ಗುಣಮಟ್ಟದ ಹಾಲು ಶೇಖರಣೆಗೆ ಉತ್ತೇಜನ: ವೀಣಾ

| Published : Sep 10 2024, 01:38 AM IST

ಸಾರಾಂಶ

ಗುಡ್ಡೆಹೊಸೂರಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನಿಯಮಿತದ ವಾರ್ಷಿಕ ಸಭೆ ನಡೆಯಿತು. ಅತಿ ಹೆಚ್ಚು ಅಂಕ ಪಡೆದ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಗುಡ್ಡೆ ಹೊಸೂರು

ಹಾಲು ಉತ್ಪಾದಕರಿಂದ ಸಂಗ್ರಹಿಸಿದ ಹಾಲು ಡೈರಿಯಿಂದ ಮದರ್ ಡೈರಿಗೆ ಸಾಗಿಸುವ ಕಾಲಾವಧಿ ಹೆಚ್ಚಾಗಿದ್ದು, ಹಾಲು ಕೆಡುವಂತ ಸಾಧ್ಯತೆಗಳು ಹೆಚ್ಚಿರುತ್ತದೆ, ಇದಕ್ಕೆ ಪರಿಹಾರ ಸಂಘದ ವತಿಯಿಂದ ಜಾಗದ ವ್ಯವಸ್ಥೆ ಮಾಡಿದರೆ ಮಿನಿ ಹಾಲು ಶೀತಲೀಕರಣ ವೆಚ್ಚ ಬರಿಸುವುದಾಗಿ ಹಾಸನ ಹಾಲು ಒಕ್ಕೂಟದ ಕೂಡಿಗೆ ವೃತ್ತದ ವಿಸ್ತರಣಾಧಿಕಾರಿ ಬಿ ವಿ ವೀಣಾ ತಿಳಿಸಿದ್ದಾರೆ.

ಗುಡ್ಡೆಹೊಸೂರಿನಲ್ಲಿ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ನಿಯಮಿತ 2023 -24 ನೇ ಸಾಲಿನ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಗುಡ್ಡೆಹೊಸೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಬಿ ಎಂ ಸಾಗರ್, ನೆರೆದಿದ್ದ ಸಂಘದ ಸದಸ್ಯರ ಅಹವಾಲುಗಳನ್ನು ಆಲಿಸಿ ಸೂಕ್ತ ಪರಿಹಾರ ಸೂಚಿಸಿದರು. ಅತಿ ಹೆಚ್ಚು ಹಾಲು ಉತ್ಪಾದನೆ ಮಾಡಿದ ಸಂಘದ ಸದಸ್ಯರು ಹಾಗೂ ಗುಡ್ಡೆ ಹೊಸೂರು, ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಿ ಸನ್ಮಾನಿಸಲಾಯಿತು.

ಹಾಸನ ಹಾಲು ಒಕ್ಕೂಟದ ನಿರ್ದೇಶಕರಾದ ಹೇಮಂತ್ ಕುಮಾರ್ ಭಾಗವಹಿಸಿದ್ದರು. ಗುಡ್ಡೆಹೊಸೂರು ಹಾಲು ಒಕ್ಕೂಟದ ಉಪಾಧ್ಯಕ್ಷೆ ಎನ್. ಪಿ. ಸುಲೋಚನ, ನಿರ್ದೇಶಕರಾದ ಧನಪಾಲ್, ಯತೀಶ್ ಮೋಹನ ಕುಮಾ‌ರ್, ಪಳಂಗಪ್ಪ, ಗುರುಪ್ರಸಾದ್, ಕಾಶಿ, ಶುಭ ಶೇಖರ, ಅಭಿಷೇಕ್, ಕಮಲ, ಕಮಲಾಕ್ಷಿ, ಬಸಮ್ಮ ಮತ್ತಿತರರು ಇದ್ದರು.

ಕಾರ್ಯದರ್ಶಿ ನವೀನ್ ನಿರೂಪಿಸಿದರು. ನಿರ್ದೇಶಕರಾದ ಧನ್ ಪಾಲ್ ವಂದಿಸಿದರು.