ಮುಂದಿನ ಪೀಳಿಗೆಗೆ ಪರಿಸರ ಉಳಿವು ಅಗತ್ಯ: ಪ್ರಭುಸ್ವಾಮಿ

| Published : Jun 06 2025, 12:20 AM IST

ಮುಂದಿನ ಪೀಳಿಗೆಗೆ ಪರಿಸರ ಉಳಿವು ಅಗತ್ಯ: ಪ್ರಭುಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಗುಂಡ್ಲುಪೇಟೆಯಲ್ಲಿ ಪರಿಸರ ಜಾಗೃತಿ ನಡೆಯಿತು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮುಂದಿನ ಪೀಳಿಗೆಯ ಉಳಿವಿಗೆ ಇಂದಿನ ಪರಿಸರ ಸಂರಕ್ಷಣೆ ಅವಶ್ಯ ಎಂದು ಎನ್ಎಸ್ಎಸ್ ಶಿಕ್ಷಕ ಪ್ರಭುಸ್ವಾಮಿ ಹೇಳಿದರು.

ಪಟ್ಟಣದ ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮೈಸೂರು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ, ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಾಥಾ ನಡೆಸಿ, ಮಾನವ ಸರಪಳಿ ನಿರ್ಮಿಸಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿದರು.ಹಕ್ಕೊತ್ತಾಯ:

೧. ತಾಲೂಕು ಮತ್ತು ಗ್ರಾಮೀಣ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸುವುದು

೨. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಸಿ ಕಸ ಮತ್ತು ಒಣಕಸ ವಿಂಗಡಣಾ ಘಟಕಗಳ ಸ್ಥಾಪನೆಯಾಗಬೇಕು.

೩. ತ್ಯಾಜ್ಯ ವಿಲೇವಾರಿ ವಾಹನಗಳ ಸದ್ಬಳಕೆ ಮಾಡುವ ಮೂಲಕ ಮನೆ ಮನೆಗಳಲ್ಲಿ ಕಸವನ್ನು ಸಂಗ್ರಹಣೆ ಮಾಡಬೇಕು.

೪. ಗುಂಡ್ಲು ನದಿ ಪುನಶ್ಚೇತನ ಗೊಳಿಸುವುದು.

೫. ಗುಂಡ್ಲುಪೇಟೆ ಬಸ್ ನಿಲ್ದಾಣದಲ್ಲಿ ಪ್ರತಿದಿನ ಕಸ ಸಂಗ್ರಹಿಸಿ ಪ್ಲಾಸ್ಟಿಕ್ ಕವರ್ ಸುಡುವುದನ್ನು ನಿಯಂತ್ರಿಸುವುದು

6. ಮೈಸೂರು ಊಟಿ ಹೈವೇಯಲ್ಲಿ ರಸ್ತೆ ಕಾಮಗಾರಿ ಮಾಡಲು ಮರಗಳನ್ನು ಕಡಿದಿದ್ದು, ರೋಡ್ ಡಿವೈಡರ್ ಗಳಲ್ಲಿ ಸಸಿಗಳನ್ನು ನೆಡಬೇಕು.೬. ಗ್ರಾಮಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕಾಯ್ದೆಯಲ್ಲಿ ಕೆರೆಗಳ ನಿರ್ಮಾಣ ಮಾಡಬೇಕು.

೭. ಗೋಪಾಲಸ್ವಾಮಿ ಬೆಟ್ಟದಲ್ಲಿ ಈಗಾಗಲೇ ಪ್ಲಾಸ್ಟಿಕ್ ನಿಷೇಧಿಸಿದಲಾಗಿದ್ದರೂ ಬೆಟ್ಟದ ತಪ್ಪಲಿನಲ್ಲಿ ಹೆಚ್ಚು ಪ್ಲಾಸ್ಟಿಕ್ ಬಳಕೆ ಆಗುತ್ತಿದ್ದು ಅದನ್ನು ತಡೆಯುವ ಮೂಲಕ ವನ್ಯಜೀವಿಗಳ ರಕ್ಷಣೆ ಮಾಡಬೇಕು.

೮. ಮೈನಿಂಗ್‌ನಿಂದ ಆಗುತ್ತಿರುವ ಶಬ್ದ ಮತ್ತು ವಾಯು ಮಾಲಿನ್ಯವನ್ನು ತಡೆಯಬೇಕು.