ಪತ್ರಾಗಾರ ಇಲಾಖೆ ಇರುವ ಬಗ್ಗೆ ಜನರಿಗೆ ತಿಳಿದಿಲ್ಲ: ಡಾ.ಗವಿಸಿದ್ದಯ್ಯ

| Published : Oct 26 2024, 12:49 AM IST / Updated: Oct 26 2024, 12:50 AM IST

ಪತ್ರಾಗಾರ ಇಲಾಖೆ ಇರುವ ಬಗ್ಗೆ ಜನರಿಗೆ ತಿಳಿದಿಲ್ಲ: ಡಾ.ಗವಿಸಿದ್ದಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಇತಿಹಾಸಕ್ಕೆ ಸಂಬಂಧಿಸಿದಂತೆ ಸಂಶೋಧನೆ ಕೈಗೊಳ್ಳುವಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳು ಪತ್ರಗಾರ ಇಲಾಖೆಯಲ್ಲಿ ಅಂದಿನ ಮೈಸೂರು ಸಂಸ್ಥಾನ, ನಂತರ 1934ರಲ್ಲಿ ರಚನೆಗೊಂಡ ಮಂಡ್ಯ ಜಿಲ್ಲೆಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಪಡೆದು ಅಭ್ಯಾಸಿಸಬಹುದು.

ಕನ್ನಡಪ್ರಭ ವಾರ್ತೆ ಭಾರತೀನಗರ

ರಾಜ್ಯದ ಬಹುತೇಕ ಜನರಿಗೆ ರಾಜ್ಯ ಪತ್ರಾಗಾರ ಇಲಾಖೆ ಇದೆ ಎಂಬುದೇ ತಿಳಿದಿಲ್ಲ. ಪತ್ರಗಾರ ಇಲಾಖೆಯಲ್ಲಿ 1884 ರಿಂದ 2014ರವರೆಗೆ ಹಲವು ಐತಿಹಾಸಿಕ ದಾಖಲೆಗಳನ್ನು ಸಂಗ್ರಹಿಸಿ ಇಡಲಾಗಿದೆ ಎಂದು ರಾಜ್ಯ ಪತ್ರಗಾರ ಇಲಾಖೆ ನಿರ್ದೇಶಕ ಡಾ.ಗವಿಸಿದ್ದಯ್ಯ ತಿಳಿಸಿದರು.

ಭಾರತೀ ಕಾಲೇಜು ಕುವೆಂಪು ಸಭಾಂಗಣದಲ್ಲಿ ರಾಜ್ಯ ಪತ್ರಗಾರ ಇಲಾಖೆ, ವಿಭಾಗೀಯ ಪತ್ರಗಾರ ಕಚೇರಿ, ಮೈಸೂರು, ಭಾರತೀ ಕಾಲೇಜು, ಇತಿಹಾಸ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಚಾರಿತ್ರಿಕ ದಾಖಲೆಗಳಲ್ಲಿ ಮಂಡ್ಯ ಜಿಲ್ಲೆಯ ಇತಿಹಾಸ ವಿಚಾರ ಕುರಿತು ಗುರುವಾರ ಆರಂಭಗೊಂಡ ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಇತಿಹಾಸಕ್ಕೆ ಸಂಬಂಧಿಸಿದಂತೆ ಸಂಶೋಧನೆ ಕೈಗೊಳ್ಳುವಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳು ಪತ್ರಗಾರ ಇಲಾಖೆಯಲ್ಲಿ ಅಂದಿನ ಮೈಸೂರು ಸಂಸ್ಥಾನ, ನಂತರ 1934ರಲ್ಲಿ ರಚನೆಗೊಂಡ ಮಂಡ್ಯ ಜಿಲ್ಲೆಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಪಡೆದು ಅಭ್ಯಾಸಿಸಬಹುದು. ಪತ್ರಗಾರ ಇಲಾಖೆ ಇರುವುದೇ ಇಂತಹ ಇತಿಹಾಸಗಳ ಸೃಷ್ಟಿಗಾಗಿ ಎಂದರು.

ಭಾರತೀ ಕಾಲೇಜು ಪ್ರಾಂಶುಪಾಲ ಡಾ.ಎಂ.ಎಸ್.ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಭಾರತೀ ಕಾಲೇಜು ಇತಿಹಾಸ ವಿಭಾಗದ ಮುಖ್ಯಸ್ಥೆ ಸುಜಾತ ಟಿ. ಪ್ರಸ್ತಾವಿಕ ಭಾಷಣ ಮಾಡಿದರು.

ಇದೇ ವೇಳೆ ವಿಭಾಗೀಯ ಪತ್ರಗಾರ ಕಚೇರಿ ಹಿರಿಯ ಸಹಾಯಕ ನಿರ್ದೇಶಕ ಎಚ್.ಎಲ್.ಮಂಜುನಾಥ್ , ಭಾರತೀ ಕಾಲೇಜು ಸ್ನಾತಕೋತ್ತರ ಕೇಂದ್ರದ ಡೀನ್ ಎಸ್.ನಾಗರಾಜು, ಮೈಸೂರು ಮಹಾರಾಜ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ಆರ್.ಡಿ ಪವಮಾನ, ಸಂಯೋಜಕರಾದ ಡಾ.ಬಿ.ಸಿ.ಬಾಬು, ಇತಿಹಾಸ ವಿಭಾಗದ ಮುಖ್ಯಸ್ಥೆ ಎ.ಸಿ.ಮಾನಸ, ಉಪನ್ಯಾಸಕ ಎಚ್.ಹರ್ಷವರ್ಧನ್, ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ಸಿ.ಸುಂದ್ರೇಶ್ ಸೇರಿದಂತೆ ಹಲವರಿದ್ದರು.