ಜನರು ಎಚ್ಐವಿ ಕಾಯಿಲೆ ಹರಡದಂತೆ ಜಾಗೃತರಾಗಿರಬೇಕು

| Published : Dec 15 2024, 02:00 AM IST

ಜನರು ಎಚ್ಐವಿ ಕಾಯಿಲೆ ಹರಡದಂತೆ ಜಾಗೃತರಾಗಿರಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಏಡ್ಸ್ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಜನಜಾಗೃತಿ ಜಾಥಾಕ್ಕೆ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಚಂಪಾಶ್ರೀ, 2ನೇ ಅಧಿಕ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಎಂ.ರಘು, ತಾಲೂಕು ಆರೋಗ್ಯ ಅಧಿಕಾರಿ ಡಾ. ಪುಷ್ಪಲತಾ ಅವರು ಚಾಲನೆ ನೀಡಿದರು. ಶುದ್ಧೀಕರಿಸಿರುವಂತ ಹೊಸದಾದ ಸೂಜಿಯನ್ನು ಬಳಸಬೇಕು. ಪರೀಕ್ಷಿಸಿದ ರಕ್ತವನ್ನು ಸ್ವೀಕರಿಸಬೇಕು. ಈ ಎಲ್ಲಾ ವಿಧಾನಗಳನ್ನು ಅಳವಡಿಸುವುದರಿಂದ ಎಚ್ಐವಿ ಕಾಯಿಲೆಯನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಏಡ್ಸ್ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಜನಜಾಗೃತಿ ಜಾಥಾಕ್ಕೆ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಚಂಪಾಶ್ರೀ, 2ನೇ ಅಧಿಕ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಎಂ.ರಘು, ತಾಲೂಕು ಆರೋಗ್ಯ ಅಧಿಕಾರಿ ಡಾ. ಪುಷ್ಪಲತಾ ಅವರು ಚಾಲನೆ ನೀಡಿದರು.

ಜನಜಾಗೃತಿ ಜಾಥಾ ಆಸ್ಪತ್ರೆಯಿಂದ ಪ್ರಾರಂಭಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ತಲುಪಿತು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಪುಷ್ಪಲತಾ ಅವರು ಮಾತನಾಡಿ, ಡಿ.1ರಂದು ವಿಶ್ವ ಏಡ್ಸ್ ಕಾರ್ಯಕ್ರಮ ಜನಜಾಗೃತಿ ಜಾಥಾದ ಮೂಲಕ ಬಿತ್ತಿ ಪತ್ರದ ಮೂಲಕ ಅರಿವು ಮೂಡಿಸುವುದು ಹಾಗೂ ತೊಗಲುಗೊಂಬೆ ಆಟದ ಮೂಲಕ ವಿಶೇಷವಾಗಿ ಜನಜಾಗೃತಿಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಹಾಸನದ ಡ್ಯಾಪ್ಕೋ ಕಾರ್ಯಾಲಯದ ಮೇಲ್ವಿಚಾರಕ ರವಿಕುಮಾರ್‌ ಮಾತನಾಡಿ, ಎಚ್ಐವಿ ಕಾಯಿಲೆ ಹರಡುವ ವಿಧಾನಗಳು ಹಾಗೂ ಮುನ್ನೆಚ್ಚರಿಕ ಕ್ರಮಗಳು ಯುವ ಪೀಳಿಗೆ ಜಾಗೃತರಾಗಿರಬೇಕು. ರಾಜ್ಯದಲ್ಲಿ ಹಾಸನ ಜಿಲ್ಲೆ 10ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಅರಕಲಗೂಡು 5ನೇ ಸ್ಥಾನವನ್ನು ಪಡೆದುಕೊಂಡಿದ್ದು ಅದಕ್ಕಾಗಿ ಜನರು ಜಾಗೃತರಾಗಬೇಕು. ಶುದ್ಧೀಕರಿಸಿರುವಂತ ಹೊಸದಾದ ಸೂಜಿಯನ್ನು ಬಳಸಬೇಕು. ಪರೀಕ್ಷಿಸಿದ ರಕ್ತವನ್ನು ಸ್ವೀಕರಿಸಬೇಕು. ಈ ಎಲ್ಲಾ ವಿಧಾನಗಳನ್ನು ಅಳವಡಿಸುವುದರಿಂದ ಎಚ್ಐವಿ ಕಾಯಿಲೆಯನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

ತಾಲೂಕು ಪಂಚಾಯತಿಯ ಯೋಜನಾಧಿಕಾರಿ ಧರ್ಮೇಂದ್ರ ಮಾತನಾಡಿ, ಎಚ್ಐವಿ ಸೋಂಕಿತರಿಗೆ ಸರ್ಕಾರದಿಂದ ಸಿಗುವಂತಹ ಸವಲತ್ತುಗಳನ್ನ ತಿಳಿ ಹೇಳಿದರು. ಆರೋಗ್ಯ ಇಲಾಖೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಹಲವು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ದೀಪಕ್, ಸರ್ಕಾರಿ ಐಟಿಐ ಕಾಲೇಜಿನ ತರಬೇತಿ ಅಧಿಕಾರಿ ತೌಫಿಕ್ ಅಹಮದ್, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಪರಶುರಾಮ್ ಶಿರೂರ, ಪ್ರಯೋಗಶಾಲಾ ತಂತ್ರಜ್ಞರಾದ ಗೌರಮ್ಮ, ಕ್ಷೇತ್ರ ಆರೋಗ್ಯಶಿಕ್ಷಣಾಧಿಕಾರಿ ಪರಮೇಶ್, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರೇಗೌಡ, ಚೈತನ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವೆಂಕಟೇಶ್, ಚಂದ್ರಶೇಖರ್‌, ಸುನಂದ, ಶುಶ್ರೂಷಕ ಅಧಿಕಾರಿಗಳ ಮೇಲ್ವಿಚಾರಕರಾದ ಹರಿನಾಕ್ಷಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.