ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಪ್ರಾಥಮಿಕ ಶಾಲಾ ಶಿಕ್ಷಕರ ಬಹುದಿನದ ಬೇಡಿಕೆ ಸಿ ಅಂಡ್ ಆರ್ ತಿದ್ದುಪಡಿಗೆ ಆಗ್ರಹಿಸಿ ಆ. 12ರಂದು ನಗರದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು ಶಿಕ್ಷಕರು ಭಾಗವಹಿಸಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಅಧ್ಯಕ್ಷ ಮಾದಪ್ಪ ಕರೆ ನೀಡಿದರು.ನಗರದ ಸರ್ಕಾರಿ ನೌಕರರ ಸಭಾಂಗಣದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು. ರಾಜ್ಯ ಸರ್ಕಾರವು ನೀಡಿದ್ದ ಭರವಸೆ ಈಡೇರದ ಕಾರಣ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯವ್ಯಾಪ್ತಿ ಹಂತ ಹಂತವಾಗಿ ಹೋರಾಟ ನಡೆಸಲು ತೀರ್ಮಾನಿಸಿದೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಕರೆ ಮೇರೆಗೆ ಆ.12 ರಂದು ನಗರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯ ಸಲ್ಲಿಸಲು ತೀರ್ಮಾನಿಸಲಾಯಿತು.
ಆ.12 ರಂದು ನಗರದ ಜಿಲ್ಲಾಡಳಿತ ಭವನದಲ್ಲಿ ಸಾಯಂಕಾಲ 4:30ಕ್ಕೆ ಜಿಲ್ಲೆಯ ಶಿಕ್ಷಕರು ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಿಕೊಡುವಂತೆ ಮನವಿ ಮಾಡಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ ಮಾತನಾಡಿ, 2016ರಲ್ಲಿ ಸಿ ಅಂಡ್ ಆರ್ ವೃಂದವಾರು ನೇಮಕಾತಿ ತಿದ್ದುಪಡಿ ಆದಾಗ ಆಗಿರುವ ಸಮಸ್ಯೆ 8 ವರ್ಷಗಳಾದರೂ ತಿದ್ದುಪಡಿ ಸರಿಪಡಿಸುವಂತೆ ಅನೇಕ ಬಾರಿ ಒತ್ತಾಯಿಸಿದರೂ ಸಮಸ್ಯೆ ಬಗೆಹರಿದಿಲ್ಲ. 2024ರ ಆಗಸ್ಟ್ 12ರಂದು ಮುಖ್ಯಮಂತ್ರಿಗಳೇ ವೃಂದ ಮತ್ತು ನೇಮಕಾತಿಯ ನಿಯಮದಲ್ಲಿ ತಪ್ಪಾಗಿದೆ ಒಂದು ತಿಂಗಳ ಒಳಗೆ ಸರಿಪಡಿಸುವುದಾಗಿ ಹೇಳಿ ಒಂದು ವರ್ಷ ಆಗಲಿದೆ. ಇನ್ನೂ ಕೂಡ ಬಗೆಹರಿದಿಲ್ಲ. ಈ ಬಾರಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲಿ ಈ ಬಾರಿಯ ಶಿಕ್ಷಕರ ದಿನಾಚರಣೆಯನ್ನುಬಹಿಷ್ಕರಿಸುವುದಾಗಿ ಎಚ್ಚರಿಸಿದರು.
ಸಭೆಯಲ್ಲಿ ಸಂಘದ ಖಜಾಂಚಿ ಸಲೀನ, ಸಂಘಟನಾ ಕಾರ್ಯದರ್ಶಿ ಮಹದೇವಸ್ವಾಮಿ ಚಾಮರಾಜನಗರ ತಾಲೂಕು ಅಧ್ಯಕ್ಷ ಸಿ. ಕೆ. ರಾಮಸ್ವಾಮಿ, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಶಿವಪ್ರಸಾದ್, ಹನೂರು ತಾಲೂಕು ಅಧ್ಯಕ್ಷ ಕೃಷ್ಣೇಗೌಡ, ಯಳಂದೂರು ತಾಲೂಕು ಅಧ್ಯಕ್ಷ ಸೋಮಣ್ಣ, ಸಂಘದ ಪದಾಧಿಕಾರಿಗಳಾದ ನಂದೀಶ್, ನಾಗರಾಜು, ನಾಗಸಂದ್ರ, ಎಂ ಡಿ ಮಹದೇವಯ್ಯ ,ಭಾರತ್ ಭೂಷಣ್, ರಾಚಯ್ಯ, ಕೆ ಸಿಎಂ ಮುರುಗೇಶ್ ,ಕುಮಾರ್ ,ಭವಾನಿದೇವಿ ,ಶಶಿಕಲಾ, ಶಾಂತರಾಜು ಸಿ ಮಹದೇವಸ್ವಾಮಿ,ಮಲ್ಲಿಕಾರ್ಜುನ್, ಮಹಾದೇವಸ್ವಾಮಿ,ನಟರಾಜು, ಸಿಎಂ ಸುಶೀಲ, ಸೋಮಶೇಖರ್ ,ಉಮೇಶ್, ಶಿವಶಂಕರ್ ,ಸುಗಂಧಮ್ಮ, ಆರ್ ರವಿಕುಮಾರ್ ,ರಾಜು, ಎಸ್ ಬಿ ಸಮೀಉಲ್ಲಾ ಧನಂಜಯ, ವಿರೂಪಾಕ್ಷ, ಚಂದ್ರಮ್ಮ, ನಂಜುಂಡಸ್ವಾಮಿ, ಸೌಮ್ಯ, ಶ್ವೇತಾ, ಸೋಮಶೇಖರ್ ಇತರರು ಭಾಗವಹಿಸಿದ್ದರು.