ಹನುಮಸಾಗರ: ವಿದ್ಯಾರ್ಥಿಗಳು ಮುಂದಿನ ಭವಿಷ್ಯದಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಸನ್ಮಾನ ನೆರವೇರಿಸಲಾಗುತ್ತದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.

ಸಮೀಪದ ನಿಲೋಗಲ್ ಗ್ರಾಮದಲ್ಲಿ ಹನುಮನಾಳ ಹೋಬಳಿ ವ್ಯಾಪ್ತಿಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಕರವೇ ಘಟಕದಿಂದ ಸನ್ಮಾನ ಹಾಗೂ ಮುಂದಿನ ಭವಿಷ್ಯ ಗುರಿಗೆ ಪ್ರೋತ್ಸಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದು ವಿದ್ಯಾರ್ಥಿಗಳ ಜೀವನ ರೂಪಿಸುವ ಮೊದಲ ಮೆಟ್ಟಿಲು. ಶಿಕ್ಷಣದ ಮಹತ್ವ ವಿದ್ಯಾರ್ಥಿಗಳು ಗುರಿ ಮುಟ್ಟುವ ಮೂಲಕ ಸಾಗಬೇಕು.ಇದರಲ್ಲಿ ಪೋಷಕರ ಹಾಗೂ ಶಿಕ್ಷಕರ ಶ್ರಮವು ಮುಖ್ಯವಾಗಿದೆ ಎಂದರು.

ಉಪನ್ಯಾಸಕ ಸಂಜಯ ಬಡಿಗೇರ, ರವೀಂದ್ರ ವಡ್ಡರ, ಎಸ್ಡಿಎಂಸಿ ಅಧ್ಯಕ್ಷ ಯಮನೂರಪ್ಪ ಗಾಜಿ, ಭೀಮನಗೌಡ ಪಾಟೀಲ್, ಭರಮಪ್ಪ ವಡ್ಡರ, ರಾಮಣ್ಣ ಗುಜ್ಜಲ, ಮುದಿಯಪ್ಪ ವಡ್ಡರ, ಚಂದಪ್ಪ ಹೊಟ್ಟಿ,ರಂಗಪ್ಪ ಮಿಟ್ಲಕೋಡ್, ಧರ್ಮಣ್ಣ ಗುಜ್ಜಲ, ಹೊರಗೊಪ್ಪ ವಡ್ಡರ, ಶೇಖಪ್ಪ ವಡ್ಡರ, ನಾಗೇಶ ವಡ್ಡರ, ಮಲ್ಲು ಗಾಜಿ, ಪ್ರಾಥಮಿಕ, ಪ್ರೌಢ ಶಾಲೆಗಳ ಮುಖ್ಯಶಿಕ್ಷಕರು ಇದ್ದರು.