ಮುಸ್ಲಿಮರ ಓಲೈಕೆಗಾಗಿ ರೈತರಿಗೆ ತೊಂದರೆ ಕೊಡುತ್ತಿರುವ ಸರ್ಕಾರ

| Published : Nov 04 2024, 12:25 AM IST

ಮುಸ್ಲಿಮರ ಓಲೈಕೆಗಾಗಿ ರೈತರಿಗೆ ತೊಂದರೆ ಕೊಡುತ್ತಿರುವ ಸರ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿವರ್ಷ ವಕ್ಫ್ಆಸ್ತಿ ಜಾಸ್ತಿಯಾಗುತ್ತಿದೆ, ತಾಲೂಕಿನ ಕವಲಂದೆ, ಹೆಡಿಯಾಲ, ಹಲ್ಲರೆ ಭಾಗಗಳ ರೈತರು ತಮ್ಮ ಜಮೀನಿನ ಪಹಣಿ ಪರಿಶೀಲಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ನಂಜನಗೂಡುತಲೆತಲಾಂತರಗಳಿಂದ ಸಾಗುವಳಿ ಮಾಡುತ್ತಿರುವ ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಬೋರ್ಡ್ ನ ಆಸ್ತಿ ಎಂದು ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಮತಗಳಿಗಾಗಿ ನಮೂದಿಸಿ ರೈತರಿಗೆ ತೊಂದರೆ ನೀಡುತ್ತಿದ್ದು, ಸರ್ಕಾರದ ಧೋರಣೆ ಖಂಡಿಸಿ ನ. 4ರಂದು ಮೈಸೂರಿನಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ ಬಿ. ಹರ್ಷವರ್ಧನ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1974ರ ನಂತರ ವಕ್ಫ್ಆಸ್ತಿ ಘೋಷಣೆಯಾಯಿತು. ಪ್ರತಿವರ್ಷ ವಕ್ಫ್ಆಸ್ತಿ ಜಾಸ್ತಿಯಾಗುತ್ತಿದೆ, ತಾಲೂಕಿನ ಕವಲಂದೆ, ಹೆಡಿಯಾಲ, ಹಲ್ಲರೆ ಭಾಗಗಳ ರೈತರು ತಮ್ಮ ಜಮೀನಿನ ಪಹಣಿ ಪರಿಶೀಲಿಸಿಕೊಳ್ಳಬೇಕು. ತಾಲೂಕಿನಲ್ಲಿ ಸರ್ಕಾರದ ಕುಮ್ಮಕ್ಕಿನಿಂದ ಕಂದಾಯ ಅಧಿಕಾರಿಗಳ ಸಹಕಾರದಿಂದ ರೈತರ ಪಹಣಿ ತಿದ್ದುಪಡಿ ಮಾಡಿ ವಕ್ಫ್ಆಸ್ತಿ ಎಂದು ಬಿಂಬಿಸುವ ಸಂಚು ನಡೆಯುತ್ತಿದೆ. 5 ಗ್ಯಾರಂಟಿಗಳ ನಂತರ ಅಲ್ಪಸಂಖ್ಯಾತರನ್ನು ಓಲೈಸಲು ಕಾಂಗ್ರೆಸ್ಸರ್ಕಾರ 6 ಗ್ಯಾರಂಟಿಯಾಗಿ ಮತ ಬ್ಯಾಂಕ್ನ್ನು ಭದ್ರಪಡಿಸಿಕೊಳ್ಳಲು ಈ ರೀತಿಯ ಸಂಚು ನಡೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಂಮರಿಗೆ ಪ್ರತ್ಯೇಕ ಆಸ್ಪತ್ರೆ, ಶಾಲೆ ಆರಂಭಿಸುವುದಾಗಿ ಹೇಳುತ್ತಾರೆ, ಪ.ಜಾತಿ ಮತ್ತು ಪಂಗಡಗಳ ಜನರ ಎಸ್.ಇ.ಪಿ, ಟಿ.ಎಸ್.ಪಿ ಹಣವನ್ನು ಸರ್ಕಾರ ಮುಸ್ಲಿಂರ ಓಲೈಕೆಗಾಗಿ ಬಳಸುತ್ತಿದೆ, ರಾಜ್ಯದಲ್ಲಿ ರೈತರಿಗೆ, ಮಠಗಳಿಗೆ ಸೇರಿದ ಸಾವಿರಾರು ಎಕರೆ ಜಮೀನಿನ ದಾಖಲೆಗಳಲ್ಲಿ ಈಗಾಗಲೆ ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಾಗಿದೆ ಎಂದು ದೂರಿದರು.ನಮ್ಮ ನಾಯಕರಾದ ಬಸನಗೌಡ ಪಾಟೀಲ್ಯತ್ನಾಳ್ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕೇಂದ್ರ ಸರ್ಕಾರ ಅಧಿಕಾರ ಬಳಸಿ ವಕ್ಫ್ಬೋರ್ಡ್ ನ ಆಸ್ತಿಗಳನ್ನು ರಾಷ್ಟ್ರೀಕರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಧಾನ ಮಂತ್ರಿಗಳು ಯತ್ನಾಳ್ ಅವರ ಸಲಹೆಯಂತೆ ವಕ್ಫ್ಬೋರ್ಡ್ ನ ಆಸ್ತಿಗಳನ್ನು ರಾಷ್ಟ್ರೀಕರಣ ಮಾಡುವ ಮೂಲಕ ರೈತರ ಭೂಮಿಯ ಮೇಲಿನ ಹಕ್ಕನ್ನು ಉಳಿಸಬೇಕು ಎಂದು ಹೇಳಿದರು.ರಾಜ್ಯದ ರೈತರ ಪರವಾಗಿ ರಾಜ್ಯ ಬಿಜೆಪಿ ಸರ್ಕಾರದ ಸಂಚಿನ ವಿರುದ್ದ ತೀವ್ರವಾದ ಹೋರಾಟ ರೂಪಿಸುತ್ತಿದ್ದು, ನಮ್ಮ ತಾಲೂಕಿನ ರೈತರು ತಮ್ಮ ಜಮೀನಿನ ಪಹಣಿಯಲ್ಲಿ ವ್ಯತ್ಯಾಸ ಕಂಡು ಬಂದಿದ್ದರೆ ದಾಖಲೆಗಳನ್ನು ಬಿಜೆಪಿ ಕಚೇರಿಗೆ ನೀಡಬೇಕು. ರೈತರ ಪರವಾಗಿ ಹೋರಾಟ ನಡೆಸಿ ರೈತರ ಭೂಮಿಯ ಮೇಲಿನ ಹಕ್ಕನ್ನು ಉಳಿಸಲು ಬಿಜೆಪಿ ಬದ್ಧವಾಗಿದೆ ಎಂದು ಹೇಳಿದರು.ನಂಜನಗೂಡಿನ ಪೊಲೀಸರು ದೇವರಸನಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಸೌಭಾಗ್ಯ ಪತಿ ನಂಜುಂಡಸ್ವಾಮಿ ಕೊಲೆ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಜೈಲಿಗಟ್ಟಿರುವ ಕ್ರಮವನ್ನು ಸ್ವಾಗತಿಸುತ್ತೇನೆ. ಅದೇ ರೀತಿ ಚುರುಕುತನವನ್ನು ನಂಜುಂಡೇಶ್ವರ ಸ್ವಾಮಿ ಮೇಲೆ ಎಂಜಲು ನೀರು ಎರಚಿರುವ ಪ್ರಕರಣದಲ್ಲೂ ತೋರಿಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಕೆಂಡಗಣ್ಣಪ್ಪ, ನಗರ ಬಿಜೆಪಿ ಅಧ್ಯಕ್ಷ ಸಿದ್ದರಾಜು, ನಗರಸಭಾ ಮಾಜಿ ಅಧ್ಯಕ್ಷ ಎಚ್.ಎಸ್‌. ಮಹದೇವಸ್ವಾಮಿ, ರೈತ ಮೋರ್ಚಾ ಅಧ್ಯಕ್ಷ ಮಹೇಶ್ ಬಾಬು, ಮುಖಂಡರಾದ ವಳಗೆರೆ ಪುಟ್ಟಸ್ವಾಮಿ, ಶ್ರೀನಿವಾಸ ರೆಡ್ಡಿ, ಸಿದ್ದರಾಜು, ರಾಘವೇಂದ್ರ, ಸಣ್ಣಯ್ಯ ಇದ್ದರು.