ದಾರ್ಶನಿಕರ ಸಂದೇಶದಿಂದ ವಿಶ್ವದಲ್ಲಿ ಶಾಂತಿ

| Published : Mar 23 2024, 01:04 AM IST

ಸಾರಾಂಶ

ಮಾನವನ ದಾನದ ಗುಣ ದಹಿಸಿ ಆತನನ್ನು ಮಹಾದೇವನನ್ನಾಗಿಸುವ ಅಪೂರ್ವ ಸಿದ್ಧಾಂತ ಜಗದ್ಗುರು ರೇಣುಕಾಚಾರ್ಯ ನೀಡಿದರು. ಜೀವಿ ಶಿವನಾಗುವ ಅಂಗ ಲಿಂಗವಾಗುವ ಅದ್ಭುತ ಸಿದ್ಧಾಂತ ಜಗತ್ತಿಗೆ ಭೋದಿಸುವುದರ ಮೂಲಕ ಪ್ರತಿಯೊಬ್ಬರು ಸತ್ಯ ನಿಷ್ಠೆ ಕಾಯಕದ ಹಾದಿಯಲ್ಲಿ ಬದುಕನ್ನು ಕಟ್ಟಿಕೊಳ್ಳವಂತಹ ವಿಚಾರಗಳನ್ನು ಸಾರಿದ ಮಹಾನ ಚೇತನರು

ಡಂಬಳ: ಜಗತ್ತಿನಾದ್ಯಂತ ಪ್ರತಿ ಧರ್ಮದ ದಾರ್ಶನಿಕರು ಹಾಕಿಕೊಟ್ಟ ವಿಚಾರಧಾರೆಗಳು ವಿಶ್ವಕ್ಕೆ ಶಾಂತಿ ತಂದು ಕೊಡುತ್ತದೆ.ಶಾಂತಿಯುತ ಸಹಬಾಳ್ವೆಯ ಸಮಾಜ ನಿರ್ಮಾಣಕ್ಕೆ ಸಂದೇಶಗಳನ್ನು ರೇಣುಕಾಚಾರ್ಯರು ಸಾರಿದ್ದಾರೆ. ಅವರು ಹಾಕಿಕೊಟ್ಟ ಸಂದೇಶಗಳನ್ನು ಅರ್ಥ ಮಾಡಿಕೊಂಡು ನಡೆದಾಗ ಮಾತ್ರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದು ಸಮಾಜದ ಹಿರಿಯರಾದ ಸಿದ್ದಲಿಂಗಯ್ಯ ಸ್ಥಾವರಮಠ ಹೇಳಿದರು.

ಡಂಬಳ ಗ್ರಾಮದ ಜಂಗಮ ಸೇವಾ ಸಮಿತಿ ವತಿಯಿಂದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೇಣುಕಾಚಾರ್ಯ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ರೇಣುಕಾಚಾರ್ಯರು ಶ್ರೇಷ್ಠ ಸಂತ ಹಾಗೂ ಪವಾಡ ಪುರುಷರಾಗಿದ್ದರು. ಜಾತ್ಯತೀತ ಮಾನೋಭಾವವನ್ನು ಅಂದಿನ ಕಾಲದಲ್ಲಿ ಸಾರಿದವರು. ಅವರು ಹಾಕಿ ಕೊಟ್ಟ ವಿಚಾರಗಳು ಸದಾಕಾಲ ಇರುತ್ತವೆ ಎಂದು ಹೇಳಿದರು.

ಮಂಜಯ್ಯಸ್ವಾಮಿ ಅರವಟಿಗಿಮಠ, ಕುಮಾರಸ್ವಾಮಿ ಹೆಬ್ಬಳ್ಳಿಮಠ ಮಾತನಾಡಿ, ಮಾನವನ ದಾನದ ಗುಣ ದಹಿಸಿ ಆತನನ್ನು ಮಹಾದೇವನನ್ನಾಗಿಸುವ ಅಪೂರ್ವ ಸಿದ್ಧಾಂತ ಜಗದ್ಗುರು ರೇಣುಕಾಚಾರ್ಯ ನೀಡಿದರು. ಜೀವಿ ಶಿವನಾಗುವ ಅಂಗ ಲಿಂಗವಾಗುವ ಅದ್ಭುತ ಸಿದ್ಧಾಂತ ಜಗತ್ತಿಗೆ ಭೋದಿಸುವುದರ ಮೂಲಕ ಪ್ರತಿಯೊಬ್ಬರು ಸತ್ಯ ನಿಷ್ಠೆ ಕಾಯಕದ ಹಾದಿಯಲ್ಲಿ ಬದುಕನ್ನು ಕಟ್ಟಿಕೊಳ್ಳವಂತಹ ವಿಚಾರಗಳನ್ನು ಸಾರಿದ ಮಹಾನ ಚೇತನರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಚೆನ್ನವೀರಯ್ಯ ಹೆಬ್ಬಳಿಮಠ, ಬಸಯ್ಯ ಹಡಗಲಿಮಠ, ಸಿದ್ದು ಹಿರೇಮಠ, ಸಿದ್ಧಲಿಂಗಯ್ಯ ಕಾಡಸಿದ್ದೇಶ್ವರಮಠ, ವೀರಯ್ಯ ನರೇಗಲ್ಲಮಠ, ರೇವಣಸಿದ್ಧಯ್ಯ ಹಿರೇಮಠ, ವೀರಣ್ಣ ಕರವೀರಮಠ, ಅಶೋಕ ಹಡಗಲಿಮಠ, ಮಲ್ಲಯ್ಯ ಅರವಟಗಿಮಠ, ಶಿವರುದ್ರಯ್ಯ ಗಂಧದ, ರೇವಣಸಿದ್ದಯ್ಯ ಹಿರೇಮಠ, ಬಸಯ್ಯ ಹಿರೇಮಠ, ಚೆನ್ನಯ್ಯ ಕಾಡಸಿದ್ಧೆಶ್ವರಮಠ, ಫಕ್ಕಿರಯ್ಯ ಅರವಟಗಿಮಠ, ವಿರಣ್ಣ ಕರವೀರಮಠ, ನಾಗಯ್ಯ ಕರವೀರಮಠ, ಅಪ್ಪಯ್ಯ ಹಿರೇಮಠ, ಹಾಲಯ್ಯ ಹಿರೇಮಠ, ಶರಣಯ್ಯ ಸಾರಂಗಮಠ, ವೀರಯ್ಯ ಕಾಡಸಿದ್ದೇಶ್ವರಮಠ ಮಹಿಳೆಯರು ಯುವಕರು ಇದ್ದರು.