ಮೈಸೂರು ಸಂಸ್ಥಾನವನ್ನು ಮಾದರಿಯನ್ನಾಗಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್: ಶ್ರೀನಿವಾಸ್

| Published : Jun 06 2025, 12:09 AM IST

ಮೈಸೂರು ಸಂಸ್ಥಾನವನ್ನು ಮಾದರಿಯನ್ನಾಗಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್: ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಜಾರಾಜರಾಗದೇ ಪ್ರಜಾಸೇವಕರಾಗಿ ನಾಡಿನ ಎಲ್ಲಾ ವರ್ಗದವರ ಬದುಕು ಹಸನಾಗಲು ನಾಲ್ವಡಿ ಶ್ರಮಿಸಿದರು. ಮೈಸೂರು ಭಾಗದ ಜನರ ಜೀವನ ಮಟ್ಟ ಸುಧಾರಿಸಲು ಕನ್ನಂಬಾಡಿ ಅಣೆಕಟ್ಟು ನಿರ್ಮಿಸಿ ಜನರಿಗೆ ನೀರಿನ ಅಭಾವ ತಪ್ಪಿಸಿದರು. ರೈತರು ಕೃಷಿ ಚಟುವಟಿಕೆ ಮಾಡಲು ನೆರವಾದರು.

ಪಾಂಡವಪುರ: ಮೈಸೂರು ಸಂಸ್ಥಾನವನ್ನು ಮಾದರಿಯಾಗಿ ರೂಪಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಉಪವಿಭಾಗಾಧಿಕಾರಿ ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಹಬ್ಬಗಳ ಆಚರಣೆ ಸಮಿತಿಯಿಂದ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ 141ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಕೃಷಿ, ಶಿಕ್ಷಣ, ಆರೋಗ್ಯ, ಸಾಹಿತ್ಯ, ಸಂಗೀತ, ಕಲೆ, ನೀರಾವರಿ ಕಾರ್ಖಾನೆಗಳ ಸ್ಥಾಪನೆ ಮೂಲಕ ಮೈಸೂರು ಸಂಸ್ಥಾನವನ್ನು ಭಾರತದಲ್ಲೇ ಮಾದರಿ ಸಂಸ್ಥಾನವನ್ನಾಗಿ ರೂಪಿಸಿದ್ದರು ಎಂದರು.

ಪ್ರಜಾರಾಜರಾಗದೇ ಪ್ರಜಾಸೇವಕರಾಗಿ ನಾಡಿನ ಎಲ್ಲಾ ವರ್ಗದವರ ಬದುಕು ಹಸನಾಗಲು ನಾಲ್ವಡಿ ಶ್ರಮಿಸಿದರು. ಮೈಸೂರು ಭಾಗದ ಜನರ ಜೀವನ ಮಟ್ಟ ಸುಧಾರಿಸಲು ಕನ್ನಂಬಾಡಿ ಅಣೆಕಟ್ಟು ನಿರ್ಮಿಸಿ ಜನರಿಗೆ ನೀರಿನ ಅಭಾವ ತಪ್ಪಿಸಿದರು. ರೈತರು ಕೃಷಿ ಚಟುವಟಿಕೆ ಮಾಡಲು ನೆರವಾದರು ಎಂದು ತಿಳಿಸಿದರು.

ಶಾಲಾ ಮಕ್ಕಳ ಪ್ರವಾಸಕ್ಕೆ ಬೇರೆಲ್ಲೂ ಹೋಗುವ ಅಗತ್ಯವಿಲ್ಲ. ಮೈಸೂರಿನ ಅರಮನೆ, ಮೃಗಾಲಯ, ಕನ್ನಂಬಾಡಿ ಅಣೆಕಟ್ಟು, ಮೈಸೂರು ವಿಶ್ವವಿದ್ಯಾನಿಲಯವನ್ನು ತೋರಿಸಿ, ಮೈಸೂರು ಒಂದು ಪುಟ್ಟ ಪ್ರಪಂಚ ಎಂದು ಹೇಳಿದರು.

ಇದೇ ವೇಳೆ ತಹಸೀಲ್ದಾರ್ ಎಸ್.ಸಂತೋಷ್, ಇ.ಒ.ಲೋಕೇಶ್‌ಮೂರ್ತಿ, ಎಂ.ಮಂಜುನಾಥ್, ಸಿ.ಆರ್.ರಮೇಶ್, ಅಂಕಯ್ಯ ಹಾಗೂ ಕಚೇರಿ ಸಿಬ್ಬಂದಿ ಹಾಜರಿದರು.