ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಪಟ್ಟಣದ ನಾಗೂರ ರಸ್ತೆಯಲ್ಲಿನ ಬಸವನ ಕಟ್ಟೆಯ ಬನ್ನಿ ಮರಕ್ಕೆ ಸಂಪ್ರದಾಯದಂತೆ ತಾಲೂಕಾಡಳಿತದಿಂದ ಪೂಜೆ ಸಲ್ಲಿಸಿದ ನಂತರ ಬನ್ನಿ ಮುಡಿಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ವಿಜಯದಶಮಿ ಹಬ್ಬದ ಪೂಜಾ ಕಾರ್ಯವನ್ನು ರಾಮಾಚಾರಿ ಯಜುರ್ವೇದಿ ನಡೆಸಿಕೊಟ್ಟರು.ಪಟ್ಟಣದ ಬಸವೇಶ್ವರ ದೇವಸ್ಥಾನ ಹಾಗೂ ಮಾರುತಿ ದೇವಸ್ಥಾನದಿಂದ ಬಸವೇಶ್ವರ, ಮಾರುತಿ ದೇವರ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಾಗೂರ ರಸ್ತೆಯಲ್ಲಿ ಇರುವ ಬಸವನ ಕಟ್ಟೆಗೆ ಊರಿನ ಪ್ರಮುಖರು ತೆರಳಿದರು. ನಂತರ ಬನ್ನಿ ಮರಕ್ಕೆ, ಎರಡು ಪಲ್ಲಕ್ಕಿಗಳಿಗೆ ತಾಲೂಕಾಡಳಿತ ಪರವಾಗಿ ಕಂದಾಯ ನಿರೀಕ್ಷಕ ಸಂತೋಷ ದೇಸಾಯಿ ಬನ್ನಿ ಮುಡಿಯುವ ಸಂಪ್ರದಾಯಬದ್ದವಾಗಿ ನೆರವೇರಿಸಿದರು.ಪಲ್ಲಕ್ಕಿ ಉತ್ಸವ ಮೆರವಣಿಗೆ ಮರಳಿ ದೇವಸ್ಥಾನ ಆಗಮಿಸಿದ ನಂತರ ಜನರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಬನ್ನಿ ತಗೊಂಡು ಬಂಗಾರದಂಗ ಇರೋಣ ಎಂದು ಪರಸ್ಪರ ಹೇಳುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಈ ಉತ್ಸವ ಮೆರವಣಿಗೆಯಲ್ಲಿ ಬಸನಗೌಡ ಪಾಟೀಲ, ಗ್ರಾಮ ಸಹಾಯಕರಾದ ಅಲ್ಲಾಭಕ್ಷ ವಾಲೀಕಾರ, ಸತೀಶ ವಾಲೀಕಾರ, ಮಹಿಬೂಬ ಕೊರಬು, ಹಿರಿಯರಾದ ಚಂದ್ರಶೇಖರ ಮುರಾಳ, ಆರ್.ಜಿ.ಅಳ್ಳಗಿ, ಅವ್ವಪ್ಪ ರಜಪೂತ ಇತರರು ಇದ್ದರು.