ವಕೀಲರ ನಿಂದನೆ ಖಂಡಿಸಿ ಪ್ರತಿಭಟನೆ

| Published : Jun 21 2025, 12:49 AM IST

ಸಾರಾಂಶ

ನಗರದ ವಕೀಲರಾದ ಚಂದನ್ ಗಿಡ್ನವರ ಅವರನ್ನು ಹೀಯಾಳಿಸುವ ಬರದಲ್ಲಿ ವಕೀಲರನ್ನು ನಿಂದಿಸಿರುವ ಸಂಘಟನೆಯ ಓರ್ವನ ವಿರುದ್ಧ ಇಲ್ಲಿಯ ವಕೀಲರ ಸಂಘದ ಪದಾಧಿಕಾರಿಗಳು ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ನಗರದ ವಕೀಲರಾದ ಚಂದನ್ ಗಿಡ್ನವರ ಅವರನ್ನು ಹೀಯಾಳಿಸುವ ಬರದಲ್ಲಿ ವಕೀಲರನ್ನು ನಿಂದಿಸಿರುವ ಸಂಘಟನೆಯ ಓರ್ವನ ವಿರುದ್ಧ ಇಲ್ಲಿಯ ವಕೀಲರ ಸಂಘದ ಪದಾಧಿಕಾರಿಗಳು ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ನಗರದಲ್ಲಿ ವಕೀಲರ ಮೇಲೆ ಹಲ್ಲೆಯಾಗಿದ್ದು, ಹಲ್ಲೆಗೊಳಗಾದ ವಕೀಲರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ, ಕೆಲವು ಸಂಘಟನೆಗಳ ಮುಖಂಡರು ಡಿವೈಎಸ್ಪಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ವಕೀಲರ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿದ್ದು, ಅವನ ವಿರುದ್ಧ ಕಠಿಣಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಡಿವೈಎಸ್ಪಿ ರವಿ ನಾಯಿಕ ಅವರಿಗೆ ವಕೀಲರ ಸಂಘದಿಂದ ಮನವಿ ಅರ್ಪಿಸಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಪಾಟೀಲ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.