ವಿಪ್ರ ಬಾಂಧವರು ಸಂಘಟಿತರಾಗಿ: ಬಾಲಸುಬ್ರಮಣ್ಯ ಅಯ್ಯರ್

| Published : Jan 02 2024, 02:15 AM IST

ಸಾರಾಂಶ

ರಾಮನಗರ: ವಿಪ್ರ ಬಾಂಧವರು ವಿವಿಧ ದೇವರ ಸೇವೆ ಮಾಡುವ ಮೂಲಕ ಸಂಘಟಿತರಾಗಬೇಕು ಎಂದು ವಿಪ್ರ ಯುವ ಸೇವಾ ಟ್ರಸ್ಟ್ ತಾಲೂಕು ಅಧ್ಯಕ್ಷ ಎಸ್.ಬಾಲಸುಬ್ರಮಣ್ಯ ಅಯ್ಯರ್ ಹೇಳಿದರು.

ರಾಮನಗರ: ವಿಪ್ರ ಬಾಂಧವರು ವಿವಿಧ ದೇವರ ಸೇವೆ ಮಾಡುವ ಮೂಲಕ ಸಂಘಟಿತರಾಗಬೇಕು ಎಂದು ವಿಪ್ರ ಯುವ ಸೇವಾ ಟ್ರಸ್ಟ್ ತಾಲೂಕು ಅಧ್ಯಕ್ಷ ಎಸ್.ಬಾಲಸುಬ್ರಮಣ್ಯ ಅಯ್ಯರ್ ಹೇಳಿದರು.

ನಗರದ ಶ್ರೀ ರಾಮದೇವ ಕಲ್ಯಾಣ ಮಂಟಪದಲ್ಲಿ 11ನೇ ವರ್ಷದ ಶ್ರೀ ಹನುಮ ಜಯಂತಿ ಮಹೋತ್ಸವ ಹಾಗೂ 18ನೇ ವರ್ಷದ ಯುವ ಸೇವಾ ಟ್ರಸ್ಟ್ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಜನಾಂಗಕ್ಕೆ ಯಾವುದೇ ಸೌಲಭ್ಯಗಳು ಸರ್ಕಾರದಿಂದ ಸಿಗುತ್ತಿಲ್ಲ ನಮ್ಮ ವಿದ್ಯೆಯ ಅನುಸಾರ ನಾವು ಹುದ್ದೆಗಳನ್ನು ಪಡೆಯುತ್ತಿದ್ದೇವೆ. ಬ್ರಾಹ್ಮಣರ ಕೊಡುಗೆ ಈ ದೇಶದಲ್ಲಿ ಸಾಕಷ್ಟಿದ್ದು ನಾವು ವಿದ್ಯೆ ಮೂಲಕವೇ ಎಲ್ಲಾ ಸೌಲಭ್ಯಗಳನ್ನು ನಾವೇ ಪಡೆಯಬೇಕಾಗಿದ್ದು ಈ ಸಮಯದಲ್ಲಿ ನಾವೆಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದರು.

ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, 500 ವರ್ಷಗಳಿಂದಲೂ ಶ್ರೀರಾಮ ಜನಿಸಿದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕನಸು ಈಗ ನನಸಾಗುತ್ತಿದ್ದು ಇನ್ನೂ 22 ದಿನಗಳ ನಂತರ ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಮಂದಿರ ಮಂದಿರ ನಿರ್ಮಾಣವಾಗುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.

ರಾಮನ ಪಾದರಕ್ಷ ಮಾಡಿದ ರಾಮನಗರದವರಿಗೆ ಇದು ಮತ್ತೊಂದು ಹೆಮ್ಮೆಯ ಸಂಗತಿಯಾಗಿದ್ದು ಹನುಮ ಜಯಂತಿ ಮಾಡುವ ಮೂಲಕ ರಾಮನನ್ನು ಎಲ್ಲರೂ ನೆನೆಸಿಕೊಂಡಿರುವುದು ಸಂತೋಷವಾಗಿದ್ದು 2024 ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಹಾರೈಸಿದರು.

ಹನುಮ ಜಯಂತಿ ಅಂಗವಾಗಿ ಶ್ರೀ ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ಶ್ರೀ ರಾಮ ದೇವರಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ಅಭಯ ಆಂಜನೇಯ ಸ್ವಾಮಿ, ಶ್ರೀ ರಾಮದೇವರು, ಶ್ರೀ ಶ್ರೀನಿವಾಸ ದೇವರ ಉತ್ಸವಮೂರ್ತಿ ಅದ್ದೂರಿ ಮೆರವಣಿಗೆ ಮಾಡಲಾಯಿತು. ಮಂಗಳಾರತಿ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ನೂತನ ಅಧ್ಯಕ್ಷರ ಆಯ್ಕೆ: ರಾಮನಗರ ತಾಲೂಕು ವಿಪ್ರ ಯುವ ಸೇವಾ ಟ್ರಸ್ಟ್ ನೂತನ ಅಧ್ಯಕ್ಷರಾಗಿ ಟಿ.ಕೇಶವ ವೈದ್ಯ, ಕಾರ್ಯದರ್ಶಿಯಾಗಿ ಬಿ.ಆರ್.ಉಮೇಶ್ ಶಾಸ್ತ್ರಿ, ಖಜಾಂಚಿಯಾಗಿ ಟಿ.ಆರ್. ವಿಜಯಕುಮಾರ್ ರವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.

ಪಿ.ವೈ.ರವೀಂದ್ರ ಹೇರ್ಳೆ, ವಿಪ್ರ ಮಹಿಳಾ ಮಂಡಳಿ ಅಧ್ಯಕ್ಷರಾದ ಸರಸ್ವತಿ ರಾಮಗೋಪಾಲ್, ಕಾರ್ಯದರ್ಶಿ ಶಾಂತಬಾಯಿ, ಶ್ರೀ ಶಂಕರ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಶೇಷಾದ್ರಿ ಅಯ್ಯರ್, ಚಂದ್ರಶೇಖರ್ ಭಟ್ ಹಾಜರಿದ್ದರು.

31ಕೆಆರ್ ಎಂಎನ್‌ 5.ಜೆಪಿಜಿ

ರಾಮನಗರದಲ್ಲಿ ವಿಪ್ರ ಯುವ ಸೇವಾ ಟ್ರಸ್ಟ್ ವತಿಯಿಂದ 11ನೇ ವರ್ಷದ ಹನುಮ ಜಯಂತಿ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು.