ಮಡಿಕೇರಿಯಲ್ಲಿ ರಾಧಿಕಾ ವಿಶ್ವನಾಥ್ ಅವರ ‘ಒಲವ ಧಾರೆ’ ಲೋಕಾಪ೯ಣೆ

| Published : Dec 20 2023, 01:15 AM IST

ಮಡಿಕೇರಿಯಲ್ಲಿ ರಾಧಿಕಾ ವಿಶ್ವನಾಥ್ ಅವರ ‘ಒಲವ ಧಾರೆ’ ಲೋಕಾಪ೯ಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮಡಿಕೇರಿ ನಗರದ ರೆಡ್ ಬ್ರಿಕ್ಸ್ ಇನ್ ಸಭಾಂಗಣದಲ್ಲಿ ಮಡಿಕೇರಿಯ ರಾಧಿಕಾ ವಿಶ್ವನಾಥ್ ಬರೆದಿರುವ ಒಲವಧಾರೆ ಕವನ ಸಂಕಲನ ಲೋಕಾರ್ಪಣೆ ಕಾಯ೯ಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಆಕಾಶವಾಣಿ ಹಿರಿಯ ಉದ್ಘೋಷಕ ಸುಬ್ರಾಯ ಸಂಪಾಜೆ, ಗೖಹಿಣಿಯೋರ್ವಳು ಮನೆಯವರ ಪಾಲಿಗೆ ಅಮ್ಮ, ಅತ್ತೆ, ಸಹೋದರಿ, ನಾದಿನಿ ಮುಂತಾದ ಸಂಬಂಧ ಮಾತ್ರ ಆಗಿರುವ ಮನಃಸ್ಥಿತಿಯಲ್ಲಿ ಆಕೆಯ ನಿಜವಾದ ಪ್ರತಿಭೆ ಬೆಳಕಿಗೆ ಬರುವುದಿಲ್ಲ

ಕನ್ನಡಪ್ರಭ ವಾರ್ತೆ ಮಡಿಕೇರಿ ಮಹಿಳೆಯರು ಮನೆಯ ನಾಲ್ಕು ಗೋಡೆಗಳ ನಡುವಿನಿಂದ ಹೊರಬಂದಾಗ ಮಾತ್ರ ಅವರ ಮನಸ್ಸಿನಲ್ಲಿನ ಸುಪ್ತ ಪ್ರತಿಭೆ ಹೊರಬರಲು ಸಾಧ್ಯ ಎಂದು ಆಕಾಶವಾಣಿಯ ಹಿರಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಅಭಿಪ್ರಾಯಪಟ್ಟಿದ್ದಾರೆ.

ನಗರದ ರೆಡ್ ಬ್ರಿಕ್ಸ್ ಇನ್ ಸಭಾಂಗಣದಲ್ಲಿ ಮಡಿಕೇರಿಯ ರಾಧಿಕಾ ವಿಶ್ವನಾಥ್ ಬರೆದಿರುವ ಒಲವಧಾರೆ ಕವನ ಸಂಕಲನ ಲೋಕಾರ್ಪಣೆ ಕಾಯ೯ಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೖಹಿಣಿಯೋರ್ವಳು ಮನೆಯವರ ಪಾಲಿಗೆ ಅಮ್ಮ, ಅತ್ತೆ, ಸಹೋದರಿ, ನಾದಿನಿ ಮುಂತಾದ ಸಂಬಂಧ ಮಾತ್ರ ಆಗಿರುವ ಮನಃಸ್ಥಿತಿಯಲ್ಲಿ ಆಕೆಯ ನಿಜವಾದ ಪ್ರತಿಭೆ ಬೆಳಕಿಗೆ ಬರುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಗೖಹಿಣಿಯೋವ೯ಳು ಸಮಾಜದ ಮುಖ್ಯವಾಹಿನಿಗೆ ಬಂದು ತನ್ನ ಸುಪ್ತ ಪ್ರತಿಭೆ ಬೆಳಕಿಗೆ ತಂದಾಗ ಮಾತ್ರ ಆಕೆ ಸಾಧಕಿಯಾಗಿ ಹೊರಹೊಮ್ಮಲು ಸಾಧ್ಯ ಎಂದರು.ಹಿರಿಯ ಲೇಖಕ ಜಿ.ಟಿ. ರಾಘವೇಂದ್ರ ಮಾತನಾಡಿ, ಇಂದಿನ ದಿನಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಲೇಖಕರು, ಕವಿಗಳು ಹೊರಹೊಮ್ಮುತ್ತಿದ್ದಾರೆ. ಇಂಥವರಿಂದ ಸಾಹಿತ್ಯ ಕ್ಷೇತ್ರಕ್ಕೆ ಸುದೀಘ೯ ಕಾಲ ಸ್ಮರಣೀಯವಾಗುವ ಸಾಹಿತ್ಯ ದೊರಕವಂತಾಗಲಿ ಎಂದು ಹಾರೈಸಿದರು.ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಸಾಹಿತ್ಯದ ನಿರಂತರ ಕಲಿಕೆ, ಓದಿನ ಮೂಲಕ ಬರವಣಿಗೆ ಸಿದ್ದಿಸಿಕೊಳ್ಳಲು ಸಾಧ್ಯ ಎಂದರು.ಕವಿಯತ್ರಿ ರಾಧಿಕಾ ತಂದೆ ಅನಂತರಾಮಯ್ಯ ಮಾತನಾಡಿ, ಸಮಾಜಕ್ಕೆ ಒಳಿತಾಗುವಂಥ ಕಾರ್ಯಗಳಿಗೆ ದೇವರ ಅನುಗ್ರಹ ಸದಾ ಇರುತ್ತದೆ ಎಂದು ಹಾರೈಸಿದರು. ಪತ್ರಕತ೯, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ಸಾಹಿತ್ಯ ಪರ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಕನ್ನಡ ಸಾಹಿತ್ಯ ಪರಿಷತ್, ಜಾನಪದ ಪರಿಷತ್, ಸೇರಿದಂತೆ ವಿವಿಧ ಸಾಹಿತ್ಯ ಪರ ಸಂಘಟನೆಗಳಲ್ಲಿ ನೂರಾರು ಲೇಖಕ, ಲೇಖಕಿಯರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದೇ ಇದಕ್ಕೆ ಕಾರಣ ಎಂದರು.

ಲೇಖಕಿ ರಾಧಿಕಾ ವಿಶ್ವನಾಥ್ ಮಾತನಾಡಿ, ಮನಸ್ಸಿನ ಸಂತೋಷಕ್ಕಾಗಿ ಕವಿತೆ ಬರೆಯಲು ಪ್ರಾರಂಭಿಸಿದ ತನಗೆ ಕಾವ್ಯಗಳು ಭಾವಾನುಭೂತಿಯ ಅನಾವರಣಕ್ಕೆ ನೆರವಾದವು. ಅನೇಕರ ಪ್ರಶಂಸೆಯ ನುಡಿಗಳೇ ಪ್ರೋತ್ಸಾಹ ನೀಡುವ ಮೂಲಕ 108 ಕವನಗಳ ಒಲವ ಧಾರೆ ಕಾವ್ಯ ಸಂಕಲನ ಪ್ರಕಟಿಸಲು ಸಾಧ್ಯವಾಯಿತು ಎಂದು ಸ್ಮರಿಸಿಕೊಂಡರು.ಕೖಷ್ಣವೇಣಿ ಪ್ರಸಾದ್ ಮುಳಿಯ ಪ್ರಾರ್ಥಿಸಿದರು. ವಿಜಯಲಕ್ಷ್ಮೀ ಚೇತನ್ ನಿರೂಪಿಸಿದರು. ಕೆ.ಕೆ.ವಿಶ್ವನಾಥ್ ಸ್ವಾಗತಿಸಿದರು. ಗೌರಿ ಹಿರಿಯಣ್ಣ ವಂದಿಸಿದರು. ರಾಧಿಕಾ ವಿಶ್ವನಾಥ್ ವಿರಚಿತ ಕವನಗಳನ್ನು ಆಧರಿಸಿ,ವಿವಿಧ ಗಾಯಕರಿಂದ ಹಾಡುಗಾರಿಕೆ , ಕಾವ್ಯಶ್ರೀ ಕಪಿಲ್ ತಂಡದಿಂದ ನೖತ್ಯವೈವಿಧ್ಯ ಜರುಗಿತು.