ಮುದ್ರಣ ಮಾಧ್ಯಮದ ಮೇಲಿನ ನಂಬಿಕೆ ಉಳಿಸಿಕೊಳ್ಳಿ

| Published : Jul 31 2025, 12:45 AM IST

ಮುದ್ರಣ ಮಾಧ್ಯಮದ ಮೇಲಿನ ನಂಬಿಕೆ ಉಳಿಸಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಮುದ್ರಣ ಮಾಧ್ಯಮದ ಮೇಲೆ ಜನರಿಗೆ ನಂಬಿಕೆ ಇದೆ. ಅದನ್ನು ಉಳಿಸಿಕೊಳ್ಳಬೇಕಾಗಿದೆ

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ ಇಂದಿನ ದಿನಗಳಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಸಂಘಟನೆಗಳು ಕಾರ್ಯಚಟುವಟಿಕೆಗಳನ್ನು ರೂಪಿಸಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.ಎಚ್.ಡಿ. ಕೋಟೆ ಮತ್ತು ಸರಗೂರು ಪತ್ರಕರ್ತರ ಸಂಘದ ವತಿಯಿಂದ ಮೈಸೂರು ನಗರದ ಲಲಿತ ಮಹಲ್ ಹೋಟೆಲ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ತಾಲೂಕಿನ ಮಾಹಿತಿಯನ್ನು ಕೆಲವರು ಪತ್ರಕರ್ತರು ಎಂದು ಹೇಳಿ ಪಡೆದುಕೊಳ್ಳುತ್ತಾರೆ, ಆದರೆ ಆ ಮಾಹಿತಿ ಯಾವ ಪತ್ರಿಕೆಗಳಲ್ಲೂ ಪ್ರಕಟಗೊಂಡಿರುವುದಿಲ್ಲ, ಅಂತಹ ನಕಲಿ ಪತ್ರಕರ್ತರನ್ನು ಮಟ್ಟ ಹಾಕಬೇಕು ಎಂದು ಕರೆ ನೀಡಿದರು.ಮುದ್ರಣ ಮಾಧ್ಯಮದ ಮೇಲೆ ಜನರಿಗೆ ನಂಬಿಕೆ ಇದೆ. ಅದನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.ಎಚ್.ಡಿ. ಕೋಟೆ ತಾಲೂಕಿನ ಪತ್ರಕರ್ತರ ಬಹುದಿನದ ಬೇಡಿಕೆಯ ರೀತಿ ಇಂದು ಎಚ್.ಡಿ. ಕೋಟೆ ಪಟ್ಟಣದ ಕನಕ ಭವನದ ಪಕ್ಕದಲ್ಲಿ 60x40 ಅಳತೆಯ ಸಿಎ ನಿವೇಶನವನ್ನು ಮಂಜೂರು ಮಾಡಲಾಗಿದೆ ಎಂದು ಅವರು ತಿಳಿಸಿದರು.ತಂದೆಯವರು ರಾಜಕಾರಣಕ್ಕೆ ಬಾರದಂತೆ ‌ವಿದ್ಯಾಭ್ಯಾಸದತ್ತ ನಮ್ಮನ್ನು ನಡೆಸುತ್ತಿದ್ದರು, ಆದರೆ ಮಾಜಿ‌ ಪ್ರಧಾನಿ ದೇವೇಗೌಡ ಮತ್ತು ಮಾಜಿ ಸಚಿವ ಸಾ.ರಾ. ಮಹೇಶ್‌ ಅವರ ಒತ್ತಡದಿಂದಾಗಿ ಹನಗೋಡು ಕ್ಷೇತ್ರದಿಂದ ಜಿಪಂ ಚುನಾವಣೆಗೆ ಸ್ಪರ್ಧಿಸಿದೆ. ತಂದೆಯವರು ಸೂಚಿಸಿದರು. 2018 ರ ಚುನಾವಣೆಯಲ್ಲಿ ಆರ್‌. ಧ್ರುವನಾರಾಯಣ ಅವರ ನನ್ನ ಕೈಹಿಡಿದು ಶಾಸಕನಾಗುವಂತೆ ಮಾಡಿದರು ಎಂದರು.ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಮಾತನಾಡಿ, ಇಂದಿನ ದಿನಗಳಲ್ಲಿನ ಎಐ ತಂತ್ರಜ್ಞಾನವನ್ನು ಗಮನಿಸಿದರೆ ಮುಂದೊಂದು ದಿನ ಪತ್ರಕರ್ತರಿಲ್ಲದ‌ಪತ್ರಿಕೋದ್ಯಮ ಸೃಷ್ಟಿಯಾಗುವ ಮುನ್ಸೂಚನೆ ಇದೆ ಎಂದು ಕಾಣುತ್ತಿದೆ ಎಂದರು.ಪ್ರಸ್ತುತ ಕಾಲಘಟ್ಟದಲ್ಲಿ ಕೆಲ ದೃಶ್ಯ ಮಾಧ್ಯಮಗಳಲ್ಲಿ ಎಐ ತಂತ್ರಜ್ಞಾನವನ್ನು ಅಳವಡಿಸಿಕೊಂಡು ನಿರೂಪಣೆ ಮಾಡುತ್ತಿರುವುದು ಕಂಡು ಬಂದಿದ್ದು, ಇದನ್ನು ಗಮನಿಸಿದಾಗ ಈ ಮೇಲಿನ ಆತಂಕ ಎದುರಾಗಿದೆ ಎಂದು ಅವರು ತಿಳಿಸಿದರು.ಹಿಂದಿನ ದಿನಗಳಲ್ಲಿ ರಾಜಕಾರಣವನ್ನು ಪತ್ರಿಕೆಗಳು ನಿರ್ವಹಿಸುತ್ತಿದ್ದವು, ಆದರೆ ಇಂದಿನ ದಿನಗಳಲ್ಲಿ ರಾಜಕಾರಣವೇ ಪತ್ರಕರ್ತರನ್ನು ನಿಯಂತ್ರಿಸುವ ಕಾಲ ಬಂದೊದಗಿದೆ ಎಂದು ಅವರು ವಿಷಾದಿಸಿದರು.ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ಪತ್ರಕರ್ತರು ತಮ್ಮ ಜವಾಬ್ದಾರಿಗಳನ್ನರಿತು ಕೆಲಸ ನಿರ್ವಹಿಸಬೇಕು, ಅಂತಹವರಿಗೆ ಸಮಾಜದಲ್ಲಿ ಗೌರವ ದೊಡ್ಡಮಟ್ಟದಲ್ಲಿ ದೊರೆಯಲಿದೆ. ಪತ್ರಕರ್ತರು ಬರೆದ ಲೇಖನಗಳಿಂದ ಸಮಾಜಕ್ಕೆ ಒಳಿತಾಗುವಂತ ಕೆಲಸಗಳು ನಡೆಯಬೇಕು, ಅಂತಹ ಲೇಖನಗಳು ಹೆಚ್ಚಿನ ಪ್ರಮಾಣದಲ್ಲಿ ಈ ಸಮಾಜಕ್ಕೆ ಅಗತ್ಯವಿದೆ ಎಂದರು.ಶಾಸಕ ಅನಿಲ್ ಚಿಕ್ಕಮಾದು ಪತ್ನಿ ಸೌಮ್ಯಾ ಮಾತನಾಡಿ, ''''''''ಪತ್ರಕರ್ತರ ವೃತ್ತಿ ಜವಬ್ದಾರಿಯುತವಾದಂತದ್ದು, ಇದನ್ನು ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಿದಾಗ ಆಪತ್ರಕರ್ತರಿಗೆ ಮನ್ನಣೆ ದೊರೆಯಲಿದೆ, ಆದರೆ ಪತ್ರಿಕಾ ದಿನಾಚರಣೆಯಂತಹ ದಿನಗಳಲ್ಲಿ ಕುಟುಂಬ ಸಮೇತರಾಗಿ ಒತ್ತಡವಿಲ್ಲದೇ ಭಾಗವಹಿಸುವುದು, ಆರೋಗ್ಯಕರವಾದ ಬೆಳವಣಿಗೆ ಎಂದರು.ಇದೇ ವೇಳೆ ಪ್ರತಿಭಾನ್ವಿತ ಮಕ್ಕಳನ್ನು ಅಭಿನಂದಿಸಲಾಯಿತು. ಚಲನಚಿತ್ರ ನಿರ್ಮಾಪಕ‌ಸಂದೇಶ್, ನಟ ಚಂದನ್ ಶೆಟ್ಟಿ, ಪೋಷಕ ನಟ ಸುಂದರ್, ಸಂಘದ ಅಧ್ಯಕ್ಷ ಬೀಚನಹಳ್ಳಿ ಮಂಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ತಾಲೂಕು ಉಪಾಧ್ಯಕ್ಷ ಯಡತೊರೆ ಮಹೇಶ್, ಕಾರ್ಯದರ್ಶಿ ನಾಗಾರಾಂ, ಸಹ ಕಾರ್ಯದರ್ಶಿ ದೊಡ್ಡಸಿದ್ದು, ಖಜಾಂಚಿ ಮಂಜುಕೋಟೆ, ಸದಸ್ಯರಾದ ಸತೀಶ್ ಆರಾಧ್ಯ, ವಾಸುಕಿ ನಾಗೇಶ್, ಕನ್ನಡ ಪ್ರಮೋದ್, ಜಿ. ರವಿಕುಮಾರ್, ಆನಂದ, ಪುಟ್ಟರಾಜು, ಸುರೇಶ್, ಜಶೀಲಾ, ಎಂ.ಎಲ್. ರವಿಕುಮಾರ್, ರೇಣುಕಾ, ನಾಗೇಶ್, ಶರವಣ, ಶ್ರೀನಿಧಿ, ದಾಸೇಗೌಡ, ರಂಗರಾಜು, ಎಂ.ಎಲ್. ರವಿಕುಮಾರ್, ನಿಂಗಣ್ಣಕೋಟೆ, ರವಿಕುಮಾರ್ ಆರಾಧ್ಯ, ಚಂದ್ರು ಹಾದನೂರು ಇದ್ದರು.