ಸಾರಾಂಶ
ರಾಷ್ಟ್ರೀಯ ಆರೋಗ್ಯ ಗುಣಮಟ್ಟ ಖಾತ್ರಿ ಸಮೀಕ್ಷೆಯು ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ವಿಸ್ತರಣೆಗೆ ಸಹಾಯಕವಾಗಲಿದೆ ಎಂದು ರಾಜ್ಯ ಆರೋಗ್ಯ ಅಧಿಕಾರಿ ಡಾ. ಸಂತೋಷ್ ತಿಳಿಸಿದರು. ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಿ ಅವರಿಗೆ ಸೌಲಭ್ಯಗಳ ವಿಸ್ತರಣೆ ಮಾಡಿ ಜನರಿಗೆ ಆದಷ್ಟು ಸೌಲಭ್ಯ ನೀಡುವುದು ರಾಷ್ಟ್ರೀಯ ಆರೋಗ್ಯ ಗುಣಮಟ್ಟ ಖಾತ್ರಿ ಸಮೀಕ್ಷೆಯ ಉದ್ದೇಶವಾಗಿದ್ದು, ಪ್ರಮುಖವಾಗಿ ಆಸ್ಪತ್ರೆಯಲ್ಲಿ ಸ್ವಚ್ಛತೆ, ಹೆರಿಗೆ ನಂತರದ ದೊರೆಯುವ ಸೌಲಭ್ಯಗಳು ಅಲ್ಲದೆ ದಾಖಲಾತಿಗಳ ನಿರ್ವಹಣೆ ದೊರೆಯುವ ಸೌಲಭ್ಯಗಳ ಬಗ್ಗೆ ಗಮನಹರಿಸಬೇಕು ಎಂದರು.
ಕನ್ನಡಪ್ರಭ ವಾರ್ತೆ ಬಸವಾಪಟ್ಟಣ
ರಾಷ್ಟ್ರೀಯ ಆರೋಗ್ಯ ಗುಣಮಟ್ಟ ಖಾತ್ರಿ ಸಮೀಕ್ಷೆಯು ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ವಿಸ್ತರಣೆಗೆ ಸಹಾಯಕವಾಗಲಿದೆ ಎಂದು ರಾಜ್ಯ ಆರೋಗ್ಯ ಅಧಿಕಾರಿ ಡಾ. ಸಂತೋಷ್ ತಿಳಿಸಿದರು. ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಿ ಅವರಿಗೆ ಸೌಲಭ್ಯಗಳ ವಿಸ್ತರಣೆ ಮಾಡಿ ಜನರಿಗೆ ಆದಷ್ಟು ಸೌಲಭ್ಯ ನೀಡುವುದು ರಾಷ್ಟ್ರೀಯ ಆರೋಗ್ಯ ಗುಣಮಟ್ಟ ಖಾತ್ರಿ ಸಮೀಕ್ಷೆಯ ಉದ್ದೇಶವಾಗಿದ್ದು, ಪ್ರಮುಖವಾಗಿ ಆಸ್ಪತ್ರೆಯಲ್ಲಿ ಸ್ವಚ್ಛತೆ, ಹೆರಿಗೆ ನಂತರದ ದೊರೆಯುವ ಸೌಲಭ್ಯಗಳು ಅಲ್ಲದೆ ದಾಖಲಾತಿಗಳ ನಿರ್ವಹಣೆ ದೊರೆಯುವ ಸೌಲಭ್ಯಗಳ ಬಗ್ಗೆ ಗಮನಹರಿಸಿ ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ಮಾಡುವುದು ಸೌಲಭ್ಯ ವಿಸ್ತರಣೆಯಿಂದ ಸರ್ಕಾರದ ವತಿಯಿಂದ ಹೆಚ್ಚಿನ ಅನುದಾನ ಪಡೆದು ಸೌಲಭ್ಯಗಳು ಹೆಚ್ಚು ಹೆಚ್ಚು ಸಿಗುವಂತೆ ಮಾಡುವುದು ರಾಷ್ಟ್ರೀಯ ಆರೋಗ್ಯ ಗುಣಮಟ್ಟ ಖಾತ್ರಿ ಸಮೀಕ್ಷೆ ಆಗಿದೆ.ಈ ಹಿನ್ನೆಲೆ ಆಸ್ಪತ್ರೆಗೆ ಬಸವಾಪಟ್ಟಣ ಪ್ರಾಥಮಿಕ ಆರೋಗ್ಯ ತಪಾಸಣಾ ಆರೋಗ್ಯಧಿಕಾರಿ ಡಾ. ಸಂತೋಷ್ ಭೇಟಿ ನೀಡಿ ಗ್ರಾಮದ ಪ್ರಾಥಮಿಕ ಆರೋಗ್ಯಕೇಂದ್ರದ ಆಡಳಿತಾಧಿಕಾರಿ ಡಾ. ಅನಿಲ್ ಕುಮಾರ್ ಮತ್ತು ಹಿರಿಯ ವೈದ್ಯಾಧಿಕಾರಿ ರಾಜೇಶ್ ಹಾಗೂ ಆಸ್ಪತ್ರೆ ಸಿಬ್ಬಂದಿ ವರ್ಗದವರಿಗೆ ಹಲವು ಸಲಹೆ ಸೂಚನೆಗಳನ್ನು ನೀಡಿದರು. ಬಸವಾಪಟ್ಟಣ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ಮತ್ತು ಡಾ.ರಾಜೇಶ್ ಆಸ್ಪತ್ರೆಯಲ್ಲಿ ಇಂತಹ ಸೌಲಭ್ಯಗಳು ದಾಖಲಾತಿಗಳ ಬಗ್ಗೆ ಉಪಕರಣಗಳ ಬಗ್ಗೆ ಸಮೀಕ್ಷಾಧಿಕಾರಿ ಡಾ. ಸಂತೋಷ್ ಅವರಿಗೆ ಮಾಹಿತಿ ಒದಗಿಸಿದರು.
ಇದೇ ವೇಳೆ ಆಸ್ಪತ್ರೆ ಸಿಬ್ಬಂದಿಯಾದ ಹಿರಿಯ ನಿರೀಕ್ಷಕ ಲೊಕೇಶ್ ಶೂಶ್ರೂಷಕಿಯರಾದ ಕೃಷ್ಣವೇಣಿ, ಲಕ್ಷ್ಮೀದೇವಿ ಸವಿತಾ, ಪದ್ಮಾ, ಪುಷ್ಪವತಿ, ಡಿ ದರ್ಜೆ ಸಹಾಯಕರಾದ ಇಲಿಯಾದ್ ಪಾಷ ವಿಜಯಕುಮಾರ್ ಸಂದೀಪ್, ಪ್ರಮೀಳಾ, ಪ್ರಯೋಗಾಲಯದ ತಜ್ಞರಾದ ರಾಘವೇಂದ್ರ ಹಾಜರಿದ್ದರು.