ಸಾರಾಂಶ
ತಾಲೂಕಿನ ಹಳೇ ದೇವರಹೊನ್ನಾಳಿಯಲ್ಲಿ ಶ್ರೀಭಗವದ್ ರಾಮಾನುಜಾಚಾರ್ಯರ 1008ನೇ ವರ್ಷದ ಜಯಂತ್ಯುತ್ಸವ ನಿಮಿತ್ತ ಭಾನುವಾರ ರಥೋತ್ಸವ, ಸಾಮೂಹಿಕ ವಿವಾಹ, ಉಪನಯನ, ಶ್ರೀ ಮಠದ 9ನೇ ವರ್ಷದ ಆಚರಣೆ ಕಾರ್ಯಕ್ರಮಗಳು ಜರುಗಿದವು.
- ರಥೋತ್ಸವ, ಸಾಮೂಹಿಕ ವಿವಾಹ, ಉಪನಯನ, ಮಠದ 9ನೇ ವರ್ಷಾಚರಣೆ ಸಂಪನ್ನ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ಹಳೇ ದೇವರಹೊನ್ನಾಳಿಯಲ್ಲಿ ಶ್ರೀಭಗವದ್ ರಾಮಾನುಜಾಚಾರ್ಯರ 1008ನೇ ವರ್ಷದ ಜಯಂತ್ಯುತ್ಸವ ನಿಮಿತ್ತ ಭಾನುವಾರ ರಥೋತ್ಸವ, ಸಾಮೂಹಿಕ ವಿವಾಹ, ಉಪನಯನ, ಶ್ರೀ ಮಠದ 9ನೇ ವರ್ಷದ ಆಚರಣೆ ಕಾರ್ಯಕ್ರಮಗಳು ಜರುಗಿದವು.ಮೇ 3ರಂದು ರಾತ್ರಿ ಶ್ರೀಮಠದಲ್ಲಿ ಪುಣ್ಯಾಹ, ಪಂಚಾಮೃತ ಅಭಿಷೇಕ, ವಿವಿಧ ಹೂವಿನ ಅಲಂಕಾರ, ಮಹಾಮಂಗಳಾರತಿ, ಗಂಗಾ ಪೂಜೆ, ಧ್ವಜಾರೋಹಣ, ರಥಕ್ಕೆ ಕಂಕಣಧಾರಣೆ, ಕಳಶಾರೋಹಣ, ತೀರ್ಥ ಪ್ರಸಾದ ವಿತರನೆ ನಡೆದವು ಎಂದು ಶ್ರೀಮಠದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಎಸ್.ಕೆ. ಗೋಪಾಲಯ್ಯ ತಿಳಿಸಿದರು.
ಮೇ 4ರಂದು ಪ್ರಾತಃಕಾಲ ಸುಪ್ರಭಾತ ಸೇವೆ, ಮಹಾ ಸುದರ್ಶನ ಹೋಮ, ಸಾಮೂಹಿಕ ಉಪನಯನ, ನಂತರ ಅಪ್ಯಾವದಾನ ಸೇವೆ, ಶಾತ್ತುಮೊರೈ ಮಹಾ ಮಂಗಳಾರತಿ ನಡೆಯಿತು. ನಂತರ ವಿವಿಧ ಹೂವುಗಳಿಂದ ಸುಂದರವಾಗಿ ಆಲಂಕೃತಗೊಂಡ ರಥದಲ್ಲಿ ಅಭಿಜಿನ್ ಶುಭ ಮೂಹೂರ್ತದಲ್ಲಿ ಶ್ರೀಮದ್ ರಾಮಾನುಜಾಚಾರ್ಯರ ಅದ್ದೂರಿ ರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಮಂಗಳವಾದ್ಯಗಳೊಂದಿಗೆ ಜರುಗಿತು.ರಥೋತ್ಸವ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಆಗಮಿಸಿದ ನಂತರ ತೂಗುಯ್ಯಾಲೆ ಸೇವೆ ನಡೆಯಿತು. ನಾಡಿನ ನಾನಾ ಭಾಗಗಳಿಂದ ಸಹಸ್ರಾರು ಭಕ್ತರು ಆಗಮಿಸಿದ್ದರು. ಶ್ರೀ ರಾಮಾನುಜಾಚಾರ್ಯರ ಸಮುದಾಯ ಭವನದಲ್ಲಿ ಅನ್ನಸಂತರ್ಪಣೆ ನಡೆಯಿತು. ಭಕ್ತರು ಆಚಾರ್ಯರಿಗೆ ಭಕ್ತಿಯ ಪೂಜೆ, ವಿವಿಧ ಸೇವೆಗಳನ್ನು ಸಮರ್ಪಿಸಿದರು. ಶ್ರೀಮಠದ ಎಲ್ಲ ಧಾರ್ಮಿಕ ಕೈಂಕರ್ಯಗಳು ಭದ್ರಾವತಿ ರಮೇಶ್ ಭಟ್ ತರಳಿಮಠ, ವೆಂಕಟೇಶ್ ಟಿ. ಕೋಟೆಹಾಳ್ ನೇತೃತ್ವದಲ್ಲಿ ಜರುಗಿದವು.
ಕಾರ್ಯಕ್ರಮದಲ್ಲಿ ಶ್ರೀ ವೈಷ್ಣವ ಸಮಾಜದ ದೇವರಹೊನ್ನಾಳಿ, ಮುಖಂಡರು ಹಾಗೂ ಶ್ರೀಮಠದ ಕಾರ್ಯಕಾರಿ ಮಂಡಳಿ ಗೌರವಾಧ್ಯಕ್ಷ ಎಸ್. ವೆಂಕಟರಾವ್, ಅಧ್ಯಕ್ಷ ಎಸ್.ಕೆ. ಗೋಪಾಲಯ್ಯ, ಉಪಾಧ್ಯಕ್ಷ ಆರ್. ರಂಗನಾಥ್, ಕಾರ್ಯದರ್ಶಿ ಎಸ್.ಕೆ. ರಾಜಕುಮಾರ್, ಖಜಾಂಚಿ ಎನ್.ರಂಗನಾಥ್, ನಿರ್ದೇಶಕರಾದ ಎಸ್.ಶೇಷಯ್ಯ, ಎಸ್.ಎಂ. ವೆಂಕಟೇಶ್, ಎಸ್.ಕೆ. ಹನುಮಂತಯ್ಯ, ಆರ್.ಪಿ. ರವಿಕುಮಾರ್, ಎ.ಪ್ರಕಾಶ್, ಕೇಶವಮೂರ್ತಿ, ಗೋಪಾಲಕೃಷ್ಣ, ಅಶ್ವತ್ ನಾರಾಯಣ, ಗ್ರಾಮದ ಮುಖಂಡರು ಭಾಗವಹಿಸಿದ್ದರು.- - - -4ಎಚ್.ಎಲ್.ಐ1:
ಹೊನ್ನಾಳಿ ತಾಲೂಕಿನ ಹಳೇ ದೇವರಹೊನ್ನಾಳಿಯಲ್ಲಿ ಭಾನುವಾರ ಶ್ರೀಭಗವದ್ ರಾಮಾನುಚಾಚಾರ್ಯರ 1008ನೇ ಜಯಂತ್ಯುತ್ಸವ ಅಂಗವಾಗಿ ರಥೋತ್ಸವ, ಧಾರ್ಮಿಕ ಕೈಂಕರ್ಯಗಳು ಜರುಗಿದವು.