ಕಲಬುರಗಿ‌: ಜೈಲಿನ ಬ್ಯಾರಕ್ ಕಂಬಿಗಳನ್ನ ಕಟ್ ಮಾಡಿ ಸೆಂಟ್ರಲ್ ಜೈಲಿನಿಂದ ಎಸ್ಕೇಪ್ ಆಗಿದ್ದ ಮೂವರು ಸಜಾ ಕೈದಿಗಳಲ್ಲಿ ಓರ್ವ ಕೈದಿ ಸಂತೋಷ ಮೇಲೆ ಬುಧವಾರ ಬೆಳಗ್ಗೆ ನಗರ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಬೀದರ ಜಿಲ್ಲೆಯ ಔರಾದ ತಾಲೂಕಿನ ಸಂತಾಪುರ ಗ್ರಾಮದ ಪೋಸ್ಕೊ ಕೇಸ್ ನಡಿ ಸಜಾ ಬಂಧಿ ಸಂತೋಷ ಬಸಪ್ಪ ಮೇತ್ರೆ ಎಂಬ ಕೈದಿ ಮೇಲೆ ಫೈರಿಂಗ್ ಮಾಡಿ ಬಂಧಿಸಲಾಗಿದೆ. ಜಿಲ್ಲಾ ಆಸ್ಪತ್ರೆ ಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಗರ ಹೊರವಲಯದ ಕಪನೂರ ಕೈಗಾರಿಕಾ ಪ್ರದೇಶದಲ್ಲಿ ಕಾಲಿಗೆ ಗುಂಡು ಹೊಡೆದು ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ. ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯ ಮೂಲಕ ಎಸ್ಕೇಪ್ ಆಗಿದ್ದರು. ಸಜಾ ಕೈದಿಗಳು ಹೇಗೆ ಪರಾರಿಯಾದರೆಂಬ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕೈದಿಗಳು ಬಿಂದಾಸ್ ಆಗಿ ನಡೆದುಕೊಂಡು ಹೋಗಿ ಕಾರ್ ಹತ್ತಿದ್ದ ಆರೋಪಿಗಳು, ಅಲ್ಲಿಂದ ಬೀದರ್ ಕಡೆಗೆ ಏಸ್ಕೇಪ್ ಆಗಿದ್ದಾರೆ.

ಫೋಟೋ- ಸೆಂಟ್ರಾ ಕೈದಿ

ಪೊಲೀಸ್‌ ಫೈರಿಂಗ್‌ನಲ್ಲಿ ಗಾಯಗೊಂಡಿರುವ ಕೈದಿ ಸಂತೋಷನಿಗೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡುತ್ತಿರುವ ನೋಟ