ಹೊಸಪೇಟೆ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ವಿಜಯನಗರ ಜಿಲ್ಲಾ ಸಮಿತಿ ವತಿಯಿಂದ ಇಲ್ಲಿನ ಏಕಲವ್ಯ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಇದೇ ವೇಳೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾರ್ಮಿಕ ಅಧಿಸೂಚನೆ ಪ್ರತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಕನಿಷ್ಠ ವೇತನ ಜಾರಿಗಾಗಿ ಒತ್ತಾಯಿಸಿ ಹಲವಾರು ವರ್ಷಗಳಿಂದ ಹೊರಗುತ್ತಿಗೆ ನೌಕರರು, ಖಾಯಂ ಅಲ್ಲದ ಹೊರಗುತ್ತಿಗೆ ನೌಕರರು ನಡೆಸುತ್ತಿರುವ ಹೋರಾಟಕ್ಕೆ ಅನ್ಯಾಯ ಮಾಡುವ ಹುನ್ನಾರದಿಂದ ಈ ಕಾರ್ಮಿಕ ಸಂಹಿತೆಗಳನ್ನು ಕೇಂದ್ರ ಜಾರಿಗೆ ತಂದಿದೆ ಎಂದು ಆರೋಪಿಸಿದರು.ಜಿಲ್ಲಾ ಸಮಿತಿಯ ಅಧ್ಯಕ್ಷ ಮರಡಿ ಜಂಬಯ್ಯ ನಾಯಕ ಮತ್ತು ಜಿಲ್ಲಾ ಮುಖಂಡರಾದ ಸೂರ್ಯ ನಾರಾಯಣ, ಕರಿಬಸವಯ್ಯ, ದಿವಾಕರ್, ದುರುಗೇಶ್, ಲಕ್ಷ್ಮಿದೇವಿ, ಶಾರದಾ, ಶಿವಪ್ಪ, ಕೆ. ಬಸವರಾಜ್, ಮಂಜುಳಾ, ಕಾಳಮ್ಮ, ಪ್ರೇಮಾವತಿ, ಬಿ. ಗೀತಾ, ಆಹಿಷಾ, ಪಂಪಾಪತಿ, ವಿ. ತಿಪ್ಪಣ್ಣ, ಎಸ್. ನಿಂಗಪ್ಪ, ಸತ್ಯಭಾಮ, ವನಜಾಕ್ಷಿ, ರುಕ್ಮಿಣಿ, ಸುಲೋಚನಾ, ಬಶೀರಾ, ರಾಧಾ ನಾಯಕ್, ರಜಿಯಾ, ರಿಜ್ವಾನ, ಮಲ್ಲೇಶ್, ಹನುಮವ್ವ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.