ಜಿಜ್ಞಾಸೆಯಿಂದ ಅಧ್ಯಯನ ಮಾಡಬೇಕು: ಕುತ್ಪಾಡಿ ಕೃಷ್ಣರಾಜ ಭಟ್

| Published : Sep 14 2025, 01:06 AM IST

ಜಿಜ್ಞಾಸೆಯಿಂದ ಅಧ್ಯಯನ ಮಾಡಬೇಕು: ಕುತ್ಪಾಡಿ ಕೃಷ್ಣರಾಜ ಭಟ್
Share this Article
  • FB
  • TW
  • Linkdin
  • Email

ಸಾರಾಂಶ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನಲ್ಲಿ ಯಕ್ಷಗಾನ ಸಂಘದಿಂದ ಉಪನ್ಯಾಸ, ಸಂವಾದ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಜೀವನದಲ್ಲಿ ಯಾವುದೂ ಸುಖವಾಗಿ ಸಿಗುವುದಿಲ್ಲ. ಕಷ್ಟಗಳನ್ನು ಎದುರಿಸಿ ಬದುಕಿನಲ್ಲಿ ಯಶಸ್ಸು ಕಾಣಬೇಕು ಎಂಬುವುದನ್ನು ರಾಮನೂ, ಕೃಷ್ಣನೂ ತೋರಿಸಿಕೊಟ್ಟಿರುವುದನ್ನು ರಾಮಾಯಣ, ಮಹಾಭಾರತದಲ್ಲಿ ಕಾಣಬಹುದು. ಜಿಜ್ಞಾಸೆಯಿಂದ ಅಧ್ಯಯನ ಮಾಡಬೇಕೆಂದು ಖ್ಯಾತ ವಿದ್ವಾಂಸ ಕುತ್ಪಾಡಿ ಕೃಷ್ಣರಾಜ ಭಟ್ಟ ಹೇಳಿದರು.ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನಲ್ಲಿ ಯಕ್ಷಗಾನ ಸಂಘದಿಂದ ಆಯೋಜಿಸಿದ ಉಪನ್ಯಾಸ, ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಧ್ಯಾಪಕರ ಮುಂದೆ ಕೂತು ಪಾಠ ಕೇಳುವುದರಿಂದ, ಮರುಚಿಂತನೆಯಿಂದ, ಸಹಪಾಠಿಗಳ ಜೊತೆ ಚರ್ಚೆಯಿಂದ ಹಾಗೂ ಜೀವನದ ಅನುಭವದ ಪಾಠದಿಂದ ಕಲಿಯಬೇಕು. ಕೆಟ್ಟ ಮೇಲೆ ಬುದ್ಧಿ ಬರುವುದು, ಬೇರೆಯವರ ತಪ್ಪುಗಳನ್ನು ಕಂಡು ಪಾಠ ಕಲಿಯುವುದು ಹೀಗೆ ಅನುಭವದ ಪಾಠಗಳು ಮುಖ್ಯ. ಅಧ್ಯಯನವೇ ಒಂದು ಪೂಜೆ. ತಲೆಬಾಗಿ ತಿಳಿಯುವ ಅಹಂಕಾರವಿಲ್ಲದೆ ಕಲಿಯುವ ಗುಣಬೇಕು. 5000 ವರ್ಷಗಳ ಹಿಂದೆ ಮಹಾಭಾರತ ನಡೆದಿತ್ತು ಎನ್ನುವುದನ್ನು ಸಂಶೋಧನೆಗಳು ತಿಳಿಸಿವೆ. ರಾಮಾಯಣ ಮಹಾಭಾರತದ ಕತೆಗಳು ಕೇವಲ ಕಾವ್ಯಗಳಲ್ಲ. ಮೌಲ್ಯಗಳನ್ನು, ಧರ್ಮದ ನೆಲೆಯನ್ನು, ಜೀವನದ ಪಾಠವನ್ನು ಹೇಳಿಕೊಡುವಂತಹವು. ಹಬ್ಬಗಳ ಮಹತ್ವವನ್ನು ಅರಿತು ಆಚರಿಸಿದರೆ ಉತ್ತಮ. ಕೃಷ್ಣ ಯಾವತ್ತಿಗೂ ಅತ್ತದ್ದಿಲ್ಲ ಎನ್ನುವುದೂ ನಾವು ಕಲಿಯಬೇಕಾದ್ದೆ. ಒಳ್ಳೆಯ ಕೆಲಸಗಳಲ್ಲಿ, ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಪ್ರಜೆಯಾಗುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಇರಬೇಕೆಂದು ಅವರು ಹೇಳಿದರು.

ಕಾಲೇಜಿನ ಪ್ರಾಂಶುಪಾಲೆ ಕುಸುಮಾವತಿ, ಯಕ್ಷಗಾನ ಗುರು ಲಕ್ಷ್ಮಣ ಮರಕಡ, ಉಪನ್ಯಾಸಕ ಚಂದ್ರಹಾಸ್, ಅಮೃತಾ, ವಿದ್ಯಾರ್ಥಿ ನಾಯಕ ಶಿವಮನ್ಯು ಉಪಸ್ಥಿತರಿದ್ದರು. ತಪಸ್ಯಾ ಸ್ವಾಗತಿಸಿದರು. ವೈಷ್ಣವಿ ನಿರೂಪಿಸಿದರು.