ 19 ಸೆಕೆಂಡಿನಲ್ಲಿ ಸೋಲಿಸಿದರೆ, ಚರಣ್ಅವರನ್ನು ಮೊಹಮ್ಮದ್ವಾಸಿಖ್ಖಾನ್35 ಸೆಕೆಂಡಿನಲ್ಲಿ ಪರಾಭವಗೊಳಿಸಿದರು. 2.30 ನಿಮಿಷದಲ್ಲಿ ವಿನಯ್ಕುಮಾರ್ಅವರು ಮನೋಜ್ಎದುರು ಸೋಲುಂಡರು. ಜಿ.ಆರ್. ಹರ್ಷವರ್ಧನ್ ಅವರು ಸಿ. ದರ್ಶನ್ ಎದುರು ಪರಾಭವಗೊಂಡರೆ, ಸಿ. ವರುಣ್ಅವರು ಕೆ. ಪ್ರೇಮಕುಮಾರ್ಅವರನ್ನು 35 ಸೆಕೆಂಡಿನಲ್ಲಿ ಮಣಿಸಿದರು.