ಚನ್ನಗಿರಿಯಲ್ಲಿ ಹರೋಹನಹಳ್ಳಿ ಅಂಚೆ ಪಾಲಕ ಬಸವರಾಜಪ್ಪ ಸನ್ಮಾನ

| Published : Jul 21 2024, 01:22 AM IST

ಚನ್ನಗಿರಿಯಲ್ಲಿ ಹರೋಹನಹಳ್ಳಿ ಅಂಚೆ ಪಾಲಕ ಬಸವರಾಜಪ್ಪ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಗಿರಿ ಪಟ್ಟಣದ ಮುಖ್ಯ ಅಂಚೆ ಕಚೇರಿಯಲ್ಲಿ ತಾಲೂಕಿನ ಹರೋನಹಳ್ಳಿ ಗ್ರಾಮದ ಉಪ ಅಂಚೆ ಕಚೇರಿಯ ಅಂಚೆ ಪಾಲಕ ಎಚ್.ಬಸವರಾಜಪ್ಪ ಅವರನ್ನು ಅತಿ ಹೆಚ್ಚು ಉಳಿತಾಯ ಖಾತೆಗಳನ್ನು ತೆರೆದ ಸಾಧನೆ ಪರಿಗಣಿಸಿ, ಶುಕ್ರವಾರ ಇಲಾಖೆ ಸಿಬ್ಬಂದಿ ಅಭಿನಂದಿಸಿ, ಗೌರವಿಸಿದರು.

ಚನ್ನಗಿರಿ: ಪಟ್ಟಣದ ಮುಖ್ಯ ಅಂಚೆ ಕಚೇರಿಯಲ್ಲಿ ತಾಲೂಕಿನ ಹರೋನಹಳ್ಳಿ ಗ್ರಾಮದ ಉಪ ಅಂಚೆ ಕಚೇರಿಯ ಅಂಚೆ ಪಾಲಕ ಎಚ್.ಬಸವರಾಜಪ್ಪ ಅವರನ್ನು ಅತಿ ಹೆಚ್ಚು ಉಳಿತಾಯ ಖಾತೆಗಳನ್ನು ತೆರೆದ ಸಾಧನೆ ಪರಿಗಣಿಸಿ, ಶುಕ್ರವಾರ ಇಲಾಖೆ ಸಿಬ್ಬಂದಿ ಅಭಿನಂದಿಸಿ, ಗೌರವಿಸಿದರು.

ಎಚ್.ಬಸವರಾಜಪ್ಪ 2023-2024ನೇ ಸಾಲಿನಲ್ಲಿ ದಕ್ಷಿಣ ಕರ್ನಾಟಕ ಅಂಚೆ ವಲಯಮಟ್ಟದಲ್ಲಿ ಅತಿ ಹೆಚ್ಚು ಉಳಿತಾಯ ಖಾತೆಗಳನ್ನು ತೆರೆದು, ಪ್ರಥಮ ಸ್ಥಾನ ಗಳಿಸಿದ್ದರು. ಈ ಕಾರಣಕ್ಕೆ ಮಂಗಳೂರಿನ ಓಷಿಯನ್ ಪರ್ಲ್‌ ಹೊಟೇಲ್ ಸಭಾಂಗಣದಲ್ಲಿ ಅಂಚೆ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರಕುಮಾರ್ ಅವರು ಪ್ರಶಸ್ತಿ ನೀಡಿ ಗೌರವಿಸಿದ್ದರು.

ಈ ಹಿನ್ನೆಲೆ ಚನ್ನಗಿರಿ ಮುಖ್ಯ ಅಂಚೆ ಕಚೇರಿಯ ಸಿಬ್ಬಂದಿ ಶುಕ್ರವಾರ ಪಟ್ಟಣದ ಅಂಚೆ ಕಚೇರಿಯಲ್ಲಿ ಹರೋನಹಳ್ಳಿ ಗ್ರಾಮದ ಅಂಚೆ ಪಾಲಕ ಎಚ್.ಬಸವರಾಜಪ್ಪ ಅವರನ್ನು ಅಭಿನಂದಿಸಿ ಗೌರವಿಸಿದರು.

ಈ ಸಂದರ್ಭ ಅಂಚೆ ಉಪ ವಿಭಾಗದ ನಿರೀಕ್ಷಕ ಜೆ.ಡಿ.ಸ್ವಾಮಿ, ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಮಹೇಂದ್ರಪ್ಪ, ಸಿಬ್ಬಂದಿ ತೀರ್ಥಪ್ರಕಾಶ್, ಸುಪ್ರೀತ್, ನಾಗರಾಜ್, ಕರಿಬಸಪ್ಪ, ಮುಬೀನ, ಶೋಭಾ ಹಾಜರಿದ್ದರು.

- - - -19ಕೆಸಿಎನ್‌ಜಿ2:

ಚನ್ನಗಿರಿ ಪಟ್ಟಣದ ಅಂಚೆ ಕಚೇರಿಯಲ್ಲಿ ಹರೋನಹಳ್ಳಿ ಗ್ರಾಮದ ಉಪ ಅಂಚೇ ಕಚೇರಿಯ ಅಂಚೆ ಪಾಲಕ ಎಚ್‌.ಬಸವರಾಜಪ್ಪ ಅವರನ್ನು ಗೌರವಿಸಲಾಯಿತು.