ಪ್ರತ್ಯೇಕ ಪ್ರಕರಣಗಳಲ್ಲಿ ಕುಖ್ಯಾತ ಸುಲಿಗೆಕೋರರ ಬಂಧನ

| Published : Jul 31 2024, 01:06 AM IST

ಪ್ರತ್ಯೇಕ ಪ್ರಕರಣಗಳಲ್ಲಿ ಕುಖ್ಯಾತ ಸುಲಿಗೆಕೋರರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಮನೆ ಕಳ್ಳತನ ಮಾಡುತ್ತಿದ್ದವನನ್ನು ಬಂಧಿಸಿ ಒಂದು ದ್ವಿಚಕ್ರ ವಾಹನ ಸೇರಿ ಸುಮಾರು ೬.೫ ಲಕ್ಷ ರು. ಮೌಲ್ಯದ ೮೦ ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ರಾಮನಗರ ಗ್ರಾಮಾಂತರ ಪೊಲೀಸರು ಸಫಲರಾಗಿದ್ದಾರೆ. ಬೆಂಗಳೂರಿನ ಹಳೇಗುಡದಹಳ್ಳಿಯ ನಾಗರಾಜ @ ಡೈಮಂಡ್ ನಾಗ (೩೨) ಬಂಧಿತ. ನಾಗರಾಜ ಸುಮಾರು ೧೯ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿಯೇ ಇವನ ಮೇಲೆ ೪ ಪ್ರಕರಣಗಳು ದಾಖಲಾಗಿದ್ದವು.

ಕನ್ನಡಪ್ರಭ ವಾರ್ತೆ ರಾಮನಗರ

ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಕುಖ್ಯಾತ ಸುಲಿಗೆಕೋರರನ್ನು ಬಂಧಿಸಿ ಮೂರು ದ್ವಿಚಕ್ರ ವಾಹನ ಸೇರಿದಂತೆ ೬ ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಬಿಡದಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಿಡದಿಯ ಭದ್ರಪುರ ಗ್ರಾಮದ ಚಂದ್ರಶೇಖರ್ @ ಮಾಟ (೨೭) ಹಾಗೂ ಬೆಂಗಳೂರು ದಕ್ಷಿಣದ ತಾವರೆಕೆರೆಯ ಸೋಮಶೇಖರ್ (೨೧) ಬಂಧಿತರು. ಕೆಲ ದಿನಗಳ ಹಿಂದೆ ಬಿಡದಿ ಹೋಬಳಿಯ ನೆಲ್ಲಿಗುಡ್ಡೆ ಕೆರೆಯ ಬಳಿ ಇರುವ ಕೆಂಚನಕುಪ್ಪೆ ಚಾನಲ್ ಬಳಿ ಗಾಣಕಲ್‌ಗೆ ಹೋಗುವ ರಸ್ತೆಯಲ್ಲಿ ವಕೀಲ ವಿಜಯ್ ಕುಮಾರ್ ಮುಖಕ್ಕೆ ಪೆಪರ್ ಸ್ಪ್ರೇ ಮಾಡಿ, ಎದೆಗೆ ಹಾಗೂ ಬಲಭುಜಕ್ಕೆ ಡ್ರ್ಯಾಗನ್‌ನಿಂದ ಚುಚ್ಚಿ ರಕ್ತ ಗಾಯ ಮಾಡಿ ಕೊಲೆಗೆ ಪ್ರಯತ್ನ ಮಾಡಿದ್ದ ಪ್ರಕರಣ ಇವರಿಬ್ಬರ ಮೇಲೆ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಈ ವೇಳೆ ೫೩ ಗ್ರಾಂನ ಎರಡು ಮಾಂಗಲ್ಯದ ಸರ, ಮೂರು ದ್ವಿಚಕ್ರ ವಾಹನ ಸೇರಿದಂತೆ ಸುಮಾರು ೬ ಲಕ್ಷ ರು. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಚಂದ್ರಶೇಖರ್ ಮೇಲೆ ೫೦ ಪ್ರಕರಣ: ಇನ್ನು ಬಂಧಿತ ಚಂದ್ರಶೇಖರ್ @ ಮಾಟ ಇದಲ್ಲದೇ ಸಾಕಷ್ಟು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಆತನ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಸುಲಿಗೆಗೆ ಸಂಬಂಧಿಸಿದಂತೆ ಸುಮಾರು ೫೦ ಪ್ರಕರಣಗಳು ದಾಖಲಾಗಿದ್ದವು. ೧೦ಕ್ಕೂ ಹೆಚ್ಚು ಪೊಲೀಸ್ ಠಾಣೆಗಳಲ್ಲಿ ವಾರಂಟ್ ಬಾಕಿ ಇತ್ತು. ಎಸ್.ಪಿ.ಕಾರ್ತಿಕ್ ರೆಡ್ಡಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ದಿನಕರ್ ಶೆಟ್ಟಿ ನೇತೃತ್ವದಲ್ಲಿ ಬಿಡದಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶಂಕರ ನಾಯ್ಕ, ದೇವರಾಜು, ಪಿಎಸ್‌ಐ ನರಸಿಂಹಮೂರ್ತಿ, ಸಿಬ್ಬಂದಿ ಶ್ರೀನಿವಾಸ್, ಅನ್ವರ್, ವಸಂತ್, ನರೇಶ್, ಪ್ರಜ್ವಲ್, ಸಂತೋಷ್, ಸದ್ದಾಂ, ಧನಂಜಯ್ಯ, ೪೧೬ ದೇವೆಂದ್ರ, ಗಂಗಾಧರ್, ಮಹದೇವಯ್ಯ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಮನೆಗಳ್ಳನ ಬಂಧನ:

ರಾಮನಗರ: ಮನೆ ಕಳ್ಳತನ ಮಾಡುತ್ತಿದ್ದವನನ್ನು ಬಂಧಿಸಿ ಒಂದು ದ್ವಿಚಕ್ರ ವಾಹನ ಸೇರಿ ಸುಮಾರು ೬.೫ ಲಕ್ಷ ರು. ಮೌಲ್ಯದ ೮೦ ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ರಾಮನಗರ ಗ್ರಾಮಾಂತರ ಪೊಲೀಸರು ಸಫಲರಾಗಿದ್ದಾರೆ. ಬೆಂಗಳೂರಿನ ಹಳೇಗುಡದಹಳ್ಳಿಯ ನಾಗರಾಜ @ ಡೈಮಂಡ್ ನಾಗ (೩೨) ಬಂಧಿತ. ನಾಗರಾಜ ಸುಮಾರು ೧೯ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿಯೇ ಇವನ ಮೇಲೆ ೪ ಪ್ರಕರಣಗಳು ದಾಖಲಾಗಿದ್ದವು. ಎಸ್.ಪಿ. ಕಾರ್ತಿಕ್ ರೆಡ್ಡಿ, ಡಿವೈಎಸ್‌ಪಿ, ದಿನಕರ್ ಶೆಟ್ಟಿ ಮಾರ್ಗದರ್ಶನದಲ್ಲಿ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ಪಿ.ಐ.ರಮೇಶ್ ನೇತೃತ್ವದಲ್ಲಿ ಪಿಎಸ್‌ಐಗಳಾದ ಜಾರ್ಜ್ ಪ್ರಕಾಶ್, ಸಿದ್ದರಾಜು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.