ಮಕ್ಕಳಿಗೆ ಸ್ಕೌಟ್ಸ್‌- ಗೈಡ್ಸ್‌ ಶಿಕ್ಷಣ ನೀಡಿ

| Published : Jun 16 2025, 12:52 AM IST

ಮಕ್ಕಳಿಗೆ ಸ್ಕೌಟ್ಸ್‌- ಗೈಡ್ಸ್‌ ಶಿಕ್ಷಣ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಕೌಟ್ಸ್‌ನಿಂದ ಶಾಲಾ ಮಕ್ಕಳಲ್ಲಿ ನಾಯಕತ್ವ ಗುಣಗಳು, ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳುವ ಪ್ರವೃತ್ತಿ, ಜೀವನ ಕೌಶಲ್ಯಗಳನ್ನು ಕಲಿತು ಮುಂದಿನ ಭವಿಷ್ಯದಲ್ಲಿ ಉತ್ತಮ ನಾಯಕರಾಗಿ ರೂಪುಗೊಳ್ಳಲು ಸಹಕಾರಿ, ಎಲ್ಲ ಹಂತದ ಅಧಿಕಾರಿಗಳು, ಪೋಷಕರು ಮತ್ತು ಶಿಕ್ಷಕರು ಸ್ಕೌಟ್ಸ್-ಗೈಡ್ಸ್ ಶಿಕ್ಷಣ ಎಲ್ಲಾ ವಿದ್ಯಾರ್ಥಿಗಳಿಗೂ ತಲುಪುವಲ್ಲಿ ನಿರಂತರ ಪ್ರಯತ್ನಪಡಬೇಕು.

ಕನ್ನಡಪ್ರಭ ವಾರ್ತೆ ಕೋಲಾರಪೂರ್ವ ಪ್ರಾಥಮಿಕ ಶಾಲಾ ಹಂತದಿಂದ ಸ್ನಾತಕೋತ್ತರ ಹಂತದವರೆಗೆ ವಿವಿಧ ಹಂತಗಳಲ್ಲಿ ಸ್ಕೌಟ್- ಗೈಡ್ಸ್ ಶಿಕ್ಷಣ ರೂಪಿಸಿದ್ದು, ಈ ಶಿಕ್ಷಣ ಎಲ್ಲಾ ವಿದ್ಯಾರ್ಥಿಗಳಿಗೂ ತಲುಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ರಾಜ್ಯ ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ತಿಳಿಸಿದರು.ನಗರದ ಸ್ಕೌಟ್ ಭವನದಲ್ಲಿ ಭಾರತ್ ಸ್ಕೌಟ್ಸ್-ಗೈಡ್ಸ್ ಸಂಸ್ಥೆ ಕೋಲಾರ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾಯಕತ್ವ ಗುಣ ಬೆಳೆಸಲು ಸ್ಕೌಟ್ಸ್‌

ಸ್ಕೌಟ್ಸ್‌ನಿಂದ ಶಾಲಾ ಮಕ್ಕಳಲ್ಲಿ ನಾಯಕತ್ವ ಗುಣಗಳು, ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳುವ ಪ್ರವೃತ್ತಿ, ಜೀವನ ಕೌಶಲ್ಯಗಳನ್ನು ಕಲಿತು ಮುಂದಿನ ಭವಿಷ್ಯದಲ್ಲಿ ಉತ್ತಮ ನಾಯಕರಾಗಿ ರೂಪುಗೊಳ್ಳಲು ಸಹಕಾರಿ, ಎಲ್ಲ ಹಂತದ ಅಧಿಕಾರಿಗಳು, ಪೋಷಕರು ಮತ್ತು ಶಿಕ್ಷಕರು ಸ್ಕೌಟ್ಸ್-ಗೈಡ್ಸ್ ಶಿಕ್ಷಣ ಎಲ್ಲಾ ವಿದ್ಯಾರ್ಥಿಗಳಿಗೂ ತಲುಪುವಲ್ಲಿ ನಿರಂತರ ಪ್ರಯತ್ನಪಡಬೇಕು. ಪ್ರತಿವಾರ ಅರ್ಧ ಗಂಟೆ ಕಾಲ ಸ್ಕೌಟ್ಸ್ ಗೈಡ್ಸ್ ಶಿಕ್ಷಣವನ್ನು ತಿಳಿಸುವಲ್ಲಿ ಶಿಕ್ಷಕರು ಶ್ರಮ ವಹಿಸಿದರೆ ಇಡೀ ಸಮಾಜವನ್ನೇ ಬದಲಾವಣೆಗೆ ತರಬಹುದು ಎಂದು ತಿಳಿಸಿದರು.

ಶಿಸ್ತು ಕಲಿಸಲು ಸ್ಕೌಟ್ಸ್‌ ಸಹಕಾರಿ

ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಮಾತನಾಡಿ, ಶಿಕ್ಷಕರು ಮನಸ್ಸು ಮಾಡಿದರೆ ಮಾತ್ರ ಸ್ಕೌಟ್ಸ್-ಗೈಡ್ಸ್ ಚಳವಳಿ ಎಲ್ಲಾ ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಸಾಧ್ಯ. ಸಮಾಜದ ಉಳಿವಿಗೆ ಇಂದಿನಿಂದಲೇ ವಿದ್ಯಾರ್ಥಿಗಳಲ್ಲಿ ಸೇವಾ ಮೌಲ್ಯಗಳು ಬೆಳೆಯಲು ಸ್ಕೌಟ್ಸ್-ಗೈಡ್ಸ್ ಶಿಕ್ಷಣ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಡಿಡಿಪಿಐ ಕೃಷ್ಣಮೂರ್ತಿ, ಗೈಡ್ಸ್ ಆಯುಕ್ತೆ ನವೀನಾ, ರಾಜ್ಯ ತರಬೇತಿ ಆಯುಕ್ತೆ ಶ್ಯಾಮಲ, ಜಿಲ್ಲಾ ಅಧ್ಯಕ್ಷ ಬಿಸಪ್ಪಗೌಡ, ಸ್ಕೌಟ್ ಆಯುಕ್ತ ಕೆ.ಆರ್.ಸುರೇಶ್, ಉಪಾಧ್ಯಕ್ಷ ಡಾ.ಚಂದ್ರಶೇಖರ್, ನೋಡಲ್ ಅಧಿಕಾರಿ ಸಿ.ಆರ್.ಅಶೋಕ್, ಸ್ಥಾನಿಕ ಆಯುಕ್ತರಾದ ಭೇವಹಳ್ಳಿ ಶಂಕರ್, ರಮೇಶ್ ನಾಯಕ್, ಖಚಾಂಚಿ ಉಮೇಶ್, ಕಾರ್ಯದರ್ಶಿ ನಾರಾಯಣಸ್ವಾಮಿ, ಜಂಟಿ ಕಾರ್ಯದರ್ಶಿ ಉಮಾದೇವಿ, ಸಹ ಕಾರ್ಯದರ್ಶಿ ಸ್ಕೌಟ್ ಬಾಬು, ತರಬೇತಿ ಆಯುಕ್ತರಾದ ಮುನಿನಾರಾಯಣಪ್ಪ, ಗೌರಬಾಯಿ ಇದ್ದರು.